ಚಿತ್ರಗಳು ; ಬೆಂಗಳೂರಿಗೆ ಬಂದ ತೆಲುಗು ನಟ ಅಲ್ಲು ಅರ್ಜುನ್.!
ಕರ್ನಾಟಕದಲ್ಲಿ, ಅದ್ರಲ್ಲೂ ಬೆಂಗಳೂರಿನಲ್ಲಿ ತೆಲುಗು ಚಿತ್ರಗಳಿಗೆ ಇರುವ ಬೇಡಿಕೆಯನ್ನು ಮನಗಂಡಿರುವ ಟಾಲಿವುಡ್ ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್, ತಮ್ಮ ಚಿತ್ರದ ಪ್ರಚಾರ ಸಲುವಾಗಿ ಬೆಂಗಳೂರಿಗೆ ಬಂದಿದ್ದಾರೆ.
ಅಲ್ಲು ಅರ್ಜುನ್ ಅಭಿನಯಿಸಿರುವ 'ಸರೈನೋಡು' ಚಿತ್ರ ನಾಳೆ (ಏಪ್ರಿಲ್ 22) ವಿಶ್ವದಾದ್ಯಂತ ಬಿಡುಗಡೆ ಆಗುತ್ತಿರುವ ಕಾರಣ, ಚಿತ್ರದ ಪ್ರಮೋಷನ್ ಗಾಗಿ ಸಿಲಿಕಾನ್ ಸಿಟಿಯ 'ದಿ ಚಾನ್ಸರಿ ಹೋಟೆಲ್' ನಲ್ಲಿ ಅಲ್ಲು ಅರ್ಜುನ್ ಪ್ರತ್ಯಕ್ಷವಾದರು.

'ದಿ ಚಾನ್ಸರಿ ಹೋಟೆಲ್'ನಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿ ಗೋಷ್ಠಿಯಲ್ಲಿ ತಮ್ಮ ಚಿತ್ರ 'ಸರೈನೋಡು' ಬಗ್ಗೆ ಅಲ್ಲು ಅರ್ಜುನ್ ಮಾತನಾಡಿದರು. [ಅಲ್ಲು ಅರ್ಜುನ್ ಚಿತ್ರಕ್ಕೆ ಕನ್ನಡಿಗ ರವಿವರ್ಮಾ ಸಾಹಸ]
ಬೋಯಪಾಟಿ ಶ್ರೀನು ಆಕ್ಷನ್ ಕಟ್ ಹೇಳಿರುವ 'ಸರೈನೋಡು' ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆ ರಾಕುಲ್ ಪ್ರೀತ್ ಸಿಂಗ್ ಡ್ಯುಯೆಟ್ ಹಾಡಿದ್ದಾರೆ. ಕ್ಯಾತರೀನ್ ತೆರೆಸಾ, ಶ್ರೀಕಾಂತ್, ಆದಿ ಸೇರಿದಂತೆ ದೊಡ್ಡ ಕಲಾವಿದರ ದಂಡು ಚಿತ್ರದಲ್ಲಿದೆ.
'ದಿ ಚಾನ್ಸರಿ ಹೋಟೆಲ್'ನಲ್ಲಿ ಅಲ್ಲು ಅರ್ಜುನ್ ಸುದ್ದಿ ಗೋಷ್ಠಿ ನಡೆಸಿದ ಫೋಟೋ ಗ್ಯಾಲರಿ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳಲ್ಲಿ ನೋಡಿ....


Click it and Unblock the Notifications











