Don't Miss!
- News ಕುಡಿಯುವ ನೀರಿಲ್ಲದೇ ಜನ ಬೆಂಗಳೂರಿಗೆ ಬಾಯ್ ಹೇಳುತ್ತಿದ್ದಾರೆ: ಆರ್.ಅಶೋಕ್
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Lifestyle ಕಂಡ ಕಂಡಲ್ಲಿ ಏಕೆ ಉಗುಳಬಾರದು ಗೊತ್ತಾ? ಈ ವಿಡಿಯೋ ನೋಡಿ..!
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಕುರುಕ್ಷೇತ್ರ' ಸಿನಿಮಾದಲ್ಲಿ ಅಂಬರೀಶ್, ಶ್ರೀನಾಥ್ ಹೀಗೆ ಕಾಣ್ತಾರೆ ನೋಡಿ...
Recommended Video
'ಕುರುಕ್ಷೇತ್ರ' ಸಿನಿಮಾದಲ್ಲಿ 'ದುರ್ಯೋಧನ' ಪಾತ್ರ ನಿರ್ವಹಿಸುತ್ತಿರುವ ನಟ ದರ್ಶನ್ ರವರ ಲುಕ್ ಈಗಾಗಲೇ ಬಹಿರಂಗ ಆಗಿದೆ. 'ದುರ್ಯೋಧನ'ನಾಗಿ ದರ್ಶನ್ ಹೇಗೆ ಕಾಣಿಸಿಕೊಳ್ತಾರೆ ಎಂಬ ಕುತೂಹಲಕ್ಕೆ ಈಗಾಗಲೇ ಬ್ರೇಕ್ ಬಿದ್ದಿದೆ.
ಆದ್ರೆ, 'ಕುರುಕ್ಷೇತ್ರ' ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ನಟ ಅಂಬರೀಶ್ ಹೇಗೆ ಕಾಣಿಸಿಕೊಳ್ಳಬಹುದು, ಉಳಿದ ನಟರ ಲುಕ್ ಹೇಗಿರಬಹುದು ಎಂಬ ಕೌತುಕ ಸಹಜವಾಗಿ ಅನೇಕರಲ್ಲಿ ಇರಬಹುದು.
ಅಂಥವರಿಗಾಗಿ 'ಕುರುಕ್ಷೇತ್ರ' ಅಂಗಳದಿಂದ ನಾವು ಕೆಲ ಫೋಟೋಗಳನ್ನು ಹೊತ್ತು ತಂದಿದ್ದೇವೆ. ಭೀಷ್ಮ ಪಿತಾಮಹ ಹಾಗೂ ಧೃತರಾಷ್ಟ್ರ ಹೇಗ್ ಕಾಣ್ತಾರೆ ಅಂತ ನೀವೇ ನೋಡ್ಕೊಂಡ್ ಬನ್ನಿ...
'ಭೀಷ್ಮ' ಅಂಬರೀಶ್
'ಕುರುಕ್ಷೇತ್ರ' ಸಿನಿಮಾದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ 'ಭೀಷ್ಮ' ಪಾತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ. 'ಭೀಷ್ಮ'ನಾಗಿ ಅಂಬಿ ಹೀಗೆ ಕಾಣ್ತಾರೆ ನೋಡಿ...
ಪ್ರಣಯರಾಜ ಶ್ರೀನಾಥ್
'ಕುರುಕ್ಷೇತ್ರ' ಸಿನಿಮಾದಲ್ಲಿ ನಟ ಶ್ರೀನಾಥ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿಂಹಾಸನದ ಮೇಲೆ ಆಸೀನರಾಗಿರುವ ಶ್ರೀನಾಥ್ ರವರ ದರ್ಬಾರ್ ಹೀಗಿದೆ ನೋಡಿ....
ಹೈದರಾಬಾದ್ ನಲ್ಲಿ ಚಿತ್ರೀಕರಣ
ಕಳೆದ ತಿಂಗಳಿನಿಂದ ಸತತವಾಗಿ ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ 'ಕುರುಕ್ಷೇತ್ರ' ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಈಗಾಗಲೇ ಒಂದು ಹಾಡು ಹಾಗೂ ಹಲವು ಮಹತ್ವದ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ.
ದೊಡ್ಡ ತಾರಾಬಳಗ
ದರ್ಶನ್, ಹರಿಪ್ರಿಯಾ, ರವಿಚಂದ್ರನ್, ಅರ್ಜುನ್ ಸರ್ಜಾ, ಸೋನು ಸೂದ್, ರವಿಚೇತನ್, ಅಂಬರೀಶ್, ಶಶಿಕುಮಾರ್, ಶ್ರೀನಾಥ್, ಲಕ್ಷ್ಮಿ, ಸ್ನೇಹ, ನಿಖಿಲ್ ಕುಮಾರ್ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿ ಇದೆ. ಚಿತ್ರಕ್ಕೆ ನಾಗಣ್ಣ ಆಕ್ಷನ್ ಕಟ್ ಹೇಳುತ್ತಿದ್ದಾರೆ.