Don't Miss!
- News Siddaramaiah: ಹುಬ್ಬಳ್ಳಿಯ ನೇಹಾ ಹಿರೇಮಠ ನಿವಾಸಕ್ಕೆ ಸಿಎಂ ಭೇಟಿ: ಸಿದ್ದರಾಮಯ್ಯ ಕೊಟ್ಟ ಭರವಸೆ ಏನು?
- Lifestyle ದೇಹದಲ್ಲಿ ಈ ಬದಲಾವಣೆ ಆದರೆ ನಿಮ್ಮಲ್ಲಿ ವಿಟಮಿನ್ ಬಿ12 ಕೊರತೆಯಾಗಿದೆ ಎಂದರ್ಥ
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶಿವಣ್ಣ ಬಗ್ಗೆ ಪುನೀತ್ಗೆ ಎರಡು ತಿಂಗಳ ಹಿಂದೆ ಸಲಹೆ ನೀಡಿದ್ದರು ಜಗ್ಗೇಶ್
ನಿನ್ನೆಯಷ್ಟೆ ಶಿವರಾಜ್ ಕುಮಾರ್ ನಿವಾಸದಲ್ಲಿ ಚಂದನವನದ ಸ್ಟಾರ್ ನಟರೆಲ್ಲಾ ಸೇರಿ ಚಿತ್ರೋದ್ಯಮದ ಭವಿಷ್ಯದ ಕುರಿತು ಮಹತ್ವದ ಸಭೆ ನಡೆಸಿದರು.
Recommended Video
ರವಿಚಂದ್ರನ್, ರಮೇಶ್ ಅರವಿಂದ್ ಆದಿಯಾಗಿ ಯಶ್, ದುನಿಯಾ ವಿಜಯ್, ಗಣೇಶ್ ಇನ್ನೂ ಹತ್ತು ಹಲವು ಸ್ಟಾರ್ ನಟರು ಸಭೆಯಲ್ಲಿದ್ದರು. ಆದರೆ ಸಭೆಯಲ್ಲಿ ಮೂವರು ಪ್ರಮುಖ ಗೈರುಹಾಜರಿ ಎದ್ದು ಕಾಣುತ್ತಿತ್ತು. ಅದುವೇ ನಟ ಜಗ್ಗೇಶ್, ಸುದೀಪ್ ಮತ್ತು ದರ್ಶನ್.
ಸುದೀಪ್ ಹಾಗೂ ದರ್ಶನ್ ವಿಷಯಗೊತ್ತಿಲ್ಲವಾದರೂ ನಟ ಜಗ್ಗೇಶ್ ಅವರು ತಾವೇಕೆ ಸಭೆಗೆ ಬರಲಿಲ್ಲವೆಂಬುದರ ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲ ಎರಡು ತಿಂಗಳ ಹಿಂದೆ ಇದೇ ವಿಷಯವಾಗಿ ನಟ ಪುನೀತ್ ರಾಜ್ಕುಮಾರ್ ಅವರಿಗೆ ನೀಡಿದ್ದ ಸಲಹೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಎರಡು ತಿಂಗಳ ಹಿಂದೆ ಸಲಹೆ ನೀಡಿದ್ದರು
ಎರಡು ತಿಂಗಳ ಹಿಂದೆ ಶಿವರಾಜ್ ಕುಮಾರ್ ಸಹೋದರ ಪುನೀತ್ ರಾಜ್ಕುಮಾರ್ ಜಗ್ಗೇಶ್ ಅವರಿಗೆ ಕರೆ ಮಾಡಿ ಮಾತನಾಡಿದ್ದರಂತೆ. 'ಶಿವಣ್ಣ ಅವರು ಚಿತ್ರರಂಗದ ಜವಾಬ್ದಾರಿ ಹೊರುವಂತೆ ಹೇಳಿ' ಎಂದು ಅಂದೇ ಸಲಹೆ ನೀಡಿದ್ದರಂತೆ ಜಗ್ಗೇಶ್.
ರಾಜಣ್ಣ ಇದ್ದಾರೆ ಜವಾಬ್ದಾರಿ ಹೊತ್ತಿದ್ದರು: ಜಗ್ಗೇಶ್
ಈ ಕುರಿತು ಟ್ವೀಟ್ ಮಾಡಿರುವ ಜಗ್ಗೇಶ್, 'ತಿಂಗಳ ಹಿಂದೆ ಪುನೀತ್ ಕರೆಮಾಡಿದಾಗ, ರಾಜಣ್ಣ ಇದ್ದಾಗ ಚಿತ್ರರಂಗದ ಜವಾಬ್ದಾರಿ ಹೊತ್ತಿದ್ದರು, ಇನ್ನುಮುಂದೆ ಶಿವಣ್ಣ ಆ ಕಾರ್ಯ ಮಾಡಲು ಹೇಳಿ ಎಂದು ಸಲಹೆ ನೀಡಿದ್ದೆ, ಇಂದು ಶಿವಣ್ಣ ಆ ಕಾರ್ಯ ಮಾಡುತ್ತಿದ್ದಾರೆ ಸ್ವಾಗತಾರ್ಹ' ಎಂದಿದ್ದಾರೆ.
ನಾವೆಲ್ಲರೂ ಭುಜಬಲವಾಗಿ ನಿಲ್ಲುತ್ತೇವೆ: ಜಗ್ಗೇಶ್
ತಮ್ಮ ಆತ್ಮೀಯ ಗೆಳೆಯ ಶಿವರಾಜ್ ಕುಮಾರ್ ಅವರ ಪರ ನಾನಿದ್ದೇನೆ ಎಂಬುದನ್ನು ಒತ್ತಿ ಹೇಳಿರುವ ಜಗ್ಗೇಶ್, 'ಆತನ ಉತ್ಸಾಹಕ್ಕೆ ನಾವೆಲ್ಲರು ಭುಜಬಲವಾಗಿ ನಿಲ್ಲುತ್ತೇವೆ' ಎಂದಿದ್ದಾರೆ.
ಗೈರಾಗಿದ್ದಕ್ಕೆ ಕಾರಣ ನೀಡಿದ ಜಗ್ಗೇಶ್
ತಾವು ಸಭೆಗೆ ಗೈರಾಗಿದ್ದಕ್ಕೆ ಕಾರಣ ನೀಡಿರುವ ಜಗ್ಗೇಶ್, ಕೊರೊನಾ ಇರುವ ಕಾರಣದಿಂದ ತಾವು ಸಭೆಗೆ ಹಾಜರಾಗಿಲ್ಲ ಎಂದು ಸ್ಪಷ್ಟಪಡಿಸಿದ್ದರು. 'ಈ ದರಿದ್ರ ಕೊರೋನ ಹೆದರಿಸುತ್ತಿದೆ! ನನಗೆ 57 ಸ್ವಲ್ಪ ಜಾಗೃತವಾಗಿರುವೆ' ಎಂದಿದ್ದಾರೆ.