Don't Miss!
- News ದೇವೇಗೌಡರು ಕಣ್ಣೀರು ಹಾಕುವಂತೆ ಯಾರು ಏನು ಮಾಡಿದ್ದಾರೆ? ಡಿ ಕೆ ಶಿವಕುಮಾರ್ ಹೇಳಿದ್ದೇನು?
- Sports ಟಿ20 ವಿಶ್ವಕಪ್-2024: "ಬಾಗಿಲು ಮುಚ್ಚಿದ್ದೇನೆ" ಎಂದಿದ್ದೇಕೆ ಸ್ಪಿನ್ ಮಾಂತ್ರಿಕ ನರೈನ್
- Lifestyle ರೆಸಿಪಿ: ಮಾವಿನ ಕಾಯಿ ತುರಿದು ಮಾಡುವ ಉಪ್ಪಿನಕಾಯಿ, ಎಣ್ಣೆ ಬಳಸಿಲ್ಲ, ವರ್ಷದವರೆಗೆ ಇಡಲೂ ಬಹುದು
- Technology Google: ಗೂಗಲ್ ಪಿಕ್ಸೆಲ್ 8a ಬೆಲೆ ಮಾಹಿತಿ ಲೀಕ್! ಈ ಫೋನ್ ಫೀಚರ್ಸ್ ಏನು?
- Automobiles ಯುವಕರಿಗೆ ಸಿಹಿಸುದ್ದಿ: ಕೈಗೆಟುಕುವ ಬೆಲೆ, ಮಾಸ್ ಲುಕ್ನಲ್ಲಿ ಬರುತ್ತಿದೆ ಹೊಸ ಬಜಾಜ್ ಪಲ್ಸರ್ 400 ಬೈಕ್
- Finance ಇನ್ಮುಂದೆ ನಿಮ್ಮ ಜಮೀನಿನಲ್ಲಿ ನೀವು ಮನೆ ಕಟ್ಟೋದಕ್ಕೂ ಸರ್ಕಾರದ ಅನುಮತಿ ಅಗತ್ಯ, ಏನಿದು ಹೋಸ ನಿಯಮ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮೆಹಂದಿ, ಅರಿಶಿನ ಶಾಸ್ತ್ರದ ಖುಷಿಯಲ್ಲಿ ರಚಿತಾ ಸಹೋದರಿ ನಿತ್ಯ ರಾಮ್
ಡಿಂಪಲ್ ಕ್ವೀನ್ ನಿವಾಸದಲ್ಲಿ ಸಡಗರ, ಸಂಭ್ರಮ ಮನೆ ಮಾಡಿದೆ. ರಚಿತಾ ರಾಮ್ ಕುಟುಂಬಸ್ಥರ ಮೊಗದಲ್ಲಿ ಮಂದಹಾಸ ಮೂಡಿದೆ. ಬಂಧು-ಮಿತ್ರರಲ್ಲಿ ಸಂತಸ ತುಂಬಿ ತುಳುಕುತ್ತಿದೆ. ಅದಕ್ಕೆ ಕಾರಣ ನಿತ್ಯ ರಾಮ್ ಕಲ್ಯಾಣ.!
ಹೌದು, ರಚಿತಾ ರಾಮ್ ಸಹೋದರಿ.. ನಟಿ ನಿತ್ಯ ರಾಮ್ ಗೆ ಕಂಕಣ ಬಲ ಕೂಡಿ ಬಂದಿದೆ. ಇಂದು (ಡಿಸೆಂಬರ್ 6) ಹೊಸ ಜೀವನಕ್ಕೆ ನಿತ್ಯ ರಾಮ್ ಅಡಿಯಿಡುತ್ತಿದ್ದಾರೆ. ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಉದ್ಯಮಿ ಗೌತಮ್ ಎಂಬುವರ ಜೊತೆಗೆ ನಿತ್ಯ ರಾಮ್ ಹಸೆಮಣೆ ಏರಲಿದ್ದಾರೆ.
