Don't Miss!
- News ಬಿವೈ ವಿಜಯೇಂದ್ರ ಭೇಟಿ ಬಳಿಕ ಸಂಸದೆ ಸುಮಲತಾ ಹೇಳಿದ್ದೇನು?
- Sports RCB VS KKR: ಟಾಸ್ ಗೆದ್ದ ಕೆಕೆಆರ್ ಫೀಲ್ಡೀಂಗ್ ಆಯ್ಕೆ: ಆರ್ಸಿಬಿ ತಂಡದಲ್ಲಿ ಇಲ್ಲ ಬದಲಾವಣೆ
- Lifestyle ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
- Automobiles ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಯುಗಾದಿ ಹಬ್ಬದ ಶುಭ ಸಂದರ್ಭದಂದು ನೆರವೇರಿತು 'ಪೈಲ್ವಾನ್' ಮುಹೂರ್ತ
Recommended Video
ಕಿಚ್ಚ ಸುದೀಪ್ ಅಭಿನಯದ ಹೊಸ ಚಿತ್ರಕ್ಕೆ ಯುಗಾದಿ ಹಬ್ಬದಂದೇ ಓಂಕಾರ ಬಿದ್ದಿದೆ. 'ಹೆಬ್ಬುಲಿ' ಬಳಿಕ ಸುದೀಪ್ ಹಾಗೂ ಕೃಷ್ಣ ಒಂದಾಗಿರುವುದು 'ಪೈಲ್ವಾನ್'ಗಾಗಿ. 'ಪೈಲ್ವಾನ್' ಚಿತ್ರದ ಮುಹೂರ್ತ ನಿನ್ನೆ ಅಂದ್ರೆ ಯುಗಾದಿ ಹಬ್ಬದ ಶುಭ ಸಂದರ್ಭದಂದು ನೆರವೇರಿತು.
ಬೆಂಗಳೂರಿನ ಹನುಮಂತನಗರದಲ್ಲಿರುವ ಶ್ರೀರಾಮಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ 'ಪೈಲ್ವಾನ್' ಚಿತ್ರದ ಮುಹೂರ್ತ ಸಮಾರಂಭ ನಡೆಯಿತು. 'ಪೈಲ್ವಾನ್' ಚಿತ್ರದ ಮುಹೂರ್ತದ ಶಾಟ್ ಗೆ ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಕ್ಲಾಪ್ ಮಾಡಿದರು. ನಿರ್ಮಾಪಕಿ ಸ್ವಪ್ನ ಕೃಷ್ಣ ಕ್ಯಾಮರಾ ಸ್ವಿಚ್ ಆನ್ ಮಾಡಿದರು.
'ಪೈಲ್ವಾನ್' ಚಿತ್ರದ ಮುಹೂರ್ತ ನಿನ್ನೆ ಮುಗಿದಿದೆ. ಆದ್ರೆ, ಚಿತ್ರೀಕರಣ ಶುರುವಾಗುವುದು ಏಪ್ರಿಲ್ ತಿಂಗಳಿನಲ್ಲಿ. ಸಿನಿಮಾದಲ್ಲಿ ಬಾಕ್ಸರ್ ಆಗಿ ಕಾಣಿಸಿಕೊಳ್ಳಲಿರುವ ಸುದೀಪ್, ಬಾಕ್ಸಿಂಗ್ ಟ್ರೇನಿಂಗ್ ಪಡೆದುಕೊಳ್ಳುತ್ತಿದ್ದಾರೆ.
ಕಿಚ್ಚ ಸುದೀಪ್ ಈಗ ಕಟ್ಟು ಮಸ್ತಾದ ಪೈಲ್ವಾನ್
ಕೃಷ್ಣ ನಿರ್ದೇಶನದ 'ಹೆಬ್ಬುಲಿ' ಚಿತ್ರಕ್ಕಾಗಿ ಸುದೀಪ್ ಮೇಕ್ ಓವರ್ ಮಾಡಿಕೊಂಡಿದ್ದರು. ಹೊಸ ಹೇರ್ ಸ್ಟೈಲ್ ನಲ್ಲಿ ಮಿಂಚಿದ್ದರು. ಈಗ 'ಪೈಲ್ವಾನ್' ಆಗಲು ಸುದೀಪ್ ಜಿಮ್ ನಲ್ಲಿ ಬೆವರಿಳಿಸುತ್ತಿದ್ದಾರೆ.
ಈಗಾಗಲೇ ಥೈಲ್ಯಾಂಡ್ ಗೂ ಹೋಗಿ ಬಾಕ್ಸಿಂಗ್ ಕಲಿತು ಬಂದಿರುವ ಸುದೀಪ್, ಏಪ್ರಿಲ್ ನಿಂದ 'ಪೈಲ್ವಾನ್' ಸೆಟ್ ಗೆ ಹಾಜರ್ ಆಗಲಿದ್ದಾರೆ. 'ಗಜಕೇಸರಿ', 'ಹೆಬ್ಬುಲಿ' ಅಂತಹ ಚಿತ್ರಗಳನ್ನು ನಿರ್ದೇಶನ ಮಾಡಿರುವ ಕೃಷ್ಣ, 'ಪೈಲ್ವಾನ್'ಗೆ ಡೈರೆಕ್ಟರ್. ಕೃಷ್ಣ ಪತ್ನಿ ಸ್ವಪ್ನ ಕೃಷ್ಣ ಈ ಚಿತ್ರದ ನಿರ್ಮಾಪಕಿ. 'ಹೆಬ್ಬುಲಿ' ಚಿತ್ರದಲ್ಲಿದ ತಂಡವೇ 'ಪೈಲ್ವಾನ್' ಚಿತ್ರದಲ್ಲೂ ಕೆಲಸ ಮಾಡಲಿದೆ.