Don't Miss!
- News ಕೋವಿಡ್ ಸಮಯದಲ್ಲಿ ನಾನು ತಪ್ಪು ಮಾಡಿದ್ದೇನೆಂಬುದು ಅಪಪ್ರಚಾರ:ಕೆ ಸುಧಾಕರ್
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Lifestyle ಕಂಡ ಕಂಡಲ್ಲಿ ಏಕೆ ಉಗುಳಬಾರದು ಗೊತ್ತಾ? ಈ ವಿಡಿಯೋ ನೋಡಿ..!
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಗಲಿದ ಸಂಕೇತ್ ಕಾಶಿ ನೆನಪುಗಳ ಜೊತೆ ನೀವು ಹೆಜ್ಜೆ ಹಾಕಿ
ಇತ್ತೀಚೆಗಷ್ಟೇ ನಮ್ಮೆಲ್ಲರನ್ನೂ ಅಗಲಿದ ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ನಟ-ರಂಗಕರ್ಮಿ ಸಂಕೇತ್ ಕಾಶಿ (62)ಸದಾ ಕನ್ನಡಿಗರ ಮನದಲ್ಲಿ ಜೀವಂತ .
ಸುಚಿತ್ರಾ ಫಿಲಂ ಸೊಸೈಟಿ ಆವರಣದಲ್ಲಿಯ ಭಾನು ನೆನಪಿನ 'ನಾಣಿ ಅಂಗಳ'ದಲ್ಲಿ, ಆಗಸ್ಟ್ 26, ಶುಕ್ರವಾರ, ಸಂಜೆ ಸರಿಯಾಗಿ 4 ಗಂಟೆಗೆ ಲಿಂಗೈಕ್ಯರಾದ ಖ್ಯಾತ ನಟ ಸಂಕೇತ್ ಕಾಶಿ (ಆಗಸ್ಟ್ 6ಕ್ಕೆ ನಿಧನ) ಅವರ ಕೆಲವು ನೆನಪುಗಳನ್ನು ಮೆಲುಕು ಹಾಕಲಿದ್ದಾರೆ.[ಕನ್ನಡ ಚಿತ್ರರಂಗದ ಹಿರಿಯ ನಟ ಸಂಕೇತ್ ಕಾಶಿ ನಿಧನ]
ಹಲವಾರು ಸಿನಿಮಾಗಳಲ್ಲಿ ಕಾಮಿಡಿ ನಟನಾಗಿ, ಪೋಷಕ ಪಾತ್ರ ವಹಿಸಿದ ದಿವಂಗತ ಸಂಕೇಶ್ ಕಾಶಿ ಅವರಿಗೆ ಈ ಮೂಲಕ ಕನ್ನಡ ಚಿತ್ರರಂಗದ ಹಿರಿಯ ಗಣ್ಯರು ನುಡಿ ನಮನ ಸಲ್ಲಿಸಲಿದ್ದಾರೆ.
ಈ 'ನಾಣಿ ಅಂಗಳ'ದಲ್ಲಿ ಸಚಿವೆ ಮತ್ತು ರಂಗಭೂಮಿ ನಟಿ ಉಮಾಶ್ರೀ, ನಟ ನವರಸ ನಾಯಕ ಜಗ್ಗೇಶ್, ರಂಗಭೂಮಿ ನಟಿ ಕಮ್ ನಿರ್ದೇಶಕಿ ಬಿ.ಜಯಶ್ರೀ ಹಾಗೂ ಸಂಕೇತ್ ಕಾಶಿ ಅವರಿಗೆ ಬ್ರೇಕ್ ಕೊಟ್ಟ 'ಉಲ್ಟಾ ಪಲ್ಟಾ' ಚಿತ್ರದ ನಿರ್ದೇಶಕ ಎನ್.ಎಸ್ ಶಂಕರ್ ಮತ್ತಿತ್ತರು ಭಾಗವಹಿಸಿ ಸಂಕೇತ್ ಕಾಶಿ ಅವರ ಬಗೆಗಿನ ನೆನಪುಗಳನ್ನು ಹಂಚಿಕೊಳ್ಳಲಿದ್ದಾರೆ.[ವೀರಶೈವ ವೇದಿಕೆಯಿಂದ ಸಂಕೇತ್ ಕಾಶಿಗೆ ನಮನ]
ಅಲ್ಲದೆ ಈ ಕಾರ್ಯಕ್ರಮದ ಅಂತ್ಯದಲ್ಲಿ ಕಾಶಿಯವರೇ ಹುಟ್ಟುಹಾಕಿದ ' ಸಮುದಾಯ " ತಂಡದ ಗುಂಡಣ್ಣ ಮತ್ತು ಗೆಳೆಯರು 'ಕತ್ತಲೆ ದಾರಿ ದೂರ' ನಾಟಕದ ತುಣುಕನ್ನು ಪ್ರದರ್ಶಿಸಲಿದ್ದಾರೆ .
ಕಾಶಿಯವರ ಅಭಿಮಾನಿಗಳು, ರಂಗದ ಸ್ನೇಹಿತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಅದ್ಭುತ ಕಲಾವಿದನಿಗೆ ಭಾವಪೂರ್ಣ ವಿದಾಯ ಹೇಳುವ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಬೇಕೆಂಬುದು ಆಯೋಜಕರಾದ ಜಗದೀಶ್ ಮಲ್ನಾಡ್ ಅವರ ಮನವಿ .
ಬನ್ನಿ ನಾವು-ನೀವು ಎಲ್ಲರೂ ಕಾಶಿ ನೆನಪಿನಂಗಳದಲ್ಲಿ ಸೇರೋಣ.
ಕಾರ್ಯಕ್ರಮ
:
ಕಾಶಿ
ಒಂದು
ನೆನಪು
ಸ್ಥಳ
:
ಸುಚಿತ್ರ
ಫಿಲಂ
ಸೊಸೈಟಿ
.
ಬೆಂಗಳೂರು
ದಿನಾಂಕ
:
26/8/2016,
ಶುಕ್ರವಾರ