ವಿವಾಹ ಮಹೋತ್ಸವಕ್ಕೂ ಮುನ್ನ ನಿತ್ಯ ರಾಮ್ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿತ್ತು. ಮೆಹಂದಿ, ಅರಿಶಿನ ಶಾಸ್ತ್ರ ಮತ್ತು ಸಂಗೀತ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು. ಅದರ ಫೋಟೋಗಳು ಇಲ್ಲಿವೆ, ನೋಡಿರಿ...
ಅರಿಶಿನ ಶಾಸ್ತ್ರದಲ್ಲಿ ನಿತ್ಯ ರಾಮ್
ಮದುವೆಗೂ ಮುನ್ನ ಸಾಂಪ್ರದಾಯಿಕವಾಗಿ ಅರಿಶಿನ ಶಾಸ್ತ್ರದಲ್ಲಿ ನಿತ್ಯ ರಾಮ್ ಪಾಲ್ಗೊಂಡರು. ಅರಿಶಿನ ಶಾಸ್ತ್ರಕ್ಕಾಗಿ ವಿಶೇಷವಾಗಿ ಸಿದ್ಧಪಡಿಸಲಾಗಿದ್ದ ಬಿಳಿ ಬಣ್ಣದ ಉಡುಗೆ ಮತ್ತು ಫ್ಲೋರಲ್ ಆಭರಣವನ್ನ ನಿತ್ಯ ರಾಮ್ ತೊಟ್ಟಿದ್ದರು.
ಡಿಂಪಲ್ ಕ್ವೀನ್ ಮನೆಯಲ್ಲಿ 'ಗಟ್ಟಿಮೇಳ': ನಿತ್ಯ ರಾಮ್ ಗೆ ಕೂಡಿ ಬಂತು ಕಂಕಣ ಬಲ
ಮೆಹಂದಿ ಶಾಸ್ತ್ರ
ಅರಿಶಿನ ಶಾಸ್ತ್ರ ಮುಗಿದ ಬಳಿಕ ಮೆಹಂದಿ ಶಾಸ್ತ್ರ ನಡೆಯಿತು. ಹಳದಿ ಬಣ್ಣದ ಲೆಹಂಗಾ ತೊಟ್ಟಿದ್ದ ವಧು ನಿತ್ಯ ರಾಮ್ ಸಂಭ್ರಮದಿಂದ ಕೈ ಮೇಲೆ ಮದರಂಗಿಯ ಚಿತ್ತಾರ ಬಿಡಿಸಿಕೊಂಡರು. ನಿತ್ಯ ರಾಮ್ ಜೊತೆಗೆ ಕುಟುಂಬಸ್ಥರು, ಸ್ನೇಹಿತರು ಕೂಡ ಕೈಗೆ ಮೆಹಂದಿ ಹಾಕಿಸಿಕೊಂಡರು.
'ನಂದಿನಿ' ಸೀರಿಯಲ್ ನಲ್ಲಿ ನಿತ್ಯ ರಾಮ್ ಬಿಟ್ಟು ಹೋದ ಜಾಗಕ್ಕೆ ಬಂದ್ರು 'ಈ' ನಟಿ.!
ಕಿರುತೆರೆ ನಟ-ನಟಿಯರು ಸಾಕ್ಷಿ
ನಿತ್ಯ ರಾಮ್ ಮೆಹಂದಿ ಶಾಸ್ತ್ರಕ್ಕೆ ಕಿರುತೆರೆ ಲೋಕದ ನಟ-ನಟಿಯರು ಸಾಕ್ಷಿ ಆಗಿದ್ದರು. ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ನಿತ್ಯ ರಾಮ್ ಗೆ ಎಲ್ಲರೂ ಶುಭ ಕೋರಿದರು.
ನಿಶ್ಚಿತಾರ್ಥ ಸಡಗರದಲ್ಲಿ ನಿತ್ಯ ರಾಮ್: ಹುಡುಗ ಯಾರು.?
ಅನು ಪೂವಮ್ಮ ಭಾಗಿ
ನಿತ್ಯ ರಾಮ್ ಮೆಹಂದಿ ಶಾಸ್ತ್ರದಲ್ಲಿ ನಟಿ ಅನು ಪೂವಮ್ಮ ಕೂಡ ಭಾಗವಹಿಸಿದ್ದರು. ನಿತ್ಯ ರಾಮ್ ಮತ್ತು ಅನು ಪೂವಮ್ಮ 'ನಂದಿನಿ' ಧಾರಾವಾಹಿಯಲ್ಲಿ ಒಟ್ಟಿಗೆ ಅಭಿನಯಿಸಿದ್ದರು.
