Don't Miss!
- News ಈ ವರ್ಷ ಜಗತ್ತಿನಲ್ಲಿ ಒಳ್ಳೆಯದಕ್ಕಿಂತ ಕೆಟ್ಟದ್ದೇ ಕೇಳೋದು ಬಹಳ ಐತಿ; ಮಳೆ,ಬೆಳೆಯ ಕುರಿತು ಬಸವೇಶ್ವರ ಕಾರ್ಣಿಕ ಹೇಳಿದ್ದೇನು?
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ 'ಒಬ್ಬ ವ್ಯಕ್ತಿ' ಸಹಾಯದಿಂದಲೇ ತೆಲುಗು, ಹಿಂದಿಯಲ್ಲಿ 'ಕೆಜಿಎಫ್' ಘರ್ಜಿಸುತ್ತಿದೆ.!
Recommended Video
ರಾಕಿಂಗ್ ಸ್ಟಾರ್ ಯಶ್ ಅಭಿನಯಿಸಿ, ಪ್ರಶಾಂತ್ ನೀಲ್ ನಿರ್ದೇಶನದ 'ಕೆಜಿಎಫ್' ಸಿನಿಮಾ ಇಡೀ ದೇಶದಲ್ಲೇ ಸಂಚಲನ ಸೃಷ್ಟಿಸಿದೆ. ಕನ್ನಡ ಸಿನಿಮಾವೊಂದು ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ.
ಆರಂಭದಲ್ಲಿ ಕೆಜಿಎಫ್ ಸಿನಿಮಾ ಕೇವಲ ಕನ್ನಡದಲ್ಲಿ ಮಾತ್ರ ಬರುವ ಯೋಚನೆಯಲ್ಲಿತ್ತು. ಅದೇ ರೀತಿ ಎರಡು ಚಾಪ್ಟರ್ ಬದಲು ಒಂದೇ ಸಿನಿಮಾವಾಗಿ ತಯಾರಾಗುತ್ತಿತ್ತು. ಆದ್ರೆ, ಚಿತ್ರದ ಮೇಕಿಂಗ್, ಕಥೆಯಲ್ಲಿದ್ದ ರೋಚಕತೆ ನಿರ್ದೇಶಕರ ಜಾಣ್ಮೆಯಿಂದ ಈಗ ಎರಡು ಚಾಪ್ಟರ್ ಮತ್ತು ಬಹುಭಾಷೆಯಲ್ಲಿ ಸಿದ್ಧವಾಗಿದೆ.
ಟ್ವಿಟ್ಟರ್ ನಲ್ಲಿ ಯಶ್ ಹೆಸರು ಬದಲಾವಣೆ: ಕೆಲವರು ಟೀಕೆ, ಕೆಲವರು ಬೆಂಬಲ
ಅಂದ್ಹಾಗೆ, ಕನ್ನಡದ ಸಿನಿಮಾವೊಂದು ಈಗ ಹೊರರಾಜ್ಯಗಳಲ್ಲಿ ಸದ್ದು ಮಾಡುತ್ತಿದೆ. ಅದರಲ್ಲೂ ಹಿಂದಿ ಮತ್ತು ತೆಲುಗಿನಲ್ಲಂತೂ ತಮ್ಮದೇ ಸಿನಿಮಾ ಎಂಬ ಪ್ರಚಾರ ಸಿಕ್ತಿದೆ. ರಿಲೀಸ್ ಗೂ ಮುಂಚೆ ಇಷ್ಟು ಸೌಂಡ್ ಮಾಡ್ತಿರುವ ಕೆಜಿಎಫ್ ಗೆ ಒಬ್ಬ ವ್ಯಕ್ತಿ ಸಹಾಯ ಮಾಡಿದ್ದಾರೆ. ಈ ವ್ಯಕ್ತಿ ನೀಡಿದ ಸಣ್ಣ ನೆರವಿನಿಂದ ಕೆಜಿಎಫ್ ಗಡಿದಾಟಿ ನಿಂತಿದೆ. ಅಷ್ಟಕ್ಕೂ, ಯಾರು ಆ ವ್ಯಕ್ತಿ. ಅವರು ಮಾಡಿದ ಸಹಾಯವೇನು? ಮುಂದೆ ಓದಿ.....
