Don't Miss!
- News RCB: ಆರ್ಸಿಬಿ ಫ್ರಾಂಚೈಸ್ನಿಂದ ಬೆಂಗಳೂರಿನ ಮೂರು ಕೆರೆಗಳ ಪುನಶ್ಚೇತನ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Lifestyle ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಫೋಟೋ ಆಲ್ಬಂ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಯೋಗೀಶ್-ಸಾಹಿತ್ಯ
ಸ್ಯಾಂಡಲ್ ವುಡ್ ನಲ್ಲಿ ಈಗ ಮದುವೆ ಸುಗ್ಗಿ ಶುರುವಾಗಿದೆ. ನಟ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ನಿಶ್ಚಿತಾರ್ಥದ ಬಳಿಕ ಈಗ ನಟ ಲೂಸ್ ಮಾದ ಯೋಗಿ ಮದುವೆ ಸಂಭ್ರಮ ಜೋರಾಗಿದೆ.
ಚಿತ್ರಗಳು: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಲೂಸ್ ಮಾದ ಯೋಗಿ-ಸಾಹಿತ್ಯ
ಇಂದು ನಟ ಯೋಗೀಶ್ ಮತ್ತು ಸಾಹಿತ್ಯ ವಿವಾಹ ಮಹೋತ್ಸವ ನಡೆದಿದೆ. ತಮ್ಮ ಆಸೆಯಂತೆ ಪ್ರೀತಿಸಿದ ಹುಡುಗಿಯನ್ನೇ ಯೋಗಿ ಕೈ ಹಿಡಿದಿದ್ದಾರೆ. ಕೋಣನಕುಂಟೆಯಲ್ಲಿರುವ ಶ್ರೀ ಕನ್ವೆನ್ಷನ್ ಹಾಲ್ನಲ್ಲಿ ಇಂದು (ಗುರುವಾರ) ಬೆಳಗ್ಗೆ 6 ಗಂಟೆಯ ಶುಭ ಮುಹೂರ್ತದಲ್ಲಿ ಮಾಂಗಲ್ಯಧಾರಣೆ ನೆರವೇರಿದೆ. ಅಂದಹಾಗೆ, ಯೋಗಿ-ಸಾಹಿತ್ಯ ಕಲ್ಯಾಣ ಮಹೋತ್ಸವದ ಫೋಟೋ ಆಲ್ಬಂ ಇಲ್ಲಿದೆ ನೋಡಿ...
ಯೋಗಿ ವೆಡ್ಸ್ ಸಾಹಿತ್ಯ
ನಟ ಯೋಗಿ ತಮ್ಮ ಬಾಲ್ಯದ ಗೆಳತಿ ಸಾಹಿತ್ಯ ಕೈ ಹಿಡಿದಿದ್ದಾರೆ. ತಮ್ಮ ಎರಡು ವರ್ಷದ ಪ್ರೀತಿಯ ಬಳಿಕ ಇದೀಗ ಮದುವೆಯ ಬಂಧನಕ್ಕೆ ಒಳಗಾಗಿದ್ದಾರೆ.
ಸಂಪ್ರದಾಯಬದ್ಧವಾಗಿ ಮದುವೆ
ಯೋಗಿ- ಸಾಹಿತ್ಯ ವಿವಾಹ ಕುರುಬ ಮತ್ತು ಬ್ರಾಹ್ಮಣ ಸಂಪ್ರದಾಯದಂತೆ ನೆರವೇರಿತು.
ಎರಡು ಕುಟುಂಬ ಭಾಗಿ
ವಿವಾಹ ಕಾರ್ಯಕ್ರಮದಲ್ಲಿ ವರ ಮತ್ತು ವಧು ಕುಟುಂಬದವರು, ಆಪ್ತರು ಹಾಗೂ ಸ್ನೇಹಿತರು ಭಾಗಿಯಾಗಿದ್ದರು.
ಮಾಂಗಲ್ಯ ಧಾರಣೆ
ಇಂದು (ಗುರುವಾರ) ಬೆಳಗ್ಗೆ 6 ಗಂಟೆಯ ಶುಭ ಮುಹೂರ್ತದಲ್ಲಿ ಮಾಂಗಲ್ಯ ಧಾರಣೆ ನೆರವೇರಿತು.
ಸಾಂಪ್ರದಾಯಿಕ ಉಡುಗೆ
ಮದುಮಗ ಯೋಗಿ ಪಂಚೆಯುಟ್ಟು ಮದುಮಗಳು ಸಾಹಿತ್ಯ ಗೋಲ್ಡನ್ ಬಣ್ಣದ ಸೀರೆ ತೊಟ್ಟು ಮಿಂಚಿದರು.
ಗೆಳತಿ ಸಾಹಿತ್ಯ ಜೊತೆ ಹಸೆಮಣೆ ಏರಿದ ನಟ ಲೂಸ್ ಮಾದ ಯೋಗೀಶ್
ಶಿವಣ್ಣ ಹಾಜರಿ
ವಿವಾಹ ಕಾರ್ಯಕ್ರಮಕ್ಕೆ ನಟ ಶಿವರಾಜ್ ಕುಮಾರ್ ಹಾಜರಾಗಿ ನೂತನ ಜೋಡಿಗೆ ಶುಭ ಕೋರಿದರು.