Don't Miss!
- News ಮಠಗಳಿಗೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದ ಡಾ. ಕೆ. ಸುಧಾಕರ್
- Lifestyle ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಮುಂಗಾರು ಮಳೆ', 'ಮೊಗ್ಗಿನ ಮನಸ್ಸು' ಮತ್ತು ಹೆಣ್ಣು ಮಕ್ಕಳು
ನಟ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿ ತಂದೆ ತಾಯಿ ಆಗಿದ್ದಾರೆ. ಕಳೆದ ವಾರ ರಾಧಿಕಾ ಪಂಡಿತ್ ಹೆಣ್ಣು ಮಗುವಿನ ಜನ್ಮ ನೀಡಿದ್ದು, ಯಶ್ ಕುಟುಂಬದಲ್ಲಿ ಸಂತಸ ಮೂಡಿದೆ.
'ಮೊಗ್ಗಿನ ಮನಸ್ಸು' ಸಿನಿಮಾದ ಮೂಲಕ ಯಶ್ ಹಾಗೂ ರಾಧಿಕಾ ಪಂಡಿತ್ ಚಿತ್ರರಂಗಕ್ಕೆ ಬಂದಿದ್ದರು. 'ಮೊಗ್ಗಿನ ಮನಸ್ಸು' ಸಿನಿಮಾವನ್ನ ಇ ಕೆ ಎಂಟರ್ ಪ್ರೈಸಸ್ ಸಂಸ್ಥೆ ನಿರ್ಮಾಣ ಮಾಡಿತ್ತು. ಇದೇ, ಸಂಸ್ಥೆ ಆ ಚಿತ್ರಕ್ಕೆ ಮುಂಚೆ 'ಮುಂಗಾರು ಮಳೆ' ಸಿನಿಮಾಗೂ ಬಂಡವಾಳ ಹಾಕಿತ್ತು.
ತಂದೆಯಾದ ಯಶ್ : ಮನೆಗೆ ಬಂದ ಮಹಾಲಕ್ಷ್ಮಿ
ಅಯ್ಯೋ, ಏನಿದು ಈ ಹಳೆ ಕಥೆ ಈಗ ಹೇಳ್ತಿದ್ದೀರೆ ಅಂತ ನೀವು ಭಾವಿಸಬಹುದು ಆದರೆ, 'ಮೊಗ್ಗಿನ ಮನಸ್ಸು' ಮತ್ತು 'ಮುಂಗಾರು ಮಳೆ' ಸಿನಿಮಾಗೆ ಒಂದು ಲಿಂಕ್ ಇದೆ. ಯಶ್ ಹಾಗೂ ರಾಧಿಕಾ ದಂಪತಿಗೆ ಹೆಣ್ಣು ಮಗುವಾಗಿದೆ. ಆದರೆ, ಅವರಿಗೆ ಮಾತ್ರವಲ್ಲ ಈ ಎರಡು ಸಿನಿಮಾದಲ್ಲಿ ನಟಿಸಿದ್ದ ಕಲಾವಿದ ಹಾಗೂ ತಂತ್ರಜ್ಞರಲ್ಲಿ ಅನೇಕರಿಗೆ ಹೆಣ್ಣು ಮಗುವೇ ಆಗಿರುವುದು ಎಂಬುದು ವಿಶೇಷ. ಮುಂದೆ ಓದಿ...
|
ಶಶಾಂಕ್ ಹಂಚಿಕೊಂಡ ಸಂಗತಿ
ನಿರ್ದೇಶಕ ಶಶಾಂಕ್ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಒಂದು ವಿಶೇಷ ಸಂಗತಿ ಹಂಚಿಕೊಂಡಿದ್ದಾರೆ. ಯಶ್ ಹಾಗೂ ರಾಧಿಕಾ ದಂಪತಿಗೆ ಶುಭಕೋರಿರುವ ಅವರು ''ಮುಂಗಾರು ಮಳೆ-ಮೊಗ್ಗಿನ ಮನಸ್ಸು ಚಿತ್ರಗಳನ್ನು ನಿರ್ಮಿಸಿದ್ದು ಒಂದೇ ಸಂಸ್ಥೆ. ಈ ಚಿತ್ರಗಳಿಗೆ ದುಡಿದ ಕಲಾವಿದರು, ತಂತ್ರಜ್ಞರು ಯಶಸ್ಸಿನ ಶಿಖರವನ್ನೇರಿದರು ಮತ್ತು ತದನಂತರ ಅವರೆಲ್ಲರಿಗೂ ಹುಟ್ಟಿದ ಮಗು ಹೆಣ್ಣು!'' ಎಂದು ಟ್ವೀಟ್ ಮಾಡಿದ್ದಾರೆ.