ರಾಜಮೌಳಿಯ ಗಮನ ಸೆಳೆದಿದ್ದ ಕೆಜಿಎಫ್
ಅದಾಗಲೇ 'ಬಾಹುಬಲಿ' ಎಂಬ ಮೆಗಾ ಸಿನಿಮಾವನ್ನ ಮಾಡಿ ಜಗತ್ತಿನ ಗಮನ ಸೆಳೆದಿದ್ದ ಸ್ಟಾರ್ ಡೈರೆಕ್ಟರ್ ರಾಜಮೌಳಿ, ಕನ್ನಡದ ಕೆಜಿಎಫ್ ಸಿನಿಮಾಗೆ ಸಣ್ಣದೊಂದು ಮಟ್ಟದಲ್ಲಿ ನೆರವು ನೀಡಿದ್ದಾರೆ. ಆ ಸಹಾಯವೇ ಒಂದು ದೊಡ್ಡದಾಗಿ ನಿಂತಿದೆ. ಇದನ್ನ ಸ್ವತಃ ರಾಜಮೌಳಿಯೇ ಬಿಚ್ಟಿಟ್ಟಿದ್ದಾರೆ.
ರಾಜಮೌಳಿ ಚಿತ್ರದಲ್ಲಿ ನಟಿಸ್ತಾರಾ ಯಶ್.? ರಾಕಿಂಗ್ ಸ್ಟಾರ್ ಬಿಚ್ಚಿಟ್ಟ ಸತ್ಯ ಇದು.!
ಅದು ಏಪ್ರಿಲ್ ತಿಂಗಳು ಇರಬಹುದು
ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಆರ್.ಆರ್.ಆರ್ ಸಿನಿಮಾದ ಕಥೆಯ ಚರ್ಚೆಗಾಗಿ ರಾಜಮೌಳಿ ಬೆಂಗಳೂರಿಗೆ ಬಂದಿದ್ದರು. ಆ ವೇಳೆ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಉಳಿದುಕೊಂಡಿದ್ದರು. ಅದೇ ಹೋಟೆಲ್ ನಲ್ಲಿ ಯಶ್ ಕೂಡ ಇದ್ದರು. ರಾಜಮೌಳಿ ತಂಗಿದ್ದ ವಿಷ್ಯ ತಿಳಿದ ಯಶ್ ಮತ್ತು ಕೆಜಿಎಫ್ ಚಿತ್ರತಂಡ, ರಾಜಮೌಳಿಯನ್ನ ಭೇಟಿ ಮಾಡಿ ಎರಡು ನಿಮಿಷ ಕಾಲಾವಕಾಶ ಕೇಳಿದ್ರಂತೆ. ನಂತರ ಕೆಜಿಎಫ್ ಸಿನಿಮಾ ವಿಶ್ಯೂಲ್ಸ್ ತೋರಿಸಿದರಂತೆ.
ತಮಿಳು ಸ್ಟಾರ್ ನಟನ ಚಿತ್ರದಲ್ಲಿ ಕೆಜಿಎಫ್ ಡೈಲಾಗ್ ಬಂತು.!
ಕೆಜಿಎಫ್ ದೃಶ್ಯ ನೋಡಿ ರಾಜಮೌಳಿ ಅಚ್ಚರಿ
ಕೆಜಿಎಫ್ ಸಿನಿಮಾದ ಮೂರು ನಿಮಿಷದ ಮೇಕಿಂಗ್ ವಿಡಿಯೋ ರಾಜಮೌಳಿ ನೋಡಿದ್ರಂತೆ. ಈ ಮೇಕಿಂಗ್ ನೋಡಿ ಒಂದು ಕ್ಷಣ ರಾಜಮೌಳಿ ಅಚ್ಚರಿಯಾದರಂತೆ. ಯಾಕಂದ್ರೆ, ವಿಶ್ಯೂಲ್ಸ್ ಅಷ್ಟು ಫ್ರೆಶ್ ಆಗಿತ್ತು. ಒರಿಜಿನಾಲಿಟಿ, ಕ್ವಾಲಿಟಿ ಅಷ್ಟು ರೋಚಕವಾಗಿತ್ತು. ಈ ಸಿನಿಮಾ ಹಿಂದೆ ಮೂರು ವರ್ಷದ ಎಫರ್ಟ್ ಇದೆ ಎಂದು ತಿಳಿದಾಗ ತುಂಬಾ ಖುಷಿ ಪಟ್ಟರಂತೆ. ನಂತರ ನಿರ್ದೇಶಕರು ಇದನ್ನ ಪ್ಯಾನ್ ಇಂಡಿಯಾ ಸಿನಿಮಾ ಮಾಡಬೇಕೆಂದುಕೊಂಡಿದ್ದೀವಿ ಎಂದು ಹೇಳಿದ್ರಂತೆ. ಆಗ ರಾಜಮೌಳಿ ಈ ಸಿನಿಮಾವನ್ನ ದೇಶದಾದ್ಯಂತ ತೆಗೆದುಕೊಂಡು ಹೋಲು ಸಾಧ್ಯಾನಾ ಅಂತ ಯೋಚನೆ ಮಾಡಿದ್ರಂತೆ.
