Don't Miss!
- Automobiles ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ಸೆಲೆಬ್ರಿಟಿಗಳು ಫಿಧಾ: ಈ ಕಾರು ಖರೀದಿಸಿದ ನಟಿ
- News Bengaluru Rain: ಸುದೀರ್ಘ ಕಾಯುವಿಕೆ ಅಂತ್ಯ: ಬೆಂಗಳೂರಿಗೆ ಎಂಟ್ರಿ ಕೊಟ್ಟ ಮಳೆ; ವಿಡಿಯೋ ನೋಡಿ
- Lifestyle 5 ನಿಮಿಷದಲ್ಲಿ ಪಾತ್ರೆಯನ್ನು ಹೊಳೆಯುವಂತೆ ಮಾಡಿ..! ಸುಲಭದ ಟಿಪ್ಸ್ ಇಲ್ಲಿದೆ
- Technology oneplus: ಒನ್ಪ್ಲಸ್ನಿಂದ ಫ್ಲ್ಯಾಗ್ಶಿಪ್ ಕ್ಯಾಮೆರಾ ಸೌಲಭ್ಯದೊಂದಿಗೆ ಫ್ಲಿಪ್ ಫೋನ್!
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪೊಲೀಸರಿಂದ ಒತ್ತಡ, ಉಮಾಪತಿನಾ ಸಿಲುಕಿಸುವ ಷಡ್ಯಂತ್ರನಾ?
25 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಪ್ರತ್ಯೇಕವಾಗಿ ಸುದ್ದಿಗೋಷ್ಠಿ ನಡೆಸಿದರು. ಮೈಸೂರು ಸ್ನೇಹಿತರಿಗೆ ಕ್ಲೀನ್ ಚಿಟ್ ಕೊಟ್ಟ ದಾಸ ಚೆಂಡನ್ನು ಉಮಾಪತಿ ಅಂಗಳಕ್ಕೆ ಎಸೆದರು. ಡಿ ಬಾಸ್ ಪ್ರೆಸ್ ಮೀಟ್ ಮುಗಿಯುತ್ತಿದ್ದಂತೆ ಸುದ್ದಿಗೋಷ್ಠಿ ನಡೆಸಿದ ಉಮಾಪತಿ ಮತ್ತಷ್ಟು ಆಘಾತಕಾರಿ ವಿಷಯಗಳನ್ನು ಬಿಚ್ಚಿಟ್ಟರು.
ಸ್ವತಃ ದರ್ಶನ್ ಅವರು ಪ್ರೆಸ್ಮೀಟ್ನಲ್ಲಿ ಹೇಳಿದಂತೆ, 'ಅರುಣಾ ಕುಮಾರಿ ನನ್ನ ಬಳಿ ಸತ್ಯ ಹೇಳಬೇಕು, ನಾನು ಭೇಟಿ ಮಾಡ್ತೇನೆ, ಉಮಾಪತಿ ಅವರೇ ಇದಕ್ಕೆಲ್ಲಾ ಕಾರಣ ಅಂದ್ರು' ಎಂದು ದಾಸ ತಿಳಿಸಿದರು. ಈ ಕಡೆ ಉಮಾಪತಿ ಮಾತನಾಡುವಾಗ 'ಮೈಸೂರಿನಲ್ಲಿ ನನ್ನನ್ನು ಒಪ್ಪಿಕೊಳ್ಳುವಂತೆ ಪೊಲೀಸರು ಒತ್ತಡ ಏಕೆ ಹಾಕಿದ್ರು?' ಎಂದು ಪ್ರಶ್ನಿಸಿದರು. ಈ ವಿಚಾರಗಳನ್ನು ಗಮನಿಸಿದರೆ ರಾಬರ್ಟ್ ನಿರ್ಮಾಪಕನ ವಿರುದ್ಧ ಷಡ್ಯಂತ್ರ ನಡೆಯುತ್ತಿದ್ಯಾ ಎಂಬ ಬಲವಾದ ಅನುಮಾನ ಕಾಡ್ತಿದೆ. ಮುಂದೆ ಓದಿ....
ನನ್ನನ್ನು ಗುಂಡಿಟ್ಟು ಸಾಯಿಸ್ತಾರಾ, ಆ ತಾಕತ್ತು ಇದಿಯಾ: ನಿರ್ಮಾಪಕ ಉಮಾಪತಿ ತಿರುಗೇಟು
ದರ್ಶನ್ ಆಪ್ತರು ಬೆದರಿಕೆ ಹಾಕಿದ್ರಾ?
ದರ್ಶನ್ ಆಪ್ತರಾದ ಹರ್ಷ ಮೇಲಂಟಾ, ರಾಕೇಶ್, ರಾಕೇಶ್ ಶರ್ಮಾ ಬೆದರಿಕೆ ಹಾಕಿದ್ದಾರೆ ಎಂದು ಜಯನಗರ ಪೊಲೀಸರ ಮುಂದೆ ಸ್ವತಃ ಅರುಣಾ ಕುಮಾರಿ ಹೇಳಿದ್ದರು ಎಂಬ ವಿಚಾರವನ್ನು ಉಮಾಪತಿ ಶ್ರೀನಿವಾಸ್ ಬಹಿರಂಗಪಡಿಸಿದ್ದಾರೆ. ಹಾಗಾದ್ರೆ, ದರ್ಶನ್ ಬಳಿ ಆ ಮಹಿಳೆ ಉಮಾಪತಿ ಹೆಸರು ಹೇಳಿದ್ದರ ಹಿಂದಿನ ಕಾರಣವೇನು ಎಂಬ ಅನುಮಾನ ಮೂಡ್ತಿದೆ.
