twitter
    For Quick Alerts
    ALLOW NOTIFICATIONS  
    For Daily Alerts

    ಶ್ರುತಿ ಆರೋಪದ ಬಗ್ಗೆ ಅನುಮಾನ ಮೂಡಿಸುತ್ತಿದೆ ಈ 6 ಅಂಶಗಳು

    |

    ಬಹುಭಾಷಾ ನಟ ಅರ್ಜುನ್ ಸರ್ಜಾ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಮಾಡಿರುವ ನಟಿ ಶ್ರುತಿ ಹರಿಹರನ್, ನಿನ್ನೆ ಸುದ್ದಿಗೋಷ್ಠಿ ನಡೆಸಿ ಹಲವು ವಿಷ್ಯಗಳನ್ನ ಮಾತನಾಡಿದರು. ಆದ್ರೆ, ಸರ್ಜಾ ಮೇಲೆ ದೂರಿರುವ ಯಾವ ವಿಷ್ಯಕ್ಕೂ ದಾಖಲೆ ಮತ್ತು ಸಾಕ್ಷಿಗಳನ್ನ ನೀಡಿಲ್ಲ.

    ಇದು ಸಹಜವಾಗಿ ಶ್ರುತಿ ಹರಿಹರನ್ ಮೇಲೆ ಅನುಮಾನ ಮೂಡಿಸುತ್ತಿದೆ. ಇದೊಂದು ಘಟನೆ ಮಾತ್ರವಲ್ಲ, ಶ್ರುತಿ ಅವರ ಈ MeToo ಅಭಿಯಾನವನ್ನ ಸ್ವಲ್ಪ ಆಳವಾಗಿ ಗಮನಿಸಿದ್ರೆ ಮತ್ತಷ್ಟು ಇಂಟ್ರೆಸ್ಟಿಂಗ್ ಅಂಶಗಳು ಗಮನ ಸೆಳೆಯುತ್ತಿದೆ.

    ಏಳು ದಿನಗಳ ಒಳಗೆ ನಟಿ ಶ್ರುತಿ ಹರಿಹರನ್ ದಾಖಲೆ ಕೊಡಬೇಕು: ಮುನಿರತ್ನ ಏಳು ದಿನಗಳ ಒಳಗೆ ನಟಿ ಶ್ರುತಿ ಹರಿಹರನ್ ದಾಖಲೆ ಕೊಡಬೇಕು: ಮುನಿರತ್ನ

    ಒಂದೂವರೆ ವರ್ಷದ ಹಿಂದೆ ನಡೆದಿದ್ದ ಈ ಘಟನೆಯನ್ನ ಈಗ ಹೇಳಿರುವುದು ತೀವ್ರ ಖಂಡನೆಗೆ ಗುರಿಯಾಗಿದೆ. ಇದನ್ನೆಲ್ಲಾ ಗಮನಿಸಿದ ಜನರು ಲೂಸಿಯಾ ಹುಡುಗಿಯ ಆಪಾದನೆ ಮೇಲೆ ನೆಗಿಟೀವ್ ಆಗಿ ನೋಡವಂತಾಗಿದೆ. ಅಷ್ಟಕ್ಕೂ, ಶ್ರುತಿ ಉತ್ತರಿಸಬೇಕಾಗಿರುವ ಹಾಗೂ ಈ ಪ್ರಕರಣ ಬಗ್ಗೆ ಅನುಮಾನ ಬರಲು ಕಾರಣವಾಗಿರುವ ಆ ಅಂಶಗಳು ಯಾವುದು.? ಮುಂದೆ ಓದಿ.....

