Don't Miss!
- News ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನೇ ಗುರಿಯಾಗಿಸಿ ಐಟಿ ದಾಳಿ : ಡಿ ಕೆ ಶಿವಕುಮಾರ್ ಏನಂದ್ರು?
- Technology Poco: ವಿಶೇಷ ಟ್ಯಾಬ್ಲೆಟ್ ಲಾಂಚ್ ಮಾಡಲು ಸಿದ್ಧವಾಗ್ತಿದೆ ಪೊಕೊ! ಸಖತ್ ಸ್ಟೈಲಿಶ್..
- Lifestyle ರುಚಿ ರುಚಿಯ ಸ್ಪೆಷಲ್ ಅಂಬೂರ್ ಬಿರಿಯಾನಿ ಮಾಡಿ ನೋಡಿ..! ಇಲ್ಲಿದೆ ರೆಸಿಪಿ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮೊದಲ ಮಳೆಯ ನಾಯಕಿ ನೀವೇನಾ ಹರಿಪ್ರಿಯಾ?
ಚಿತ್ರಸಾಹಿತಿ ಹೃದಯಶಿವ ಸದ್ದಿಲ್ಲದಂತೆ ಸಕಲೇಶಪುರದಲ್ಲಿ ಸೆಟ್ಲ್ ಆಗಿದ್ದಾರೆ. ಮುಂಗಾರುಮಳೆ ಮುಗಿದು ಹಿಂಗಾರಿನ ಕಡೆ ಹೊರಳ್ತಿರೋ ಪ್ರಕೃತಿ ಕೂಡ ಅವ್ರಿಗೆ ಸರಿಯಾದ ಸಾಥ್ ಕೊಡ್ತಿದೆ. ಅಂದ ಹಾಗೆ ನಾವ್ ಹೇಳ್ತಿರೋದು ಹೃದಯಶಿವ ಅವ್ರ 'ಮೊದಲ ಮಳೆ' ಚಿತ್ರದ ಬಗ್ಗೆ..
'ಮೊದಲ ಮಳೆ' ಚಿತ್ರ ಶುರುವಾಗುತ್ತೆ ಅನ್ನೋ ಸುದ್ದಿ ಬಂದಿದ್ದಷ್ಟೇ, ಅದು ಸದ್ದಿಲ್ಲದಂತೆ ಶುರುವಾಗಿದೆ. ಮಲೆನಾಡ ತವರು ಸಕಲೇಶಪುರದಲ್ಲಿ ಈ ವರ್ಷ ಮಳೆಯ ಅಬ್ಬರ ಕಡಿಮೆಯಿದ್ದು ಚಿತ್ರದ ಶೂಟಿಂಗ್ ಲಗುಬಗೆಯಿಂದ ನಡೀತಿರೋ ಸುದ್ದಿ ಬಂದಿದೆ.
ಆದ್ರೆ ಹರಿಪ್ರಿಯಾ ಅವ್ರ ಈ ಫೋಟೋ ಅಂತರ್ಜಾಲದಲ್ಲಿ ಓಡಾಡ್ತಿದ್ದು ಮಳೆಯಲ್ಲಿ ಇದು ಹರಿಪ್ರಿಯಾ ಗೆಟಪ್ಪಾ ಅನ್ನೋ ಅನುಮಾನ ಸಿನಿಪ್ರೇಮಿಗಳನ್ನ ಕಾಡ್ತಿದೆ. ಇಷ್ಟಕ್ಕೂ ಹರಿಪ್ರಿಯ ಪೊಲೀಸ್ ಇನ್ಸ್ಪೆಕ್ಟರ್ ಗೆಟಪ್ನಲ್ಲಿ ಇಷ್ಟು ಸ್ಲಿಮ್ ಆಗಿದ್ಯಾವಾಗ ಅಂತ ಗಾಂಧಿನಗರ ತಲೆ ಕೆರೆದುಕೊಳ್ತಿದೆ..
ನಿಂತ ನೀರಾಗಿದ್ದ 'ನೀರ್ ದೋಸೆ'ಗೆ ಹರಿಪ್ರಿಯಾ ಮಸಾಲೆ ಚಿಮುಕಿಸಿರುವುದರಿಂದ ಘಮ್ಮಂತ ವಾಸನೆ ಅಮರಿಕೊಳ್ಳಲು ಶುರುಮಾಡಿದೆ. ರಮ್ಯಾ ಕೈಕೊಟ್ಟ ನಂತರ ನಾಟಿಕೋಳಿ ರಾಗಿಣಿ ದ್ವಿವೇದಿ ಎಂಟ್ರಿ ಕೊಡುತ್ತಾರೆಂಬ ಸುದ್ದಿ ಸುಳ್ಳಾಗಿ ಹರಿಪ್ರಿಯಾ ಹೆಸರು ಕೇಳಿಬಂದಿರುವುದು ಚಿತ್ರಪ್ರೇಮಿಗಳ ಬಾಯಲ್ಲಿ ನೀರೂರುವಂತೆ ಮಾಡಿದೆ. ಅಷ್ಟರಲ್ಲಿ ಮೊದಲ ಮಳೆ ಸುದ್ದಿ ಕೂಡ ಹೊರಬಿದ್ದಿದೆ.
ಒಟ್ಟಿನಲ್ಲಿ 2015 ವರ್ಷ ಹರಿಪ್ರಿಯಾಗೆ ಸೇರಿದ ವರ್ಷವೆಂದರೆ ಅತಿಶಯೋಕ್ತಿಯಲ್ಲ. ರನ್ನ, ಬುಲೆಟ್ ಬಸ್ಯಾ ತೆರೆಯ ಮೇಲೆ ಅಬ್ಬರಿಸಿ ಮರೆಯಾಗಿದ್ದರೆ, ರಣತಂತ್ರ, ಮಂಜಿನ ಹನಿ, ರಿಕ್ಕಿ ಮತ್ತು ನೀರ್ ದೋಸೆಯಲ್ಲಿ ಹರಿಪ್ರಿಯಾ ತೊಡಗಿಕೊಂಡಿದ್ದಾರೆ. ಜೊತೆಗೆ ಮಲಯಾಳಂ ಮತ್ತು ತಮಿಳಿನಲ್ಲಿಯೂ ಹರಿಪ್ರಿಯಾ ಸಖತ್ ಬಿಜಿಯಾಗಿದ್ದಾರೆ.