twitter
    For Quick Alerts
    ALLOW NOTIFICATIONS  
    For Daily Alerts

    ಸ್ಯಾಂಡಲ್ ವುಡ್ ದಿಗ್ಗಜರ ಸ್ಮಾರಕದ ಬಳಿ 'ರಾಬರ್ಟ್' ವಿಲನ್

    |

    ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ಖಳ ನಟ ಜಗಪತಿ ಬಾಬು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ಖ್ಯಾತ ನಟ ದಿಢೀರನೆ ಕಂಠೀರವ ಸ್ಟುಡಿಯೋದಲ್ಲಿ ಕಾಣಿಸಿಕೊಂಡಿದ್ದಲ್ಲದೆ ದಿಗ್ಗಜರ ಸಮಾಧಿಗೆ ಭೇಟಿ ನೀಡಿದ್ದಾರೆ.

    ಹೌದು, ಡಾ. ರಾಜ್ ಕುಮಾರ್, ಪಾರ್ವತಮ್ಮ ರಾಜ್ ಕುಮಾರ್ ಮತ್ತು ರೆಬೆಲ್ ಸ್ಟಾರ್ ಅಂಬರೀಶ್ ಸ್ಮಾರಕಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಪರಭಾಷ ನಟರು ಕನ್ನಡದ ಲೆಜೆಂಡರಿ ನಾಯಕರ ಮೇಲೆ ಇಟ್ಟಿರುವ ಗೌರವ ಪ್ರೀತಿ, ವಿಶ್ವಾಸ ಕಂಡು ಕನ್ನಡಾಭಿಮಾನಿಗಳು ಬೆರಗಾಗಿದ್ದಾರೆ.

    ಮತ್ತೆ ಕನ್ನಡದತ್ತ ಮುಖ ಮಾಡಿದ ತೆಲುಗಿನ ಖ್ಯಾತ ಖಳನಟ ಮತ್ತೆ ಕನ್ನಡದತ್ತ ಮುಖ ಮಾಡಿದ ತೆಲುಗಿನ ಖ್ಯಾತ ಖಳನಟ

    ಜಗಪತಿ ಬಾಬು ಕಂಠೀರವ ಸ್ಟುಡಿಯೋದಲ್ಲಿರುವ ಡಾ. ರಾಜ್ ಕುಮಾರ್, ಪಾರ್ವತಮ್ಮ ರಾಜ್ ಕುಮಾರ್ ಮತ್ತು ಅಂಬರೀಶ್ ಸಮಾಧಿಗೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದ್ದಾರೆ. ಜಗಪತಿ ಬಾಬುಗೆ ಸ್ನೇಹಿತರು ಮತ್ತು ಆಪ್ತರು ಸಾಥ್ ನೀಡಿದ್ದಾರೆ.

    Jagapathi Babu Visited To Dr.Rajkumar, Parvathamma Rajkumar And Ambareesh Samadhi

    ಅಂದ್ಹಾಗೆ ಜಗಪತಿ ಬಾಬು ಸದ್ಯ 'ರಾಬರ್ಟ್' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರದ ಪ್ರಮುಖ ಖಳ ನಟನ ಪಾತ್ರದಲ್ಲಿ ಜಗಪತಿ ಬಾಬು ಬಣ್ಣ ಹಚ್ಚುತ್ತಿದ್ದಾರೆ. 'ರಾಬರ್ಟ್' ಚಿತ್ರದ ಚಿತ್ರೀಕರಣ ಈಗ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿದೆ. ಚಿತ್ರೀಕರಣಕ್ಕೆ ಹಾಜರಾಜ ಜಗಪತಿ ಬಾಬು ಅಲ್ಲೆ ಪಕ್ಕದಲ್ಲಿರುವ ದಿಗ್ಗಜರ ಸ್ಮಾರಕಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ.

    Jagapathi Babu Visited To Dr.Rajkumar, Parvathamma Rajkumar And Ambareesh Samadhi

    ಜಗಪತಿ ಬಾಬು ಕನ್ನಡದಲ್ಲಿ ಸುದೀಪ್ ಅಭಿನಯದ 'ಬಚ್ಚನ್' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದರು. ಆನಂತರ ನಿಖಿಲ್ ಕುಮಾರ ಸ್ವಾಮಿ ಅಭಿನಯದ 'ಜಾಗ್ವಾರ್' ಚಿತ್ರದಲ್ಲೂ ಬಣ್ಣಹಚ್ಚಿದ್ದಾರೆ. ಈಗ ರಾಬರ್ಟ್ ಚಿತ್ರದ ಮೂಲಕ ಮತ್ತೆ ಕನ್ನಡ ಚಿತ್ರಾಭಿಮಾನಿಗಳ ಮುಂದೆ ಬರುತ್ತಿದ್ದಾರೆ.

    English summary
    South film Industry famous villain actor Jagapathi Babu visited to Dr. Rajkumar, Parvathamma Rajkumar and Ambareesh Samadhi.
    Friday, August 2, 2019, 11:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X