    ಇದುವರೆಗೂ ಯಾವುದೇ ಸಾಕ್ಷಿ ಯಾಕೆ ನೀಡಿಲ್ಲ

    ಇದುವರೆಗೂ ಯಾವುದೇ ಸಾಕ್ಷಿ ಯಾಕೆ ನೀಡಿಲ್ಲ

    ಶ್ರುತಿ ಹರಿಹರನ್ ಅವರು ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಹೇಳುತ್ತಿದ್ದಾರೆ. ಅದಕ್ಕೆ ಸಾಕ್ಷಿ ಕೂಡ ಇದೆ ಎಂದಿದ್ದಾರೆ. ಆದ್ರೆ, ಇದುವರೆಗೂ ಯಾವುದೇ ಸಾಕ್ಷಿ-ಆಧಾರ ಬಹಿರಂಗಪಡಿಸಿಲ್ಲ. ಸಾಕ್ಷಿ ಅಥವಾ ಆಧಾರವಿಲ್ಲದೇ ಯಾರೂ ಯಾವುದನ್ನು ನಂಬುವುದಿಲ್ಲ. ಇಂತಹ ಗಂಭೀರವಾದ ಆರೋಪ ಮಾಡಬೇಕಾದರೇ ಸಾಕ್ಷಿಯ ಅಗತ್ಯವಿದೆ. ಫೋನ್ ಸಂಭಾಷಣೆ, ಮೆಸೆಜ್ ಚಾಟ್, ವಾಟ್ಸಾಪ್ ಚಾಟ್ ಅಥವಾ ವಿಡಿಯೋ ರೆಕಾರ್ಡ್ ಇಲ್ಲವಾ ಎಂಬ ಪ್ರಶ್ನೆ ಮಾಡುತ್ತಿದ್ದಾರೆ.

    ಶ್ರುತಿ ಹರಿಹರನ್ ಕೊಟ್ಟ ಏಟಿಗೆ ಐಶ್ವರ್ಯ ಅರ್ಜುನ್ ತಿರುಗೇಟು.!ಶ್ರುತಿ ಹರಿಹರನ್ ಕೊಟ್ಟ ಏಟಿಗೆ ಐಶ್ವರ್ಯ ಅರ್ಜುನ್ ತಿರುಗೇಟು.!

    ಆಗ ನಡೆದಿದ್ದು ಈಗ್ಯಾಕೆ ಹೇಳ್ತಿದ್ದಾರೆ.?

    ಆಗ ನಡೆದಿದ್ದು ಈಗ್ಯಾಕೆ ಹೇಳ್ತಿದ್ದಾರೆ.?

    ಈ ಘಟನೆ ನಡೆದ ಒಂದೂವರೆ ವರ್ಷ ಆಗಿದೆ. ಈಗ ಯಾಕೆ ಹೇಳ್ತಿದ್ದಾರೆ, ಆಗಲೇ ಯಾಕೆ ಹೇಳಿಲ್ಲ ಎಂಬ ಪ್ರಶ್ನೆ ಎಲ್ಲಾ ಕಡೆಯಿಂದಲೂ ಎದುರಾಗ್ತಿದೆ. ಆಗಲೇ ಬಹಿರಂಗವಾಗಿ ಹೇಳಬಹುದಿತ್ತು ಅಲ್ವಾ, ಮಾಧ್ಯಮಗಳು ಇತ್ತು ಹೇಳಬಹುದು, ನಿರ್ದೇಶಕರಿಗೆ ಹೇಳಿ ಆ ಘಟನೆಯನ್ನ ಬಯಲು ಮಾಡಬಹುದು. ಆದ್ರೆ, ಇಷ್ಟು ಸಮಯ ತೆಗೆದುಕೊಂಡು ಹೇಳಲು ಕಾರಣವೇನು.? ಎಂಬ ಅನುಮಾನ ಕಾಡ್ತಿದೆ. ಆದ್ರೆ, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶ್ರುತಿ ಈಗ ಮೀಟೂ ಅಭಿಯಾನದಿಂದ ಧೈರ್ಯ ಬಂದಿದೆ ಎಂದಿದ್ದಾರೆ.

    ಅರ್ಜುನ್ ಸರ್ಜಾ ಹೆಸರನ್ನ ಮಾತ್ರ ಹೇಳಲು ಒಂದು ಕಾರಣ ಇದೆ ಎಂದ ಶ್ರುತಿ ಹರಿಹರನ್.!ಅರ್ಜುನ್ ಸರ್ಜಾ ಹೆಸರನ್ನ ಮಾತ್ರ ಹೇಳಲು ಒಂದು ಕಾರಣ ಇದೆ ಎಂದ ಶ್ರುತಿ ಹರಿಹರನ್.!

