Don't Miss!
- News ಮಾರುಕಟ್ಟೆಗೆ ಎಂಟ್ರಿ ನೀಡಲು ತಯಾರಾಗಿದೆ ರೆಡ್ಮಿಯ ಇನ್ನೊಂದು ಫೋನ್
- Sports ಟಿ20 ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿಗೆ ಬ್ಯಾಟಿಂಗ್ ಕ್ರಮಾಂಕ ನೀಡಿದ ಆರೋನ್ ಫಿಂಚ್
- Finance ಮುಂಬೈನ ಅಲಿಬಾಗ್ನಲ್ಲಿ 10,000 ಚದರ ಅಡಿ ಜಾಗ ಖರೀದಿಸಿದ ಅಮಿತಾಭ್ ಬಚ್ಚನ್
- Lifestyle ರಾಜ್ಯದಲ್ಲಿ ಮುಂದಿನ 1 ವಾರ ಹವಾಮಾನ ಹೇಗಿರಲಿದೆ? ಎಲ್ಲೆಲ್ಲಿ ಮಳೆಯಾಗಲಿದೆ?
- Technology ಲಾವಾ ಅಗ್ನಿ 2 5G ಮೊಬೈಲ್ ಬೆಲೆಯಲ್ಲಿ ದಿಢೀರ್ ಇಳಿಕೆ; ಗ್ರಾಹಕರಿಗೆ ಖುಷಿ!
- Automobiles ಮಾರುಕಟ್ಟೆಯಲ್ಲಿ ಸುನಾಮಿ ಎಬ್ಬಿಸಲು ಹೊಸ ಟೊಯೊಟಾ ಫಾರ್ಚುನರ್ ಲೀಡರ್ ಎಡಿಷನ್ ಅನಾವರಣ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನೈಟ್ ಕರ್ಫ್ಯೂ: ಚಿತ್ರರಂಗದ ಗಾಯದ ಮೇಲೆ ಉಪ್ಪು
ಕೊರೊನಾ ಎರಡನೇ ಅಲೆ ಚಿತ್ರರಂಗಕ್ಕೆ ಸಂಕಷ್ಟಗಳ ಮೇಲೆ ಸಂಕಷ್ಟ ತರುತ್ತಿದೆ. 50% 'ಆಕ್ಯುಪೆನ್ಸಿ' ಯನ್ನು ಚಿತ್ರಮಂದಿರಗಳ ಮೇಲೆ ಹೇರಿದ್ದು ದೊಡ್ಡ ಹೊಡೆತವಾದರೆ ಈಗ ಜಾರಿ ಮಾಡಲಾಗಿರುವ ರಾತ್ರಿ ಕರ್ಫ್ಯೂ ಚಿತ್ರರಂಗದ ಗಾಯದ ಮೇಲೆ ಬರೆ ಎಳೆದಿದೆ.
Recommended Video
ರಾಜ್ಯದ ಕೆಲವು ಜಿಲ್ಲೆಗಳಲ್ಲಿ ರಾತ್ರಿ 10 ಗಂಟೆ ಮೇಲೆ ರಾತ್ರಿ ಕರ್ಫ್ಯೂ ಜಾರಿ ಮಾಡಲಾಗಿದೆ. ರಾತ್ರಿ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಹಾಗಾಗಿ ಕರ್ಫ್ಯೂ ವಿಧಿಸಲಾಗಿರುವ ಜಿಲ್ಲೆಗಳ ಕೆಲವು ಚಿತ್ರಮಂದಿರಗಳಲ್ಲಿ ದಿನದ ಕೊನೆಯ ಶೋ ಅನ್ನು ರದ್ದು ಮಾಡಲಾಗಿದೆ.
ವಿಡಿಯೋ: ಪವನ್ ಕಲ್ಯಾಣ್ ಅಭಿಮಾನಿಗಳಿಂದ ದಾಂಧಲೆ
'ರಾತ್ರಿ ಕರ್ಫ್ಯೂ ಇರುವ ಕಾರಣ ಐನಾಕ್ಸ್ನ ರಾತ್ರಿ ಶೋ ಗಳನ್ನು ರದ್ದು ಮಾಡಲಾಗಿದೆ' ಎಂದು ಐನಾಕ್ಸ್ ದಕ್ಷಿಣ ಭಾರತ ವ್ಯವಸ್ಥಾಪಕ ಹೇಳಿದ್ದಾರೆ. ಐನಾಕ್ಸ್ನಲ್ಲಿ ರಾತ್ರಿ 9 ಗಂಟೆ ಮೇಲಿನ ಎಲ್ಲ ಶೋಗಳನ್ನು ರದ್ದು ಮಾಡಲಾಗಿದೆ. ಏಪ್ರಿಲ್ 20ರ ವರೆಗೆ ಐನಾಕ್ಸ್ನಲ್ಲಿ ರಾತ್ರಿ ಶೋಗಳು ಇರುವುದಿಲ್ಲ.
ಐನಾಕ್ಸ್ ಮಾತ್ರವೇ ಅಲ್ಲದೆ ಬೇರೆ ಮಲ್ಟಿಫ್ಲೆಕ್ಸ್ಗಳಲ್ಲಿ ಸಹ ರಾತ್ರಿ ಶೋಗಳನ್ನು ರದ್ದು ಮಾಡಲಾಗಿದೆ. ನಗರ ಪ್ರದೇಶದ ಕೆಲವು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿಯೂ ಸಹ ತಡ ರಾತ್ರಿ ಶೋ ಗಳನ್ನು ರದ್ದು ಮಾಡಲಾಗಿದೆ.
ಈಗಾಗಲೇ ಚಿತ್ರಮಂದಿರಗಳಲ್ಲಿ 50% ಸೀಟು ಭರ್ತಿಗಷ್ಟೆ ಅವಕಾಶ ನೀಡಲಾಗಿದೆ. ಈಗ ದಿನದ ಒಂದು ಶೋ ರದ್ದಾದಲ್ಲಿ ಸಿನಿಮಾ ನಿರ್ಮಾಪಕರಿಗೆ ದೊಡ್ಡ ನಷ್ಟವೇ ಆಗಲಿದೆ.
ತಮಿಳುನಾಡು ಚಿತ್ರಮಂದಿರಗಳ ಮೇಲೆ ನಿರ್ಬಂಧ: ಧನುಷ್, ವಿಜಯ್ ಸೇತುಪತಿ ಸಿನಿಮಾಗಳಿಗೆ ಸಂಕಷ್ಟ
ಮಹಾರಾಷ್ಟ್ರ ರಾಜ್ಯದಲ್ಲಿ ಚಿತ್ರಮಂದಿರಗಳನ್ನು ಪೂರ್ಣವಾಗಿ ಬಂದ್ ಮಾಡಲಾಗಿದೆ. ಕರ್ನಾಟಕ, ತಮಿಳುನಾಡು, ಇನ್ನೂ ಕೆಲವು ರಾಜ್ಯಗಳಲ್ಲಿ 50% ಆಸನ ಭರ್ತಿಗಷ್ಟೆ ಅವಕಾಶ ನೀಡಲಾಗಿದೆ. ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಇನ್ನೂ ನಿರ್ಬಂಧ ಹೇರಿಲ್ಲವಾದರೂ ನಿರ್ಬಂಧ ಹೇರುವ ಬಗ್ಗೆ ಚರ್ಚೆ ಜಾರಿಯಲ್ಲಿದೆ.