Don't Miss!
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- News ಸಿಯಾಚಿನ್ ಬಳಿ ಚೀನಾ ಆಕ್ರಮಿತ ಕಾಶ್ಮೀರದಲ್ಲಿ ಹೊಸ ರಸ್ತೆ ನಿರ್ಮಾಣ; ಖಚಿತಪಡಿಸಿದ ಉಪಗ್ರಹ ಚಿತ್ರಗಳು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಂದ್ರು-ಹೋದ್ರು-ತಂದ್ರು: ಮೂರು ದಿನದ 'ಐಟಿ' ದಾಳಿಯಲ್ಲಿ ಆಗಿದ್ದಿಷ್ಟೇ.!
ಸ್ಯಾಂಡಲ್ ವುಡ್ ನಟ ಮತ್ತು ನಿರ್ಮಾಪಕರ ಮೇಲೆ ಐಟಿ ದಾಳಿ ಆಗಿದ್ದು, ಸತತ ಮೂರು ದಿನಗಳಿಂದ ದಾಖಲೆ ಪತ್ರಗಳನ್ನ, ಆಸ್ತಿವಿವರಗಳನ್ನ, ಆದಾಯದ ಮೂಲವನ್ನ ಪರಿಶೀಲನೆ ಮಾಡಲಾಗ್ತಿದೆ. ಐಟಿ ಅಧಿಕಾರಿಗಳು ಅಂದ್ಮೇಲೆ ಅವರ ಕೆಲಸವೇ ಅದೇ ಬಿಡಿ.
ಎರಡು ದಿನಗಳಿಂದ ಐಟಿ ದಾಳಿಯಿಂದ ಯಾರ ಮನೆಯಲ್ಲಿ ಎಷ್ಟು ಆಸ್ತಿ ಸಿಕ್ಕಿದೆ, ಎಷ್ಟು ಕೆಜಿ ಚಿನ್ನ ಸಿಕ್ಕಿದೆ, ಅಕ್ರಮ ಆಸ್ತಿ ಇದೆಯಾ, ಆದಾಯಕ್ಕೆ ದಾಖಲೆಗಳು ಇದ್ಯಾ ಇದರ ಬಗ್ಗೆ ಒಂದೇ ಒಂದು ಸಣ್ಣ ಸುಳಿವು ಕೂಡ ಸಿಕ್ಕಿಲ್ಲ.
ಐಟಿ ರೇಡ್ ಎಫೆಕ್ಟ್: 'ಬಿಗ್' ಸಿನಿಮಾಗಳಿಗೆ ಬಿತ್ತು ತಾತ್ಕಾಲಿಕ ಬ್ರೇಕ್
ಎರಡು ದಿನದಿಂದ ಸುದ್ದಿ ಏನಪ್ಪಾ ಅಂದ್ರೆ, ಊಟ ತರಿಸಿಕೊಂಡರು, ಬ್ಯಾಗ್ ತಂದರು, ಚೀಟಿ ಹಿಡಿದುಕೊಂಡು ಹೋದರು, ಮಕ್ಕಳು ಮನೆಗೆ ಬಂದರು, ಯಾವ ಅಡಿಗೆ ತರಿಸಿಕೊಂಡರು, ಆನ್ ಲೈನ್ ನಿಂದ ಊಟ ಬಂತು, ಇಬ್ಬರು ಅಧಿಕಾರಿಗಳು ಮನೆ ಒಳಗೆ ಹೋದರು, ನಾಲ್ವರು ಅಧಿಕಾರಿಗಳು ಮನೆಯಿಂದ ಹೊರಗೆ ಹೋದರು....ಇದನ್ನ ಬಿಟ್ಟರೇ ಬೇರೆ ಏನು ಇಲ್ಲ.
'ಬಿಗ್ ಬಾಸ್' ಶೋಗೆ ತಟ್ಟಲಿದ್ಯಾ 'ಐಟಿ' ದಾಳಿಯ ಬಿಸಿ.?
ನಿಜಕ್ಕೂ ಐಟಿ ದಾಳಿ ಮಾಡಲು ಕಾರಣವೇನು, ನಟ ಮತ್ತು ನಿರ್ಮಾಪಕರ ಮನೆಯಲ್ಲಿ ಸಿಕ್ಕಿ ಆಸ್ತಿ ವಿವರ ಎಷ್ಟು ಎನ್ನುವುದರ ಬಗ್ಗೆ ಐಟಿ ಅಧಿಕಾರಿಗಳಾಗಲಿ ಅಥವಾ ರೇಡ್ ಗೆ ಒಳಗಾಗಿರುವ ನಟ, ನಿರ್ಮಾಪಕರಾಗಲಿ ಎಲ್ಲಿಯೂ ಮಾತನಾಡಿಲ್ಲ.
ಆದ್ರೂ, ಇದೊಂದು ಐತಿಹಾಸಿಕ ಐಟಿ ದಾಳಿ ಎಂದು ಬಣ್ಣಿಸಲಾಗ್ತಿದೆ. ಎರಡು ದಿನದಿಂದ ಡೆವಲಪ್ ಮೆಂಟ್ ಏನು ಅಂದ್ರೆ, ಬಂದ್ರು-ಹೋದ್ರು, ತಂದ್ರು-ಹೋದ್ರು ಅನ್ನೋದು ಬಿಟ್ಟರೇ ಬೇರೆ ಯಾವ ಮಾಹಿತಿಯೂ ಇಲ್ಲ.
'ನಟಸಾರ್ವಭೌಮ' ಆಡಿಯೋ ಕಾರ್ಯಕ್ರಮಕ್ಕಿಲ್ಲ 'ಐಟಿ' ಭಯ.!
ಸದ್ಯಕ್ಕೆ ಪುನೀತ್, ಶಿವಣ್ಣ, ಯಶ್, ಸುದೀಪ್, ವಿಜಯ್ ಕಿರಗಂದೂರ್, ರಾಕ್ ಲೈನ್ ವೆಂಕಟೇಶ್, ಜಯಣ್ಣ, ಸಿಆರ್ ಮನೋಹರ್ ಎಲ್ಲರೂ ಮನೆಯಲ್ಲಿ ಬಂಧಿತರಾಗಿದ್ದಾರೆ ಎನ್ನುವುದು ಮಾತ್ರ ಸತ್ಯ. ಈ ದಾಳಿ ಬಗ್ಗೆ ಸ್ವತಃ ಐಟಿ ಅಧಿಕಾರಿಗಳು ಹೇಳುವವರೆಗೂ ಯಾವುದಕ್ಕೂ ಸ್ಪಷ್ಟನೆ ಸಿಗಲ್ಲ.