ಕನ್ನಡ ಕಿರುತೆರೆ ಕಾರ್ಯಕ್ರಮಕ್ಕೆ ಬರ್ತಾರೆ ಇಳಯರಾಜ
ಸಂಗೀತ ಲೋಕದ ಅಧಿಪತಿ ಇಳಯರಾಜ ಅವರು ಈಗ ಕನ್ನಡದ ಒಂದು ಕಾರ್ಯಕ್ರಮಕ್ಕೆ ಅತಿಥಿಯಾಗಿ ಬರುತ್ತಿದ್ದಾರೆ. ಹೌದು, ಈ ವಿಷಯವನ್ನು ಸಂಗೀತ ನಿರ್ದೇಶಕ ಹಂಸಲೇಖ ಅವರು ಹಂಚಿಕೊಂಡಿದ್ದಾರೆ.
ಜೀ ಕನ್ನಡ ವಾಹಿನಿಯ ಸರಿಗಪಮ ಕಾರ್ಯಕ್ರಮದ ಸೀಸನ್ 15 ಶುರುವಾಗಿ ಎರಡು ವಾರಗಳು ಕಳೆದಿದೆ. ಈ ಬಾರಿಯ ಕಾರ್ಯಕ್ರಮಕ್ಕೆ ಇಳಯರಾಜ ಅವರು ಆಗಮಿಸಲಿದ್ದಾರೆ. ಕಳೆದ ಸಂಚಿಕೆಯ ನಡುವೆ ಮಾತನಾಡಿದ ಹಂಸಲೇಖ ಈ ಸೀಸನ್ ನಲ್ಲಿ ಇಳಯರಾಜ ಅವರನ್ನು ಕರೆದುಕೊಂಡು ಬರುತ್ತೇನೆ ಎಂದು ಹೇಳಿದ್ದಾರೆ.

ಕಳೆದ ಬಾರಿ ಈ ಕಾರ್ಯಕ್ರಮಕ್ಕೆ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಆಗಮಿಸಿದ್ದು, ಈ ಸಲ ಇಳಯರಾಜ ಕಾರ್ಯಕ್ರಮ ಆಕರ್ಷಣೆ ಆಗಲಿದ್ದಾರೆ.

1000ಕ್ಕೂ ಅಧಿಕ ಸಿನಿಮಾಗೆ ಸಂಗೀತ ನೀಡಿರುವ ಇಳಯರಾಜ ಅವರು ಇಂದಿಗೂ ಅದೇ ಫಾರ್ಮ್ ಉಳಿಸಿಕೊಂಡಿದ್ದಾರೆ.
More from Filmibeat
English summary
Music director Ilayaraja will be the guest for Zee Kannada channel's popular show 'Sarigamapa Season 15'.
ilayaraja arjun janya vijay prakash hamsalekha reality show zee kannada tv ಇಳಯರಾಜ ವಿಜಯ ಪ್ರಕಾಶ್ ಅರ್ಜುನ್ ಜನ್ಯ ಹಂಸಲೇಖ ಜೀ ಕನ್ನಡ ಟಿವಿ


Click it and Unblock the Notifications











