twitter
    For Quick Alerts
    ALLOW NOTIFICATIONS  
    For Daily Alerts

    ಸುಕುಮಾರ್ ಜೊತೆ ಡಿ-ಬಾಸ್ ಸಿನಿಮಾ ಮಾಡ್ತಾರಾ? ಫ್ಯಾನ್ಸ್‌ಗೆ ನಿರೀಕ್ಷೆ ಹೆಚ್ಚಾಗ್ತಿದೆ!

    |

    ಕನ್ನಡ ಇಂಡಸ್ಟ್ರಿಯ ಬಾಕ್ಸ್ ಆಫೀಸ್ ಸುಲ್ತಾನ್ ಎನಿಸಿಕೊಂಡಿರುವ ನಟ ದರ್ಶನ್ ಮೇಲೆ ಪರಭಾಷೆ ನಿರ್ದೇಶಕರೊಬ್ಬರು ಕಣ್ಣಾಕಿದ್ದಾರೆ ಎಂಬ ಕುತೂಹಲ, ಅನುಮಾನ, ನಿರೀಕ್ಷೆ ಬಹಳ ದಿನಗಳಿಂದ ಕಾಡ್ತಿದೆ. ಟಾಲಿವುಡ್ ಇಂಡಸ್ಟ್ರಿ ಯಶಸ್ವಿ ನಿರ್ದೇಶಕನ ಜೊತೆ ಡಿ ಬಾಸ್ ಕೈ ಜೋಡಿಸುತ್ತಾರಾ? ಇವರಿಬ್ಬರ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ ಅನೌನ್ಸ್ ಆಗಬಹುದಾ? ಹೀಗೆ ಪ್ರಶ್ನೆಗಳು ಆಗಾಗ ಚರ್ಚೆಯಾಗುತ್ತಲೇ ಇದೆ.

    ಈಗ ಇಂತಹದೊಂದು ಚರ್ಚೆ ಮತ್ತೆ ಹುಟ್ಟಿಕೊಂಡಿದೆ. ತೆಲುಗು ನಿರ್ದೇಶಕ ಸುಕುಮಾರ್ ಹುಟ್ಟುಹಬ್ಬಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಶ್ ಮಾಡಿದ್ದು, ಇದರ ಬೆನ್ನಲ್ಲೆ ಇವರಿಬ್ಬರ ಕಾಂಬಿನೇಷನ್ ಬಗ್ಗೆ ನಿರೀಕ್ಷೆ ಹೆಚ್ಚಾಗುತ್ತಿದೆ. ಮುಂದೆ ಓದಿ...

    'ಡಿ-ಬಾಸ್' ಭಕ್ತರಿಗೆ ಭರ್ಜರಿ ಸುದ್ದಿ: ದರ್ಶನ್ ಭೇಟಿ ಮಾಡಿದ 'ರಂಗಸ್ಥಳಂ' ನಿರ್ದೇಶಕ ಸುಕುಮಾರ್'ಡಿ-ಬಾಸ್' ಭಕ್ತರಿಗೆ ಭರ್ಜರಿ ಸುದ್ದಿ: ದರ್ಶನ್ ಭೇಟಿ ಮಾಡಿದ 'ರಂಗಸ್ಥಳಂ' ನಿರ್ದೇಶಕ ಸುಕುಮಾರ್

    ಸುಕುಮಾರ್ ಹುಟ್ಟುಹಬ್ಬಕ್ಕೆ ಶುಭಕೋರಿದ ದರ್ಶನ್

    ಸುಕುಮಾರ್ ಹುಟ್ಟುಹಬ್ಬಕ್ಕೆ ಶುಭಕೋರಿದ ದರ್ಶನ್

    ತೆಲುಗು ಸ್ಟಾರ್ ನಿರ್ದೇಶಕ ಸುಕುಮಾರ್ ಅವರ ಹುಟ್ಟುಹಬ್ಬಕ್ಕೆ ದಾಸ ದರ್ಶನ್ ಶುಭಕೋರಿದ್ದಾರೆ. ಸುಕುಮಾರ್ ಜೊತೆಗಿನ ಫೋಟೋ ಪೋಸ್ಟ್ ಮಾಡಿರುವ ದರ್ಶನ್ ''ಹ್ಯಾಪಿ ಬರ್ತಡೇ ಸುಕುಮಾರ್ ಅವರೇ, ನಿಮಗೆ ಹೆಚ್ಚು ಯಶಸ್ಸು ಸಿಗಲಿ'' ಎಂದು ಹಾರೈಸಿದ್ದಾರೆ.

    ಸಿನಿಮಾ ಬರುತ್ತೆ ಎಂಬ ನಂಬಿಕೆ

    ಸಿನಿಮಾ ಬರುತ್ತೆ ಎಂಬ ನಂಬಿಕೆ

    ಕರ್ನಾಟಕದ ಮಾಸ್ ಹೀರೋ ಹಾಗೂ ತೆಲುಗಿನ ಕ್ರಿಯೇಟಿವ್ ನಿರ್ದೇಶಕ ಜೋಡಿಯಲ್ಲಿ ಒಂದು ಸಿನಿಮಾ ಬಂದ್ರೆ ಹೇಗಿರುತ್ತೆ ಎಂಬ ಕುತೂಹಲ ಡಿ ಬಾಸ್ ಅಭಿಮಾನಿಗಳಲ್ಲಿ ಹೆಚ್ಚಾಗುತ್ತಿದೆ. ದರ್ಶನ್ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ನೆಟ್ಟಿಗರು ಈ ಕಾಂಬಿನೇಷನ್‌ನಿಂದ ಸರ್ಪ್ರೈಸ್ ಇದೆಯಾ ಎಂದು ಕೇಳುತ್ತಿದ್ದಾರೆ.

