Don't Miss!
- Automobiles Mahindra: ಬೊಲೆರೋ ನಿಯೋ ಪ್ಲಸ್ 9-ಸೀಟರ್ ಕಡಿಮೆ ಬೆಲೆಗೆ ಬಿಡುಗಡೆ: ವಿಶೇಷತೆಗಳೇನು?
- News India Rain: ಮುಂದಿನ ಒಂದು ವಾರ ದೇಶದ ಈ ಭಾಗಗಳಲ್ಲಿ ಸುನಾಮಿ ಮಳೆ ಮುನ್ಸೂಚನೆ-ಎಲ್ಲಲ್ಲಿ?
- Technology Samsung: ಸ್ಯಾಮ್ಸಂಗ್ ಗ್ಯಾಲಕ್ಸಿ ವಾಚ್ 7 ಜುಲೈನಲ್ಲಿ ಲಾಂಚ್ ಆಗುವ ಸಾಧ್ಯತೆ! ಬೆಲೆ, ಫೀಚರ್ಸ್ ಬಗ್ಗೆ ತಿಳಿಯಿರಿ
- Finance ಈ ಎರಡು ದೇಶಗಳಿಗೆ ತಲಾ 10,000 ಟನ್ ಈರುಳ್ಳಿ ರಫ್ತು ಮಾಡಲು ಭಾರತ ಅನುಮತಿ
- Lifestyle ಶ್ರೀರಾಮನ ಸ್ಮರ್ಶಿಸಿದ ಸೂರ್ಯ ರಶ್ಮಿ..! 'ಸೂರ್ಯ ತಿಲಕ'ದ ಪ್ರಯೋಗ ಯಶಸ್ವಿ
- Sports ರೋಹಿತ್ ಮಾತನ್ನು ಗಂಭೀರವಾಗಿ ತೆಗೆದುಕೊಂಡ ದಿನೇಶ್ ಕಾರ್ತಿಕ್; ಟಿ20 ವಿಶ್ವಕಪ್ಗೆ ಆಯ್ಕೆ ಪಕ್ಕಾನಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಡ್ರಗ್ ವಿಚಾರದಲ್ಲಿ ಮತ್ತೊಂದು ಬಾಂಬ್ ಸಿಡಿಸಿದ ಇಂದ್ರಜಿತ್ ಲಂಕೇಶ್
ಡ್ರಗ್ಸ್ ದಂಧೆಯಲ್ಲಿ ಕೇವಲ ಇಬ್ಬರು ಮಾತ್ರ ನಟಿಯರಿದ್ದಾರಾ, ಬೇರೆ ಯಾರೂ ಇಲ್ವಾ? ಇಬ್ಬರು ನಟಿಯರು ಬಿಟ್ಟರೆ ಯಾಕೆ ಇದುವರೆಗೂ ಯಾವ ನಟ, ನಿರ್ದೇಶಕರ ಮಕ್ಕಳನ್ನು, ರಾಜಕಾರಣಿಗಳ ಮಕ್ಕಳನ್ನು ಬಂಧಿಸಿಲ್ಲ ಅಥವಾ ವಿಚಾರಣೆಗೆ ಕರೆದಿಲ್ಲ ಎಂಬ ಅನುಮಾನ ಕಾಡುವುದು ಸಹಜ. ಇದೇ ಅನುಮಾನವನ್ನು ಇಂದ್ರಜಿತ್ ಲಂಕೇಶ್ ವ್ಯಕ್ತಪಡಿಸಿದ್ದಾರೆ.
Recommended Video
ಡ್ರಗ್ಸ್ ವಿಚಾರದಲ್ಲಿ ವಿರುದ್ಧವಾಗಿ ಧ್ವನಿ ಎತ್ತಿದ್ದ ಇಂದ್ರಜಿತ್ ಲಂಕೇಶ್ ಆರಂಭದಿಂದಲೇ ಚಿತ್ರರಂಗದ ಕೆಲವು ಸ್ಟಾರ್ಗಳು, ಹಿರಿಯ ನಿರ್ದೇಶಕರ ಮಕ್ಕಳು, ರಾಜಕಾರಣಿಗಳ ಮಕ್ಕಳು, ಇವೆಂಟ್ ಆಯೋಜಕರು ಭಾಗಿಯಾಗಿದ್ದಾರೆ ಎಂದು ಹೇಳುತ್ತಲೇ ಬಂದಿದ್ದಾರೆ. ಆದ್ರೆ, ಈ ಕೇಸ್ ಗಂಭೀರವಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ ಎಂದು ಇಂದ್ರಜಿತ್ ಬೇಸರ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ....
ಡ್ರಗ್ಸ್ ಪ್ರಕರಣ: ನಟಿಯರ ಖಾಸಗಿ ವಿಡಿಯೋ ಸೋರಿಕೆ ಮಾಡಿದವರ ವಿರುದ್ಧ ಸಿಡಿದೆದ್ದ ನಟಿ ಪಾರುಲ್
ಸುಮ್ಮನೆ ವಿಚಾರಣೆ ಆಗ್ತಿದೆ ಅಷ್ಟೇ
ಪೊಲೀಸರು ಕೆಲಸ ಮಾಡುತ್ತಿದ್ದರೂ ಅವರ ಕೈಕಟ್ಟಿ ಹಾಕಿರುವಂತೆ ಕೆಲಸ ಕಾಣ್ತಿದೆ. ಇಬ್ಬರು ನಟಿಯರನ್ನು ಬಿಟ್ಟರೆ ಬೇರೆ ಯಾರನ್ನು ಬಂಧಿಸಿಲ್ಲ, ನಟ-ನಿರ್ದೇಶಕರ ಮಕ್ಕಳು, ರಾಜಕಾರಣಿಗಳ ಮಕ್ಕಳು ಈ ದಂಧೆಯಲ್ಲಿದ್ದಾರೆ. ಆದರೆ, ಬೇರೆ ಹಿಡಿದು ತನಿಖೆ ಮಾಡುವಂತೆ ಕಾಣುತ್ತಿಲ್ಲ. ಸುಮ್ಮನೆ ತನಿಖೆ ಮಾಡ್ತಿದ್ದಾರೆ ಅನಿಸುತ್ತಿದೆ'' ಎಂದು ಇಂದ್ರಜಿತ್ ಲಂಕೇಶ್ ಬೇಸರ ವ್ಯಕ್ತಪಡಿಸಿದ್ದಾರೆ.
ಸಿಬಿಐ ಸೂಕ್ತ ಮಾರ್ಗ!
ಈ ಪ್ರಕರಣವನ್ನು ಸಿಬಿಐಗೆ ವಹಿಸಿದರೆ ಖಂಡಿತ ಹಲವು ರಾಜಕಾರಣಿಗಳ ಹೆಸರು ಹೊರಗೆ ಬರುತ್ತೆ, ರಾಜಕಾರಣಿಗಳ ಮಕ್ಕಳ ಹೆಸರು ಬರುತ್ತೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ, ಆದ್ರೆ ಅವರ ನಾಯಕರಿಂದಲೇ ತನಿಖೆಗೆ ಅಡ್ಡಗಾಲು ಎದುರಾಗುತ್ತಿದೆ. ಸಿಬಿಐ ತನಿಖೆ ಮಾಡಿದ್ರೆ ಅಸಲಿ ಸತ್ಯ ಹೊರಗೆ ಬರುತ್ತದೆ'' ಎಂದು ಇಂದ್ರಜಿತ್ ಆಗ್ರಹಿಸಿದ್ದಾರೆ.