ಅಂದು ಬಂದಿದ್ದು ಸುಳ್ಳು, ಇಂದು ಹೇಳ್ತಿರೋದು ನಿಜ: ರಾಜಮೌಳಿ ಜೊತೆ ಯಶ್.!
ಕೆಲವರಿಗೆ ಫೋನ್ ಮಾಡಿ ಹೇಳಿದ್ರು
ಆದ್ರೆ, 'ಕೆಜಿಎಫ್' ದೃಶ್ಯ ನೋಡಿ ಇದು ಇಡೀ ಇಂಡಿಯಾದ ಸಿನಿಮಾ ಆಗುತ್ತೆ ಎಂದು ನಿರ್ಧರಿಸಿದ ರಾಜಮೌಳಿ ಬಾಲಿವುಡ್ ನ ಖ್ಯಾತ ನಿರ್ಮಾಪಕ ಅನಿಲ್ ತಡಾನಿ ಗೆ ಹಾಗೂ ಟಾಲಿವುಡ್ ನಿರ್ಮಾಪಕ ಸಾಯಿ ಮತ್ತು ಶೋಬು ಅವರಿಗೆ ಪೋನ್ ಮಾಡಿ ಕನ್ನಡದಲ್ಲಿ ಕೆಜಿಎಫ್ ಅಂತ ಒಂದು ಸಿನಿಮಾ ಇದೆ. ಒಮ್ಮೆ ನೋಡಿ, ಇದನ್ನ ಏನಾದರೂ ಮಾಡಬಹುದಾ ಎಂದು ಮನವಿ ಮಾಡಿದ್ದರಂತೆ. ಅದರ ಪರಿಣಾಮ ಇಂದು ಕೆಜಿಎಫ್ ಸಿನಿಮಾ ಇಂಡಿಯಾ ಚಿತ್ರವಾಗಿ ಆಗಿ ನಿಂತಿದೆ.
'ಬಾಹುಬಲಿ'ಯಂತೆ ಕೆಜಿಎಫ್ ಹಿಟ್ ಆಗುತ್ತಾ?
ಬಾಹುಬಲಿ ಚಿತ್ರದ ಹಿಂದೆಯೂ ಇಂತಹದ್ದೇ ಒಂದು ಪರಿಶ್ರಮವಿತ್ತು. ನಿರ್ದೇಶಕರ ಹಾರ್ಡ್ ವರ್ಕ್ ಇತ್ತು. ಕಲಾವಿದರು ಡೆಡಿಕೇಷನ್ ಇತ್ತು. ನಿರ್ಮಾಪಕರ ಧೈರ್ಯ ಇತ್ತು. ಇದೆಲ್ಲದರ ಪರಿಣಾಮ ಬಾಹುಬಲಿ ಎರಡು ಭಾಗವಾಗಿತ್ತು. ಇದೀಗ, ಅಂತಹದ್ದೇ ಪರಿಶ್ರಮ, ತಂಡದಿಂದ ಕೆಜಿಎಫ್ ಆಗಿದೆ. ಈಗ ಬಾಹುಬಲಿಯಂತೆ ಕೆಜಿಎಫ್ ಸಿನಿಮಾನೂ ಆಕರ್ಷಣೆ ಮಾಡಿದೆ. ಅಷ್ಟೇ ದೊಡ್ಡ ಸಕ್ಸಸ್ ಸಿಗುತ್ತಾ ಕಾದುನೋಡಬೇಕಿದೆ.
ಡ್ರೈವರ್ ಮಗನ ಸಾಧನೆ ಕಂಡು ರಾಜಮೌಳಿ ಮುತ್ತಿನಂಥ ಮಾತು