    ಅಲ್ಲು ಅರ್ಜುನ್ 'ಪುಷ್ಪ' ಸಿನಿಮಾ ನಿರ್ದೇಶಕನ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಡಿ ಬಾಸ್ ದರ್ಶನ್ಅಲ್ಲು ಅರ್ಜುನ್ 'ಪುಷ್ಪ' ಸಿನಿಮಾ ನಿರ್ದೇಶಕನ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಡಿ ಬಾಸ್ ದರ್ಶನ್

    ಈ ಕಾಂಬಿನೇಷನ್ ಬೇಕು

    ಈ ಕಾಂಬಿನೇಷನ್ ಬೇಕು

    ಸುಕುಮಾರ್ ಜೊತೆ ದರ್ಶನ್ ಸಿನಿಮಾ ಮಾಡಲಿ, ಈ ಜೋಡಿಯಿಂದ ಒಂದು ಚಿತ್ರ ಬರಲಿ ಎಂದು ಅಭಿಮಾನಿಗಳು ಆಪೇಕ್ಷಿಸುತ್ತಿದ್ದಾರೆ. ಸುಕುಮಾರ್ ಅವರು ಭೇಟಿ ಮಾಡಿದ್ದು, ಈಗ ಸುಕುಮಾರ್ ಬರ್ತಡೇಗೆ ದಾಸ ವಿಶ್ ಮಾಡಿದ್ದು ಈ ಎಲ್ಲವನ್ನು ಗಮನಿಸಿದರೆ ಪ್ಲಾನಿಂಗ್ ಏನಾದರೂ ನಡೆಯುತ್ತಿರಬಹುದು ಎಂದು ನಿರೀಕ್ಷಿಸಲಾಗುತ್ತಿದೆ.

    ಎರಡು ವರ್ಷದ ಹಿಂದೆ ಭೇಟಿ ಮಾಡಿದ್ದರು

    ಎರಡು ವರ್ಷದ ಹಿಂದೆ ಭೇಟಿ ಮಾಡಿದ್ದರು

    2018ರಲ್ಲಿ ಬೆಂಗಳೂರಿಗೆ ಬಂದಿದ್ದ ಸುಕುಮಾರ್ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಭೇಟಿ ಮಾಡಿದ್ದರು. ಒಡೆಯ ಸಿನಿಮಾ ಸೆಟ್‌ನಲ್ಲಿ ಡಿ ಬಾಸ್ ಅವರನ್ನು ಭೇಟಿ ಸುಕುಮಾರ್ ಕ್ಯಾರಾವನ್‌ನಲ್ಲಿ ಕುಳಿತು ಯೋಗಕ್ಷೇಮ ವಿಚಾರಿಸಿದ್ದರು. ಆಗಲೇ ಈ ಜೋಡಿ ಮೇಲೆ ಹೆಚ್ಚು ನಿರೀಕ್ಷೆ ಹುಟ್ಟಿಕೊಂಡಿತ್ತು. ಈಗ ಮತ್ತೊಮ್ಮೆ ಇಂತಹ ಆಸೆ ಅಭಿಮಾನಿಗಳಲ್ಲಿ ಉಂಟಾಗಿದೆ.

    'ಪುಷ್ಪ' ನಿರ್ದೇಶಿಸುತ್ತಿರುವ ಸುಕುಮಾರ್

    'ಪುಷ್ಪ' ನಿರ್ದೇಶಿಸುತ್ತಿರುವ ಸುಕುಮಾರ್

    ಅಲ್ಲು ಅರ್ಜುನ್ ನಟಿಸುತ್ತಿರುವ 'ಪುಷ್ಪ' ಚಿತ್ರವನ್ನು ಸುಕುಮಾರ್ ನಿರ್ದೇಶಿಸುತ್ತಿದ್ದಾರೆ. 'ರಂಗಸ್ಥಳಂ' ಸಿನಿಮಾದ ಯಶಸ್ಸಿನ ಬಳಿಕ 'ಪುಷ್ಪ' ಆರಂಭಿಸಿದ್ದರು. ರಶ್ಮಿಕಾ ಮಂದಣ್ಣ ಈ ಚಿತ್ರದಲ್ಲಿ ನಾಯಕಿ. ಈ ಕಡೆ ರಾಬರ್ಟ್ ಮುಗಿಸಿರುವ ದರ್ಶನ್ 'ಮದಕರಿ ನಾಯಕ' ಪ್ರಾಜೆಕ್ಟ್ ಶುರು ಮಾಡಿದ್ದಾರೆ.

    English summary
    Is telugu director SuKumar planning to make a film with Kannada actor Darshan?
    Tuesday, January 12, 2021, 9:46
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X