ಉಮಾಪತಿನೇ ಕಾರಣ ಎಂದ ಮಹಿಳೆ
ದರ್ಶನ್ ಪ್ರೆಸ್ಮೀಟ್ನಲ್ಲಿ ಮಾತನಾಡಿ, 'ಮಹಿಳೆ ನನಗೆ ಫೋನ್ ಮಾಡಿ ಸರ್ ನನಗೆ ಎರಡು ದಿನ ಸಮಯ ಕೊಡಿ, ನಾನು ಎಲ್ಲ ಸತ್ಯಾಂಶ ಹೇಳುತ್ತೇನೆ, ಇದಕ್ಕೆ ಉಮಾಪತಿ ಅವರೇ ಕಾರಣ' ಎಂದು ಹೇಳಿದ ವಿಚಾರ ಬಹಿರಂಗಪಡಿಸಿದ್ದಾರೆ. ಉಮಾಪತಿ ಹಾಗೂ ಮಹಿಳೆಯ ವಾಟ್ಸಾಪ್ ಚಾಟ್ ಸಹ ಬಿಡುಗಡೆ ಮಾಡಿದರು.
ಅರುಣಾ ಕುಮಾರಿಯ ಅಸಲಿ ರೂಪ ಬಹಿರಂಗಪಡಿಸಿದ ನಟ ದರ್ಶನ್
ಒಪ್ಪಿಕೊಳ್ಳುವಂತೆ ಉಮಾಪತಿಗೆ ಒತ್ತಡ ಹಾಕಿದ್ದೇಕೆ?
ಜಯನಗರದಲ್ಲಿ ಉಮಾಪತಿ ಕಳೆದ ತಿಂಗಳು ದೂರು ನೀಡಿದ್ದಾರೆ. ಮೈಸೂರಿನಲ್ಲಿ ದರ್ಶನ್ ಆಪ್ತ ಹರ್ಷಾ ನಿನ್ನೆ ದೂರು ಕೊಟ್ಟಿದ್ದಾರೆ. ಹರ್ಷಾ ಕೊಟ್ಟಿರುವ ದೂರಿನಲ್ಲಿ ಉಮಾಪತಿ ಹೆಸರು ಉಲ್ಲೇಖವಾಗಿದ್ದ ಕಾರಣ ವಿಚಾರಣೆಗೆ ಕರೆದು ಮಾಹಿತಿ ಕೇಳಿದ್ದಾರೆ. ಈ ವೇಳೆ ಅಲ್ಲಿದ್ದ ಪೊಲೀಸರೊಬ್ಬರು ಉಮಾಪತಿಗೆ ನೀವೇ ಒಪ್ಪಿಕೊಳ್ಳಿ ಎಂದು ಒತ್ತಡ ಹಾಕಿದರಂತೆ. ಇದನ್ನು ಉಮಾಪತಿ ಸುದ್ದಿಗೋಷ್ಠಿಯಲ್ಲಿ ಬಹಿರಂಗಪಡಿಸಿದ್ದಾರೆ.
ಜಯನಗರ ಹೇಳಿಕೆ ಏಕೆ ಪರಿಗಣಿಸಿಲ್ಲ?
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಳೆದ ತಿಂಗಳು ನಾನು ಮೊದಲು ದೂರು ಕೊಟ್ಟಿದ್ದೇನೆ. ಮೈಸೂರಿನಲ್ಲಿ ವಿಚಾರಣೆ ಮಾಡುವುದಾದರೆ ಜಯನಗರ ಪೊಲೀಸರ ಹೇಳಿಕೆ ಪರಿಶೀಲಿಸಬೇಕು ಅಲ್ಲವೇ? ಜಯನಗರದಲ್ಲಿ ಮಹಿಳೆಯ ಹೇಳಿಕೆ ಪಡೆಯಬೇಕು ಅಲ್ಲವೇ? ಅದನ್ನು ಏಕೆ ಪೊಲೀಸರು ಪಡೆದುಕೊಂಡಿಲ್ಲ ಎಂದು ಉಮಾಪತಿ ಪ್ರಶ್ನಿಸಿದ್ದಾರೆ.
Recommended Video
ಉಮಾಪತಿ vs ದರ್ಶನ್ ಆಪ್ತರು
ದರ್ಶನ್ ಮತ್ತು ಮೈಸೂರು ಸ್ನೇಹಿತರ ಸುದ್ದಿಗೋಷ್ಠಿ ಹಾಗೂ ಉಮಾಪತಿ ಶ್ರೀನಿವಾಸ್ ಅವರ ಸುದ್ದಿಗೋಷ್ಠಿ ಗಮನಿಸಿದರೆ ಇಲ್ಲಿ ದರ್ಶನ್ ಅವರ ಪಾತ್ರ ಬಹಳ ಕಡಿಮೆ. ಇಲ್ಲಿ ದರ್ಶನ್ ಮೈಸೂರು ಆಪ್ತರು ಮತ್ತು ಉಮಾಪತಿ ನಡುವಿನ ಕದನ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಮೈಸೂರಿನ ಪ್ರೆಸ್ಮೀಟ್ನಲ್ಲಿ ಉಮಾಪತಿ ಕಡೆ ಪರೋಕ್ಷ ಆರೋಪ ಮಾಡಿದ್ರೆ, ಬೆಂಗಳೂರಿನಲ್ಲಿ ದರ್ಶನ್ ಆಪ್ತರ ಮೇಲೆ ಉಮಾಪತಿ ಪರೋಕ್ಷ ಆರೋಪ ಮಾಡಿದ್ರು.