Don't Miss!
- News ದೇವನಹಳ್ಳಿ, ಹೊಸಕೋಟೆ, ದೊಡ್ಡಬಳ್ಳಾಪುರ & ನೆಲಮಂಗಲ ಹೊಸ ಉಪನಗರ: ಡಾ. ಕೆ. ಸುಧಾಕರ್ ಭರವಸೆ!
- Finance ಜಗತ್ತಿನಾದ್ಯಂತ 6,000 ಉದ್ಯೋಗಿಗಳನ್ನು ವಜಾ ಮಾಡಿದ ಡೆಲ್
- Automobiles ಬುಕ್ ಮಾಡಿದ ರೈಲಿನ ಸೀಟಿನಲ್ಲಿ ಬೇರೆಯವರು ಕೂತಿದ್ರೆ ಏನ್ ಮಾಡಬೇಕು ಗೊತ್ತಾ? ಸಿಂಪಲ್ ಪರಿಹಾರ
- Sports IPL 2024 RR vs DC: ರಾಯಲ್ಸ್ ವಿರುದ್ಧ ಗೆಲುವಿನೊಂದಿಗೆ ಪುಟಿದೇಳುವುದೇ ಕ್ಯಾಪಿಟಲ್ಸ್?; ಸಂಭಾವ್ಯ ಆಡುವ 11ರ ಬಳಗ
- Lifestyle ವಿಶ್ವದ ದುಬಾರಿ ಹಣ್ಣುಗಳಿವು..! ನೀವು ಊಹಿಸದ ಬೆಲೆ ಈ ಹಣ್ಣುಗಳಿಗಿದೆ..!
- Technology OnePlus: ಒನ್ಪ್ಲಸ್ ನಾರ್ಡ್ CE 4 ಫೋನ್ನ ಭಾರತದ ಬೆಲೆ ಮಾಹಿತಿ ಲೀಕ್! ಲಾಂಚ್ಗೆ ನಾಲ್ಕೇ ದಿನ ಬಾಕಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ರಾಜಾಹುಲಿ' ಮನೆಯಿಂದ ಸೂಟ್ ಕೇಸ್ ಹಿಡಿದು ಹೊರಟ ಐಟಿ ಅಧಿಕಾರಿಗಳು
ರಾಕಿಂಗ್ ಸ್ಟಾರ್ ಯಶ್ ಮನೆ ಮೇಲೆ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳು, 57 ಗಂಟೆಗಳ ಬಳಿಕ ದಾಳಿ ಅಂತ್ಯಗೊಳಿಸಿದ್ದಾರೆ. ಒಂದು ಸೂಟ್ ಕೇಸ್, ನೋಟ್ ಕೌಂಟಿಂಗ್ ಮಷಿನ್ ಜೊತೆ ಐಟಿ ಆಫಿಸರ್ಸ್ ಮನೆಯಿಂದ ಹೊರ ಹೋಗಿದ್ದಾರೆ. ಅಲ್ಲಿಗೆ ಯಶ್ ಮನೆ ಮೇಲೆ ದಾಳಿ ಮುಗಿದಿದೆ.
ಗುರುವಾರ ಬೆಳಿಗ್ಗೆ ಹೊಸಕೆರೆಹಳ್ಳಿಯಲ್ಲಿರುವ ಯಶ್ ನಿವಾಸ ಹಾಗೂ ಗಾಯಿತ್ರಿ ನಗರದಲ್ಲಿರುವ ಯಶ್ ಅವರ ಪತ್ನಿ ರಾಧಿಕಾ ಪಂಡಿತ್ ಅವರ ನಿವಾಸದ ಮೇಲೆ ಐಟಿ ಅಧಿಕಾರಿಗಳು ರೇಡ್ ಮಾಡಿದ್ದರು.
ಮೂರು ದಿನಗಳ ಐಟಿ ದಾಳಿ, ಅಧಿಕಾರಿಗಳ ಕೈ ಖಾಲಿ ಖಾಲಿ
ಈ ಸುದ್ದಿ ಕೇಳಿದ ಮುಂಬೈನಲ್ಲಿದ್ದ ಯಶ್, ಬೆಂಗಳೂರಿಗೆ ವಾಪಸ್ ಆಗಿ ತಾಜ್ ವೆಸ್ಟೆಂಟ್ ಹೋಟೆಲ್ ಗೆ ಹೋಗಿದ್ದರು. ಅಲ್ಲಿ ಯಶ್ ಅವರನ್ನ ವಿಚಾರಣೆಗೆ ಒಳಪಡಿಸಿದ ಐಟಿ ಅಧಿಕಾರಿಗಳು, ದಾಖಲೆ, ಆಸ್ತಿ ವಿವರ ಮತ್ತು ಆದಾಯದ ಬಗ್ಗೆ ವಿವರ ಪಡೆದುಕೊಂಡಿದ್ದಾರೆ.
