Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬೆಂಗಳೂರಿನ ಬೀದಿಗಳಲ್ಲಿ ಬುಲೆಟ್ ಮೇಲೆ ಪುನೀತ್-ಚಿಕ್ಕಣ್ಣ ಸವಾರಿ
Recommended Video
ಜೀನ್ಸ್, ಟಿ-ಶರ್ಟ್, ಜಾಕೆಟ್ ಧರಿಸಿ ಟಿಪ್ ಟಾಪ್ ಆಗಿ ರೆಡಿ ಆಗಿದ್ದ ಅಣ್ಣಾವ್ರ ಮಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಂದು ಬೆಂಗಳೂರಿನ ಕೆಲ ರಸ್ತೆಗಳಲ್ಲಿ ಹಸಿರು ಬಣ್ಣದ ರಾಯಲ್ ಎನ್ ಫೀಲ್ಡ್ ಬುಲೆಟ್ ರೈಡ್ ಮಾಡುತ್ತಿದ್ದರು.
ಅಪ್ಪು ಬುಲೆಟ್ ರೈಡ್ ಮಾಡ್ತಿದ್ರೆ, ಅವರ ಹಿಂದೆ ಚಿಕ್ಕಣ್ಣ ಆಸೀನರಾಗಿದ್ದರು. ಅಲ್ಲಿಗೆ, ನಾವು ಹೇಳ್ತಿರೋದು 'ರೀಲ್' ಸ್ಟೋರಿ ಅಂತ ನಿಮಗೆ ಅರ್ಥ ಆಗಿರಬೇಕು.
ಹೌದು, ಮೈಸೂರು ಹಾಗೂ ಬಳ್ಳಾರಿಯಲ್ಲಿ ಶೂಟಿಂಗ್ ಪ್ಯಾಕಪ್ ಮಾಡಿದ ಬಳಿಕ 'ನಟ ಸಾರ್ವಭೌಮ' ಚಿತ್ರತಂಡ ಸದ್ಯ ಬೆಂಗಳೂರಿನಲ್ಲಿ ಶೂಟಿಂಗ್ ನಡೆಸುತ್ತಿದೆ. ಬೆಂಗಳೂರಿನ ಕೆಲ ರಸ್ತೆಗಳಲ್ಲಿ ಅಪ್ಪು ಬೈಕ್ ರೈಡ್ ಮಾಡುತ್ತಿರುವ ದೃಶ್ಯಗಳನ್ನು ಇಂದು ಚಿತ್ರೀಕರಿಸಲಾಯಿತು. ಅದರ ಎಕ್ಸ್ ಕ್ಲೂಸಿವ್ ಫೋಟೋ ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ಲಭ್ಯವಾಗಿದೆ.
ದೊಡ್ಮನೆ ಊಟದ ರುಚಿ ಸವಿದ 'ನಟ ಸಾರ್ವಭೌಮ' ತಂಡ
ಇವತ್ತಿನ ಶೂಟಿಂಗ್ ಮುಗಿದ ಮೇಲೆ, 'ನಟ ಸಾರ್ವಭೌಮ' ತಂಡಕ್ಕೆ 'ದೊಡ್ಮನೆ' ಊಟದ ರುಚಿ ಸವಿಯುವ ಅವಕಾಶ ಲಭಿಸಿತ್ತು. ಚಿತ್ರದ ನಿರ್ದೇಶಕ ಪವನ್ ಒಡೆಯರ್, ಹಾಸ್ಯ ನಟ ಚಿಕ್ಕಣ್ಣ ಹಾಗೂ ಟೀಮ್ ಇವತ್ತು ಅಪ್ಪು ಮನೆಯಲ್ಲಿಯೇ ಒಟ್ಟಿಗೆ ಊಟ ಮಾಡಿದ್ದಾರೆ. ಪುನೀತ್ ಪತ್ನಿ ಅಶ್ವಿನಿ ಅವರ ಕೈರುಚಿ ಸವಿದು ಟ್ವಿಟ್ಟರ್ ನಲ್ಲಿ ಸಂತಸ ಹಂಚಿಕೊಂಡಿದ್ದಾರೆ ನಿರ್ದೇಶಕ ಪವನ್ ಒಡೆಯರ್.
Today lunch at Appu sir's house... Thanks to Ashwini madm sambarrr, puri deserts, awesome food 😋😋😋 whole my direction crew enjoyed. pic.twitter.com/cW33H4pIh4
— Pavan Wadeyar (@PavanWadeyar) June 14, 2018
ಅಂದ್ಹಾಗೆ, 'ರಣವಿಕ್ರಮ' ಬಳಿಕ ಪುನೀತ್ ರಾಜ್ ಕುಮಾರ್ ಹಾಗೂ ಪವನ್ ಒಡೆಯರ್ ಒಂದಾಗಿರುವುದು 'ನಟ ಸಾರ್ವಭೌಮ' ಚಿತ್ರದಲ್ಲಿಯೇ. ರಾಕ್ ಲೈನ್ ವೆಂಕಟೇಶ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅಪ್ಪುಗೆ ರಚಿತಾ ರಾಮ್ ಜೋಡಿ ಆಗಿದ್ದಾರೆ.