'ಯಶ್-ರಾಧಿಕಾ' ಮದುವೆಗೆ ರಾಜಕೀಯ ನಾಯಕರಿಗೆ ಆಮಂತ್ರಣ
ಡಿಸೆಂಬರ್ 10, 11 ರಂದು ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್ ವುಡ್ ಪ್ರಿನ್ಸಸ್ ರಾಧಿಕಾ ಪಂಡಿತ್ ಅವರ ಮದುವೆ ನಡೆಯಲಿದೆ. ಹೀಗಾಗಿ, ನಟ ಯಶ್ ಎಲ್ಲ ಸ್ಟಾರ್ ನಟರಿಗೆ, ಸಾಹಿತಿಗಳಿಗೆ, ಕಲಾವಿದರಿಗೆ ತಮ್ಮ ಮದುವೆಯ ಆಹ್ವಾನ ಪತ್ರಿಕೆ ನೀಡುತ್ತಿದ್ದಾರೆ.
ಕೇವಲ ಸ್ಯಾಂಡಲ್ ವುಡ್ ಕಲಾವಿದರಿಗೆ ಮಾತ್ರವಲ್ಲ, ರಾಜಕೀಯ ನಾಯಕರಿಗೂ ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಮದುವೆಯ ಕರೆಯೋಲೆಯನ್ನ ಯಶ್ ನೀಡುತ್ತಿದ್ದಾರೆ.[ಸುದೀಪ್, ಗಣೇಶ್, ಜಗ್ಗೇಶ್ ಗೂ 'ಯಶ್-ರಾಧಿಕಾ' ಮದುವೆಯ ಕರೆಯೋಲೆ!]

ಎಸ್ ಎಂ ಕೃಷ್ಣ ಅವರಿಗೆ ಆಹ್ವಾನ
ಕರ್ನಾಟಕದ ಮಾಜಿ ಮುಖ್ಯಮುಂತ್ರಿ ಎಸ್ ಎಂ ಕೃಷ್ಣ ಅವರಿಗೆ, ನಟ ಯಶ್ ತಮ್ಮ ಮದುವೆಯ ಆಮಂತ್ರಣ ನೀಡಿದ್ದಾರೆ.[ಸ್ಯಾಂಡಲ್ ವುಡ್ ದಿಗ್ಗಜರಿಗೆ ಯಶ್ 'ಮದುವೆಯ ಮಮತೆಯ ಕರೆಯೋಲೆ' ]

ಡಾ.ಜಿ.ಪರಮೇಶ್ವರ ಅವರಿಗೆ ಆಮಂತ್ರಣ
ಕರ್ನಾಟಕ ಸರ್ಕಾರದ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರಿಗೆ ರಾಕಿಂಗ್ ಸ್ಟಾರ್ ಯಶ್, ತಮ್ಮ ಮದುವೆಯ ಸಸಿ, ಪುಸ್ತಕದ ಜೊತೆಗೆ ಆಹ್ವಾನ ಪತ್ರಿಕೆ ನೀಡಿದ್ದಾರೆ.['ಪರಿಸರ ಪ್ರೀತಿ' ಜೊತೆಗೆ 'ಪುಸ್ತಕ ಪ್ರೀತಿ' ಮೆರೆದ ಮದುಮಗ ಯಶ್]

ಡಿ ವಿ ಸದಾನಂದಗೌಡ ಅವರಿಗೆ ಕರೆಯೋಲೆ
ಕೇಂದ್ರ ಸರ್ಕಾರದ ಮಂತ್ರಿಯಾಗಿರುವ ಡಿ ವಿ ಸದಾನಂದಗೌಡ ಅವರಿಗೂ ನಟ ಯಶ್ ಮದುವೆಯ ಕರೆಯೋಲೆ ನೀಡಿದ್ದಾರೆ.[ಯಶ್-ರಾಧಿಕಾ ಲಗ್ನಪತ್ರಿಕೆ ಹೇಗಿದೆ? ಯಾರೂ ಗಮನಿಸದ ವಿಶೇಷತೆಗಳೇನು ?]