ಐಟಿ ದಾಳಿ ಬಳಿಕ ಮಾತನಾಡಿದ ಯಶ್ ''ವಿಜಯ್ ಕಿರಗಂದೂರ್, ತಿಮ್ಮೆಗೌಡ ಅವರಿಂದ ಐಟಿ ಅಧಿಕಾರಿಗಳು ಬಂದಿದ್ದರು. ಕೆಜಿಎಫ್ ಸಂಬಂಧ ಅಂತ ಗೊತ್ತಿಲ್ಲ. ಅವರು ಕೆಲಸ ಅವರು ಮಾಡಿದ್ದಾರೆ, ನಾವು ಸಹಕಾರ ಕೊಟ್ಟಿದ್ದೇವೆ. ಊಹಾಪೋಹಗಳು ಬೇಡ, ಯಾವುದೇ ಗೊಂದಲ ಬೇಡ'' ಎಂದು ಸ್ಪಷ್ಟನೆ ನೀಡಿದ್ದಾರೆ.
ಹೀಗೆ, ಸತತ ಮೂರನೇ ದಿನ ಯಶ್ ಅವರ ನಿವಾಸದಲ್ಲಿ ಪರಿಶೀಲನೆ ನಡೆಸಿ, ಕೊನೆಗೂ ವಿಚಾರಣೆ ಅಂತ್ಯ ಮಾಡಿದ್ದಾರೆ. ಸದ್ಯಕ್ಕೆ, ಯಶ್ ಮನೆಯಿಂದ ಏನು ವಶಪಡಿಸಿಕೊಂಡಿದ್ದಾರೆ, ಯಾವ ದಾಖಲೆ ಪತ್ರಗಳನ್ನ ತೆಗೆದುಕೊಂಡಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಇಲ್ಲ.
ಕೊನೆಗೊಂಡ ಐಟಿ ಡ್ರಿಲ್: ಹುಬ್ಬಳ್ಳಿಗೆ ಪುನೀತ್, ಬಿಗ್ ಬಾಸ್ ಮನೆಗೆ ಸುದೀಪ್.!
ಆದ್ರೆ, ಒಂದು ಸೂಟ್ ಕೇಸ್ ಜೊತೆ ಮನೆಯಿಂದ ಹೋಗಿರುವುದು ಕುತೂಹಲ ಮೂಡಿಸಿದೆ. ಇಲ್ಲಿಯವರೆಗೂ ಯಶ್ ಈ ಬಗ್ಗೆ ಸ್ಪಷ್ಟನೆ ನೀಡಿಲ್ಲ.
-
100 ಜನ ನೋಡುತ್ತಿರುವಾಗ ಕಾರಿನಲ್ಲಿ ಲಿಪ್ಲಾಕ್ ಸೀನ್; 'ಪ್ರೇಮಂ' ಬ್ಯೂಟಿ ಅನುಪಮಾ ಪರಮೇಶ್ವರನ್ ಹೇಳಿದ್ದೇನು?
-
"ನನಗೆ 38 ವರ್ಷ.. ಮಕ್ಕಳು ಮಾಡಿಕೊಳ್ಳುವ ಬಗ್ಗೆ ಹೇಳಲಾರೆ"; ಪ್ರೆಗ್ನೆನ್ಸಿ ಬಗ್ಗೆ ವರಲಕ್ಷ್ಮಿ ಶರತ್ ಕುಮಾರ್ ಹೇಳಿದ್ದೇನು?
-
ಮೊದಲ ಬಾರಿಗೆ 'ಮಿಸ್ ಯುನಿವರ್ಸ್'ನಲ್ಲಿ ಸೌದಿ ಅರೇಬಿಯಾದ ಯುವತಿ; ಸೌದಿ ಬ್ಯೂಟಿ ರೂಮಿ ಅಲ್ಕಹ್ತಾನಿ ಯಾರು?