Don't Miss!
- News Mukhtar Ansari: ಗ್ಯಾಂಗ್ಸ್ಟರ್-ರಾಜಕಾರಣಿ ಮುಖ್ತಾರ್ ಅನ್ಸಾರಿ ಸಾವು
- Lifestyle ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಬಾಹುಬಲಿ' ಆಯ್ತು, 'ಉಪ್ಪಿಟು' ಗಣೇಶ ಉಲ್ಟಾ ನಿಂತ ನೋಡಿ..
'ವೀರಪ್ಪನ್' ಗಣೇಶ ಆಯ್ತು, ಕೂಲಿಂಗ್ ಗ್ಲಾಸ್ ಗಣೇಶ ಕೂಡ ಬಂದು ಹೋಯ್ತು. 'ಒಬಾಮಾ' ಮತ್ತು 'ಬಿನ್ ಲಾಡೆನ್' ಗಣೇಶ ಔಟ್ ಡೇಟೆಡ್ ಬಿಡಿ. ಈಗೇನಿದ್ದರೂ 'ಉಪ್ಪಿ-2' ಹವಾ.
ಹೌದು, ಗಣಪತಿಗೂ ಕಡುಬು, ಕರ್ಜಿಕಾಯಿ, ಮೋದಗ ಬಿಟ್ಟು ಈ ಬಾರಿ 'ಉಪ್ಪಿಟ್ಟು' ಬಯಕೆ ಆಗಿದೆ. ಅದಕ್ಕೆ ಸಾಕ್ಷಿ ಇಲ್ಲಿದೆ ನೋಡಿ....
ಯೆಸ್, ಗಣೇಶ-ಗೌರಿ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿ. ವಿಧವಿಧವಾದ ಗಣಪತಿ ಪ್ರತಿಮೆಗಳು ತಯಾರಾಗುತ್ತಿರುವಾಗಲೇ 'ಉಪ್ಪಿಟ್ಟು' ಗಣಪತಿ ಕೂಡ ರೆಡಿಯಾಗಿ ತಲೆಕೆಳಗಾಗಿ ನಿಂತಿದ್ದಾನೆ.
'ಉಪ್ಪಿ-2' ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಹೀಗೆ ತಲೆಕೆಳಗಾಗಿ ನಿಂತುಕೊಂಡು ಎಲ್ಲರ ತಲೆಗೆ ಹುಳ ಬಿಟ್ಟಿದ್ದರು. ಉಪೇಂದ್ರ ಅವರ ಈ ಪೋಸ್ ಸಖತ್ ಪಾಪ್ಯುಲರ್ ಆಗಿತ್ತು. ಆ ಜನಪ್ರಿಯತೆಗೆ ಈ ಗಣೇಶ ಉತ್ತಮ ಉದಾಹರಣೆ. [ನರ್ತಕಿ ಚಿತ್ರಮಂದಿರದ ಮುಂದೆ 'ಉಪ್ಪಿ-2' ಸರ್ಕಸ್]
ಅಸಲಿಗೆ, ಈ ಉಪ್ಪಿಟ್ಟು ಗಣೇಶನ ಫೋಟೋ ವಾಟ್ಸ್ ಆಪ್ ನಲ್ಲಿ ಹರಿದಾಡುತ್ತಿದೆ. ಇದರ ತಯಾರಕರು ಯಾರು ಅನ್ನೋದು ಮಾತ್ರ ಯಾರಿಗೂ ಗೊತ್ತಿಲ್ಲ.
'ಬಾಹುಬಲಿ' ಗಣೇಶನ ನಂತ್ರ ಈಗ ಉಪ್ಪಿಟ್ಟು ಗಣೇಶ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ['ಬಾಹುಬಲಿ' ಗಣೇಶ ಬಂದ ನೋಡಿ...]