Don't Miss!
- Technology AI Camera: ಎಐ ಕ್ಯಾಮೆರಾ ಆಯ್ಕೆ ಇರುವ ಅತ್ಯುತ್ತಮ ಸ್ಮಾರ್ಟ್ಫೋನ್ಗಳಿವು! ಬೆಲೆ ಎಷ್ಟು ?
- News ಚುನಾವಣೆ ಹೊತ್ತಲ್ಲೇ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ಗೆ ಕೋರ್ಟ್ ಸಮನ್ಸ್: ಯಾಕೆ?
- Sports IPL 2024: RCB vs KKR ಹೆಡ್-ಟು-ಹೆಡ್ ದಾಖಲೆ, ಪಿಚ್ ವರದಿ; ಚಿನ್ನಸ್ವಾಮಿಯಲ್ಲಿ ಗೆಲುವು ಯಾರಿಗೆ?
- Finance ವಿವಿಧ ರಾಜ್ಯಗಳ ನರೇಗಾ ಕಾರ್ಮಿಕರ ವೇತನ ದರ ಪರಿಷ್ಕರಣೆ, ವಿವರ
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಬಿಲ್ಡಪ್' ರಾಣಿ ಸಂಜನಾಗೆ ಮಾತಲ್ಲೇ ಪೆಟ್ಟು ಕೊಟ್ಟ ನಟ ಜಗ್ಗೇಶ್.!
'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ 'ಬಿಲ್ಡಪ್' ಎಂದು ಬಿರುದು ಕೊಟ್ಟಿರುವ 'ಮೇಕಪ್ ಕ್ವೀನ್' ಸಂಜನಾ ವಿರುದ್ಧ 'ಡಿ' ಬಾಯ್ಸ್ ಸಿಡಿದೆದ್ದಿದ್ದಾರೆ.
ದರ್ಶನ್ ಬಗ್ಗೆ ಸಂಜನಾ ಕೊಟ್ಟ ಒಂದೇ ಒಂದು ಹೇಳಿಕೆಯಿಂದ ಇಂದು ಸೋಷಿಯಲ್ ಮೀಡಿಯಾದಲ್ಲಿ ಮಹಾ ಯುದ್ಧ ನಡೆಯುತ್ತಿದೆ. ಆದರೂ, ಸಂಜನಾ ಕ್ಷಮೆ ಕೇಳುವ ಹಾಗೆ ಕಾಣುತ್ತಿಲ್ಲ.
'ಬಾತ್ ರೂಂ' ಸಂಜನಾ ವಿರುದ್ಧ ದಂಗೆ ಎದ್ದ ದರ್ಶನ್ ಫ್ಯಾನ್ಸ್.!
''ಇದು ನನ್ನ ವೈಯುಕ್ತಿಕ ಅಭಿಪ್ರಾಯ. ದರ್ಶನ್ ರವರ ಚಿತ್ರಗಳಲ್ಲಿ ತುಂಬಾ ಬಿಲ್ಡಪ್ ಇರುತ್ತದೆ. ಅದಕ್ಕೆ ಹೇಳ್ದೆ. ಅದು ನನ್ನ ಅಭಿಪ್ರಾಯ. ಅದನ್ನ ಪ್ರಶ್ನೆ ಮಾಡುವ ಹಕ್ಕು ಯಾರಿಗೂ ಇಲ್ಲ'' ಅಂತ ಸಂಜನಾ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ದರ್ಶನ್ ಗೆ 'ಬಿಲ್ಡಪ್' ಅಂತ ಕರೆದು ದೊಡ್ಡ ಎಡವಟ್ಟು ಮಾಡಿಕೊಂಡ ಸಂಜನಾ.!
ಇಡೀ ವಿವಾದವನ್ನ ಗಮನಿಸಿರುವ ನವರಸ ನಾಯಕ ಜಗ್ಗೇಶ್, ಟ್ವಿಟ್ಟರ್ ನಲ್ಲಿ ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ.
ಯಶ್-ರಶ್ಮಿಕಾ ವಿವಾದದ ಬಗ್ಗೆ ನಟ ಜಗ್ಗೇಶ್ ಮಾಡಿದ ಕಾಮೆಂಟ್ ಇದು.!
''ದೌರ್ಭಾಗ್ಯ... ನಕ್ಕು ಸುಮ್ಮನಾಗಿ... ಅಳಿಲು ಆನೆ ಬಗ್ಗೆ ಹರಿಕಥೆ ಮಾಡಿದಂಗೆ'' ಅಂತ ಟ್ವೀಟ್ ಮಾಡುವ ಮೂಲಕ ಸಂಜನಾಗೆ ತಮ್ಮದೇ ಶೈಲಿಯಲ್ಲಿ ಬಿಸಿ ಮುಟ್ಟಿಸಿದ್ದಾರೆ ನಟ ಜಗ್ಗೇಶ್.
ಧೌರ್ಭಾಗ್ಯ!ನಕ್ಕು ಸುಮ್ಮನಾಗಿ!ಅಳಿಲು ಆನೆ ಬಗ್ಗೆ ಹರಿಕಥೆ ಮಾಡಿದಂಗೆ! https://t.co/NkqLWiGhD4
— ನವರಸನಾಯಕ ಜಗ್ಗೇಶ್ (@Jaggesh2) July 29, 2017
''ನನಗೆ 54 ವರ್ಷ. 18ನೇ ವರ್ಷದಿಂದ ದುಡಿಮೆ ಶುರು ಮಾಡಿದೆ. ಇಷ್ಟು ವರ್ಷ ಜೀವನ ಪಾಠ ಕಲಿಸಿದೆ. ಹಗಲುಗನಸು ಕಾಣೋಲ್ಲ. ಕಾಯಕದಲ್ಲಿ ಕೈಲಾಸ ಕಾಣುವೆ. ಎಲ್ಲರನ್ನ ಗೌರವಿಸುವೆ'' ಎಂದೂ ಕೂಡ ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ನನಗೆ54 ವರ್ಷ!18ನೆ ವರ್ಷದಿಂದ ದುಡಿಮೆ ಶುರುಮಾಡಿದೆ!ಇಷ್ಟುವರ್ಷ ಬಹುಜನ ಕಾಲ ಜೀವನ ಪಾಠಕಲಿಸಿದೆ!ಹಗಲುಗನಸು ಕಾಣೋಲ್ಲಾ!ಕಾಯಕದಲ್ಲಿ ಕೈಲಾಸ ಕಾಣುವೆ!ಎಲ್ಲರನ್ನಗೌರವಿಸುವೆ.. https://t.co/xX4z2HCo02
— ನವರಸನಾಯಕ ಜಗ್ಗೇಶ್ (@Jaggesh2) July 29, 2017
ಸದ್ಯ ಫೇಸ್ ಬುಕ್ ನಿಂದ ಮಾಯ ಆಗಿರುವ ಸಂಜನಾ, ದರ್ಶನ್ ಫ್ಯಾನ್ಸ್ ಒತ್ತಾಯಕ್ಕೆ ಮಣಿದು ಕ್ಷಮೆ ಕೇಳುತ್ತಾರಾ.? ನೋಡೋಣ...