ಪ್ರಪೋಸ್ ಮಾಡಿದ ಭಾವಿ ಪತಿ
ಮೆಹಂದಿ ಶಾಸ್ತ್ರ ಮುಗಿದ ಬಳಿಕ ಸಂಗೀತ ಕಾರ್ಯಕ್ರಮ ನಡೆಯಿತು. ಇಲ್ಲಿ ನಿತ್ಯ ರಾಮ್ ಗೆ ಭಾವಿ ಪತಿ ಗೌತಮ್ ಕೆಂಪು ಗುಲಾಬಿ ಕೊಟ್ಟು ಪ್ರಪೋಸ್ ಮಾಡಿದರು. ಜೊತೆಗೆ ರೋಮ್ಯಾಂಟಿಕ್ ಆಗಿ ಕಿಸ್ ಕೂಡ ಕೊಟ್ಟರು.
ರಚಿತಾ ರಾಮ್ ಮೊಗದಲ್ಲಿ ಮಂದಹಾಸ
ಸಹೋದರಿ ನಿತ್ಯ ರಾಮ್ ಮದುವೆಯನ್ನ ನಟಿ ರಚಿತಾ ರಾಮ್ ಮುಂದೆ ನಿಂತು ನಡೆಸಿಕೊಡುತ್ತಿದ್ದಾರೆ. ಖುಷಿ ಖುಷಿಯಿಂದ ಓಡಾಡುತ್ತಿರುವ ರಚಿತಾ ರಾಮ್ ಮೆಹಂದಿ-ಸಂಗೀತ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದು ಹೀಗೆ...
ಮೊನ್ನೆಯಷ್ಟೇ ನಿಶ್ಚಿತಾರ್ಥ ನಡೆದಿತ್ತು.!
ಮೂರು ದಿನಗಳ ಹಿಂದೆಯಷ್ಟೇ ನಿತ್ಯ ರಾಮ್-ಗೌತಮ್ ನಿಶ್ಚಿತಾರ್ಥ ಸಮಾರಂಭ ನಡೆದಿತ್ತು. ಸರಳವಾಗಿ ನಡೆದ ಎಂಗೇಜ್ ಮೆಂಟ್ ನಲ್ಲಿ ನಿತ್ಯ ರಾಮ್ ಮತ್ತು ಗೌತಮ್ ಉಂಗುರ ಎಕ್ಸ್ ಚೇಂಜ್ ಮಾಡಿಕೊಂಡಿದ್ದರು.
ನಿತ್ಯ ರಾಮ್ ಕುರಿತು...
ಕನ್ನಡ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದಿರುವ ನಟಿ ನಿತ್ಯ ರಾಮ್. 'ಬೆಂಕಿಯಲ್ಲಿ ಅರಳಿದ ಹೂವು', 'ಕರ್ಪೂರದ ಗೊಂಬೆ', 'ರಾಜಕುಮಾರಿ', 'ಎರಡು ಕನಸು', ನಂದಿನಿ' ಧಾರಾವಾಹಿಗಳಲ್ಲಿ ನಿತ್ಯ ರಾಮ್ ನಟಿಸಿದ್ದಾರೆ. ಬರೀ ಕನ್ನಡ ಮಾತ್ರ ಅಲ್ಲ.. ತೆಲುಗಿನ 'ಮುದ್ದು ಬಿಡ್ಡ', ತಮಿಳಿನ 'ಅವಳ್' ಧಾರಾವಾಹಿಗಳಲ್ಲೂ ನಿತ್ಯ ಮಿಂಚಿದ್ದಾರೆ. ಕನ್ನಡದ 'ಮುದ್ದು ಮನಸು' ಸಿನಿಮಾದಲ್ಲಿ ನಿತ್ಯ ರಾಮ್ ಅಭಿನಯಿಸಿದ್ದಾರೆ.