    ಈ ಘಟನೆ ಆದ್ಮೇಲೂ ಪಾಸಿಟೀವ್ ಟಾಕ್ ಯಾಕೆ.?

    ಈ ಘಟನೆ ಆದ್ಮೇಲೂ ಪಾಸಿಟೀವ್ ಟಾಕ್ ಯಾಕೆ.?

    'ವಿಸ್ಮಯ' ಚಿತ್ರೀಕರಣದ ವೇಳೆ ಅಸಭ್ಯವಾಗಿ ನಡೆದುಕೊಂಡಿದ್ದರು ಎಂದು ಆರೋಪಿಸಿದ್ದಾರೆ. ಆದ್ರೆ, ಈ ಸಿನಿಮಾ ಬಿಡುಗಡೆ ವೇಳೆಯೂ ಮತ್ತು ಪ್ರೆಸ್ ಮೀಟ್ ಗಳಲ್ಲಿ ಅರ್ಜುನ್ ಸರ್ಜಾ ಬಗ್ಗೆ ಪಾಸೀಟವ್ ಆಗಿ ಮಾತನಾಡಿದ್ದಾರೆ. 'ನಾನು ಅವರ ಅಭಿಮಾನಿ, ಇನ್ನೊಂದು ಸಿನಿಮಾ ಮಾಡ್ಬೇಕು' ಎಂಬ ಮಾತುಗಳನ್ನ ಹಾಗೂ ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದರು. ಇದು ಸಹಜವಾಗಿ ಅನುಮಾನ ಮೂಡಿಸುತ್ತಿದೆ.

    ನನ್ನ ಮಗ ಇಲ್ಲದಿದ್ದಾಗ ಶ್ರುತಿ ಮನೆಗೆ ಬಂದಿದ್ದೇಕೆ.? ಸರ್ಜಾ ತಾಯಿ ಕೆಂಡಾಮಂಡಲನನ್ನ ಮಗ ಇಲ್ಲದಿದ್ದಾಗ ಶ್ರುತಿ ಮನೆಗೆ ಬಂದಿದ್ದೇಕೆ.? ಸರ್ಜಾ ತಾಯಿ ಕೆಂಡಾಮಂಡಲ

    ಎಲ್ಲಿಯೂ ದೂರು ನೀಡಿಲ್ಲ ಯಾಕೆ.?

    ಎಲ್ಲಿಯೂ ದೂರು ನೀಡಿಲ್ಲ ಯಾಕೆ.?

    ಶ್ರುತಿ ಹರಿಹರನ್ ಅವರು ಮಾಡಿರುವುದು ಆರೋಪ ಮಾತ್ರ. ಆದ್ರೆ, ಎಲ್ಲಿಯೂ ದೂರು ದಾಖಲಾಗಿಲ್ಲ. ಫಿಲ್ಮಂ ಚೇಂಬರ್ ಗೆ ಆಗಲಿ ಅಥವಾ ಪೊಲೀಸ್ ಠಾಣೆಯಲ್ಲೂ ಎಲ್ಲೂ ದೂರು ದಾಖಲಾಗಿಲ್ಲ. ಇದು ಚಲನಚಿತ್ರರಂಗಕ್ಕೆ ಸಂಬಂಧಪಟ್ಟಿರುವುದರಿಂದ ವಾಣಿಜ್ಯ ಮಂಡಳಿ ಅಥವಾ ಕಲಾವಿದರ ಸಂಘಕ್ಕೆ ದೂರು ನೀಡಬಹುದಾಗಿತ್ತು. ಬಟ್ ಇದುವರೆಗೂ ಆಗಿಲ್ಲ ಎನ್ನುವುದು ಕುತೂಹಲ. ಸದ್ಯ, ತಮ್ಮ ಕಾನೂನು ತಜ್ಞರ ಜೊತೆ ಈ ವಿಷ್ಯದ ಬಗ್ಗೆ ಚರ್ಚೆ ಮಾಡ್ತಿದ್ದಾರೆ.

    ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ ಆರೋಪ: ಹಿಂದಿದ್ಯಾ ಷಡ್ಯಂತ್ರ, ಪ್ರತೀಕಾರ.?ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ ಆರೋಪ: ಹಿಂದಿದ್ಯಾ ಷಡ್ಯಂತ್ರ, ಪ್ರತೀಕಾರ.?

    ಅರ್ಜುನ್ ಸರ್ಜಾ ಮಾತ್ರ ಯಾಕೆ.?

    ಅರ್ಜುನ್ ಸರ್ಜಾ ಮಾತ್ರ ಯಾಕೆ.?

    ಈ ಹಿಂದೆ ಕಾಸ್ಟಿಂಗ್ ಕೌಚ್ ಬಗ್ಗೆ ಹಲವು ಬಾರಿ ಶ್ರುತಿ ಮಾತನಾಡಿದ್ದಾರೆ. ಆದರೆ ಒಬ್ಬರ ಹೆಸರನ್ನೂ ಉಲ್ಲೇಖ ಮಾಡಿಲ್ಲ. ಅನೇಕ ಬಾರಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇನೆ ಅಂದಿದ್ದರು. ಆದ್ರೀಗ, ಅರ್ಜುನ್ ಸರ್ಜಾ ಹೆಸರನ್ನ ಮಾತ್ರ ಹೇಳಿರುವುದೇಕೆ ಯಾಕೆ.?

    'ವಿಸ್ಮಯ' ಸೆಟ್ ನಲ್ಲಿ ಆಗಿದ್ದೇನು: ನಿರ್ದೇಶಕ ಅರುಣ್ ವೈದ್ಯನಾಥನ್ ಏನಂತಾರೆ.?'ವಿಸ್ಮಯ' ಸೆಟ್ ನಲ್ಲಿ ಆಗಿದ್ದೇನು: ನಿರ್ದೇಶಕ ಅರುಣ್ ವೈದ್ಯನಾಥನ್ ಏನಂತಾರೆ.?

    'ವಿಸ್ಮಯ'ದ ನಂತರವೇ ಕಾಸ್ಟಿಂಗ್ ಕೌಚ್ ಸದ್ದು ಮಾಡಿತ್ತು

    'ವಿಸ್ಮಯ'ದ ನಂತರವೇ ಕಾಸ್ಟಿಂಗ್ ಕೌಚ್ ಸದ್ದು ಮಾಡಿತ್ತು

    ಅಂದ್ಹಾಗೆ, ಶ್ರುತಿ ಹರಿಹರನ್ ಈ ಹಿಂದೆ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ಆ ಸಮಯದಲ್ಲಿ ವಿಸ್ಮಯ ಸಿನಿಮಾ ಮುಗಿದಿತ್ತು. ಬಟ್, ಈ ಘಟನೆಯನ್ನ ಅಲ್ಲಿ ಯಾಕೆ ಹೇಳಲಿಲ್ಲ. ಒಂದೊಳ್ಳೆ ವೇದಿಕೆ ಸಿಕ್ಕಿತ್ತು. ಆಗಲೇ ಹೇಳಬಹುದಿತ್ತು ಅಲ್ವಾ. ಈ ಎಲ್ಲಾ ವಿಷ್ಯಗಳನ್ನ ಮುಂದಿಟ್ಟ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ.

    ಶ್ರುತಿ ಹರಿಹರನ್ ಅವರನ್ನ ಪ್ರಶ್ನಿಸಿದ ಅರ್ಜುನ್ ಸರ್ಜಾ ಅತ್ತೆ.!ಶ್ರುತಿ ಹರಿಹರನ್ ಅವರನ್ನ ಪ್ರಶ್ನಿಸಿದ ಅರ್ಜುನ್ ಸರ್ಜಾ ಅತ್ತೆ.!

    English summary
    Interest facts about arjun sarja and shruthi hariharan controversy.
    Monday, October 22, 2018, 17:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X