'ದುರ್ಯೋಧನ' ಪಾತ್ರದ ಬಗ್ಗೆ ಜಗ್ಗೇಶ್ ಏನಂದ್ರು ನೋಡಿ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ದುರ್ಯೋಧನ ಪಾತ್ರದ ಬಗ್ಗೆ ಈಗಾಗಲೇ ಹಲವು ನಟ-ನಟಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ, ನವರಸ ನಾಯಕ ಜಗ್ಗೇಶ್ ಅವರು ದರ್ಶನ್ ಪಾತ್ರದ ಬಗ್ಗೆ ಮಾತನಾಡಿದ್ದಾರೆ.
ದುರ್ಯೋಧನ ಪಾತ್ರಕ್ಕೆ ಸೂಕ್ತ ನಟ ದರ್ಶನ್ ಎಂದಿರುವ ಜಗ್ಗೇಶ್, ಈ ಪಾತ್ರ ದರ್ಶನ್ ಅವರಿಗೆ ಭಾರತೀಯ ಚಿತ್ರರಂಗದಲ್ಲಿ ಖ್ಯಾತಿ ತಂದುಕೊಡುತ್ತೆ ಎಂದು ಭವಿಷ್ಯ ನುಡಿದಿದ್ದಾರೆ.

ಜಗ್ಗೇಶ್ ಅವರು ಮಾಡಿರುವ ಟ್ವೀಟ್
''ಪೌರಾಣಿಕ ಪಾತ್ರಕ್ಕೆ ಹೇಳಿ ಮಾಡಿಸಿದ ಮೈಕಟ್ಟು. ಅದರಲ್ಲು ದುರ್ಯೋಧನ ಪಾತ್ರ ನಿಜಕ್ಕು ಅದ್ಭುತವಾಗಿದೆ. ಈ ಪಾತ್ರ ಶತಮಾನಗಳು ಉಳಿಸುತ್ತೆ ದರ್ಶನ್ ಗೆ ನಮ್ಮ ಭಾರತೀಯ ಚಿತ್ರರಂಗದಲ್ಲಿ'' - ನಟ, ಜಗ್ಗೇಶ್
ಈ ಹಿಂದೆ ಜಗ್ಗೇಶ್ ಅವರು ಕೂಡ ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತು. ಆದ್ರೆ, ಅದೆಲ್ಲಾ ಸುಳ್ಳು ಎಂದು ಸ್ವತಃ ಜಗ್ಗೇಶ್ ಅವರೇ ಸ್ಪಷ್ಟಪಡಿಸಿದ್ದರು.
More from Filmibeat
English summary
Kannada Actor Jaggesh has taken his twitter account to appreciate Challenging Star Darshan.
jaggesh kurukshetra darshan ravichandran arjun sarja ambarish munirathna sandalwood ಕುರುಕ್ಷೇತ್ರ ಜಗ್ಗೇಶ್ ದರ್ಶನ್ ರವಿಚಂದ್ರನ್ ಮುನಿರತ್ನ ಸ್ಯಾಂಡಲ್ ವುಡ್


Click it and Unblock the Notifications