ಡಿ.ಕೆ ಶಿವಕುಮಾರ್ ಅವರಿಗೆ ಆಹ್ವಾನ
ಕಾಂಗ್ರೆಸ್ ಪಕ್ಷದ ನಾಯಕ, ಸಚಿವ ಡಿ.ಕೆ ಶಿವಕುಮಾರ್ ಅವರಿಗೆ ರಾಕಿಂಗ್ ಸ್ಟಾರ್ ಯಶ್, ತಮ್ಮ ಹಾಗೂ ರಾಧಿಕಾ ಪಂಡಿತ್ ಅವರ ವಿವಾಹಕ್ಕೆ ಬಂದು ಹಾರೈಸುವಂತೆ ಆಹ್ವಾನಿಸಿದ್ದಾರೆ.[ಆಡಂಬರ, ವೈಭವ ಇಲ್ಲದೇ ಸಂಪಿಗೆ ಸಸಿ ಕೊಟ್ಟು 'ಮದುವೆಗೆ ಬನ್ನಿ' ಎಂದ ಯಶ್]

ಆರ್ ಅಶೋಕ್ ಅವರಿಗೂ ಆಮಂತ್ರಣ
ಬಿಜೆಪಿ ಶಾಸಕ ಆರ್ ಅಶೋಕ್ ಅವರಿಗೆ, ನಟ ಯಶ್ ತಮ್ಮ ಮದುವೆಗೆ ಆಮಂತ್ರಿಸಿದ್ದಾರೆ.

ಸಿ ಟಿ ರವಿ ಅವರಿಗೆ ಯಶ್ ಕರೆಯೋಲೆ
ಮತ್ತೊಬ್ಬ ಬಿಜೆಪಿ ಶಾಸಕ ಸಿ ಟಿ ರವಿ ಅವರನ್ನೂ ಕೂಡ ಯಶ್, ತಮ್ಮ ಮದುವೆಗೆ ಪ್ರೀತಿಯಿಂದ ಆಹ್ವಾನಿಸಿದ್ದಾರೆ.[ಯಶ್-ರಾಧಿಕಾ ಮದುವೆ: ಹುಡುಗಿ ಕಡೆಯ 'ಆಹ್ವಾನ ಪತ್ರಿಕೆ' ರೆಡಿ]

ವಿ ಸೋಮಣ್ಣ ಅವರಿಗೆ ಸ್ವಾಗತ
ವಿಧಾನ ಪರಿಷತ್ ಸದಸ್ಯ ವಿ ಸೋಮಣ್ಣ ಅವರಿಗೆ ರಾಕಿಂಗ್ ಸ್ಟಾರ್ ಯಶ್, ಮದುವೆಯ ಆಹ್ವಾನ ಪತ್ರಿಕೆಯನ್ನ ಕೊಟ್ಟು, ತಮ್ಮ ಮದುವೆಗೆ ಬನ್ನಿ ಎಂದು ಸ್ವಾಗತಿಸಿದ್ದಾರೆ.

ಅಶೋಕ್ ಖೇಣಿ ಅವರಿಗೂ ಯಶ್ ಆಹ್ವಾನ
ಬೀದರ್ ಶಾಸಕ ಅಶೋಕ್ ಖೇಣಿ ಅವರಿಗೂ ಯಶ್ ಹಾಗೂ ರಾಧಿಕಾ ಮದುವೆಯ ಆಮಂತ್ರಣ ಸಿಕ್ಕಿದ್ದು, ನಟ ಯಶ್ ಆಹ್ವಾನಿಸಿದ್ದಾರೆ.

ಚೆಲುವರಾಯ ಸ್ವಾಮಿ ಅವರಿಗೆ ಕರೆಯೋಲೆ
ಜೆಡಿಎಸ್ ಬಂಡಾಯ ಶಾಸಕ ಚೆಲುವರಾಯ ಸ್ವಾಮಿಗೆ ಯಶ್ ಅವರ ತಾಯಿ ಪುಷ್ಪ ಮದುವೆಗೆ ಆಹ್ವಾನ ನೀಡಿದ್ದಾರೆ.


Click it and Unblock the Notifications