ಪುಟ್ಟ ಕಂದನನ್ನು ಪ್ರೀತಿಯಿಂದ ಬರಮಾಡಿಕೊಂಡ ಸ್ಯಾಂಡಲ್ ವುಡ್
ಯಶ್ - ರಾಧಿಕಾಗೆ ಹೆಣ್ಣು ಮಗು
ನಟಿ ರಾಧಿಕ ಪಂಡಿತ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಯಶ್ ಮನೆಗೆ ಮಹಾಲಕ್ಷ್ಮಿಯ ಆಗಮನವಾಗಿದೆ. ಡಿಸೆಂಬರ್ 2 ರಂದು ಬೆಳಗ್ಗೆ 6.20ರ ಸುಮಾರಿಗೆ ಬೆಂಗಳೂರಿನ ಪೋರ್ಟಿಸ್ ಆಸ್ಪತ್ರೆಯಲ್ಲಿ ಮಗುವಿನ ಜನನವಾಗಿದೆ. ಜೂನಿಯರ್ ರಾಧಿಕಾ ಪಂಡಿತ್ ಗೆ ಸ್ಯಾಂಡಲ್ ವುಡ್ ನ ಅನೇಕರು ವಿಶ್ ಮಾಡಿದ್ದಾರೆ.
ಗಣೇಶ್- ಶಿಲ್ಪಾ ಗೆ ಹೆಣ್ಣು ಮಗು
'ಮುಂಗಾರು ಮಳೆ' ಸಿನಿಮಾದ ನಾಯಕ ಗಣೇಶ್ ಅವರಿಗೆ ಸಹ ಇರುವುದು ಹೆಣ್ಣು ಮಗು. 'ಮುಂಗಾರು ಮಳೆ' ಸಿನಿಮಾ 2006 ರಲ್ಲಿ ಬಿಡುಗಡೆಯಾಗಿದ್ದು, 2008 ಗಣೇಶ್ ಶಿಲ್ಪಾ ರನ್ನ ವಿವಾಹವಾದರು. ಗಣೇಶ್ ಹಾಗೂ ಶಿಲ್ಪಾ ದಂಪತಿಗೆ 2009ರಲ್ಲಿ ಮಗಳು ಜನಿಸಿದಳು. ಗಣೇಶ್ ಪುತ್ರಿ ಚಾರಿತ್ಯಗೆ ಸದ್ಯ 9 ವರ್ಷ ತುಂಬಿದೆ.
ನಿರ್ದೇಶಕರಿಗೂ ಅಷ್ಟೇ
'ಮುಂಗಾರು ಮಳೆ' ಸಿನಿಮಾದ ಸೂತ್ರಧಾರ ಯೋಗರಾಜ್ ಭಟ್ ಅವರಿಗೆ ಇಬ್ಬರು ಮಕ್ಕಳಿದ್ದು, ಇಬ್ಬರು ಹೆಣ್ಣು ಮಗಳೇ. ಅದೇ ಕಾರಣಕ್ಕೆ ಭಟ್ಟರು ಹೆಣ್ಣು ಮಕ್ಕಳೇ ಸ್ಟ್ರಾಂಗು ಗುರು ಎಂದು ಹೇಳಿರಬಹುದು. ಹಾಗೇಯೇ 'ಮೊಗ್ಗಿನ ಮನಸ್ಸು' ನಿರ್ದೇಶಕ ಶಶಾಂಕ್ ಅವರಿಗೂ ಹೆಣ್ಣು ಮಗು ಇದೆ. ಇಬ್ಬರು ನಿರ್ದೇಶಕರು ಹೆಣ್ಣು ಮಕ್ಕಳಿಗೆ ತಂದೆಯಾಗಿದ್ದಾರೆ.
ನಿರ್ಮಾಪಕರು, ತಂತ್ರಜ್ಞರು
'ಹೆಬ್ಬುಲಿ' ನಿರ್ದೇಶಕ ಕೃಷ್ಣ ಈ ಹಿಂದೆ 'ಮುಂಗಾರು ಮಳೆ' ಸಿನಿಮಾಗೆ ಕ್ಯಾಮರಾ ಮ್ಯಾನ್ ಆಗಿದ್ದರು. ಕೃಷ್ಣ ಹಾಗೂ ಸ್ವಪ್ನ ದಂಪತಿಗೆ ಸಹ ಹೆಣ್ಣು ಮಗು ಆಗಿತ್ತು. 'ಮುಂಗಾರು ಮಳೆ' ಹಾಗೂ 'ಮೊಗ್ಗಿನ ಮನಸ್ಸು' ಎರಡು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದು ಇ ಕೆ ಎಂಟರ್ ಪ್ರೈಸಸ್. ಈ ಚಿತ್ರದ ನಿರ್ಮಾಪಕ ಗಂಗಾಧರ್ ಅವರಿಗೂ ಹೆಣ್ಣು ಮಗು ಇದೆ.