Don't Miss!
- Sports RR vs DC: ಐಪಿಎಲ್ನಲ್ಲಿ ಇತಿಹಾಸ ನಿರ್ಮಿಸಲು ಸಜ್ಜಾದ ರಿಷಭ್ ಪಂತ್
- News Asianet Digital Network Survey: ಮತ್ತೊಮ್ಮೆ ಮೋದಿಗೆ ಜೈ ಎಂದ ಮತದಾರರು!
- Technology ಮತ್ತೊಂದು ಅಗ್ಗದ 5G ಫೋನ್ ಲಾಂಚ್ ಮಾಡಲು ಸಜ್ಜಾದ ರಿಯಲ್ಮಿ!..ಫೀಚರ್ಸ್ ಏನು?
- Finance ಜಗತ್ತಿನಾದ್ಯಂತ 6,000 ಉದ್ಯೋಗಿಗಳನ್ನು ವಜಾ ಮಾಡಿದ ಡೆಲ್
- Automobiles ಬುಕ್ ಮಾಡಿದ ರೈಲಿನ ಸೀಟಿನಲ್ಲಿ ಬೇರೆಯವರು ಕೂತಿದ್ರೆ ಏನ್ ಮಾಡಬೇಕು ಗೊತ್ತಾ? ಸಿಂಪಲ್ ಪರಿಹಾರ
- Lifestyle ವಿಶ್ವದ ದುಬಾರಿ ಹಣ್ಣುಗಳಿವು..! ನೀವು ಊಹಿಸದ ಬೆಲೆ ಈ ಹಣ್ಣುಗಳಿಗಿದೆ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಯಶ್-ರಶ್ಮಿಕಾ ವಿವಾದದ ಬಗ್ಗೆ ನಟ ಜಗ್ಗೇಶ್ ಮಾಡಿದ ಕಾಮೆಂಟ್ ಇದು.!
ಟಾಕ್ ಶೋ ಒಂದರಲ್ಲಿ ನಟ ಯಶ್ ಗೆ 'ಮಿಸ್ಟರ್ ಶೋ ಆಫ್' ಎಂದು ಬಿರುದು ಕೊಟ್ಟ ನಟಿ ರಶ್ಮಿಕಾ ಮಂದಣ್ಣ ವಿರುದ್ಧ ಯಶ್ 'ಅಣ್ತಮ್ಮಂದಿರು' ಸಿಡಿದೆದಿದ್ದರು. ಸೋಷಿಯಲ್ ಮೀಡಿಯಾದಲ್ಲಿ ರಾದ್ಧಾಂತ ನೋಡಿದ ಬಳಿಕ ''ಈ ವಿಚಾರವನ್ನ ಇಲ್ಲಿಗೆ ಬಿಟ್ಟುಬಿಡಿ'' ಎಂದು ನಟ ಯಶ್ ಮನವಿ ಮಾಡಿದ್ದರು. ಯಶ್ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾದ ನಟಿ ರಶ್ಮಿಕಾ ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಕ್ಷಮೆ ಯಾಚಿಸಿದ್ದರು.
ಇಡೀ ಘಟನೆ ಕುರಿತು ನಟ ಜಗ್ಗೇಶ್ ತಮ್ಮ ಅಭಿಪ್ರಾಯವನ್ನ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
ರಶ್ಮಿಕಾ ವಿಚಾರದಲ್ಲಿ ಅಭಿಮಾನಿಗಳಿಗೆ ಯಶ್ ಕೊಟ್ಟ ಸಂದೇಶ
ವಿವಾದ ಭುಗೆಲೆದ್ದು ತಮ್ಮ ಅಭಿಮಾನಿಗಳಲ್ಲಿ ನಟ ಯಶ್ ಮನವಿ ಮಾಡಿದಾಗ 'ನವರಸ ನಾಯಕ' ಜಗ್ಗೇಶ್ ಕಾಮೆಂಟ್ ಮಾಡಿದ್ದು ಹೀಗೆ...
ಹೆಸರುಬಂದಾಗ ಕೆಸರಿನ ಪ್ರಶ್ನೆ ಸುರಿಮಳೆ!ಉತ್ತರಿಸುವ ಜಾಣ್ಮೆಯಿದ್ದರೆ ಉತ್ತರಿಸಿ!ಇಲ್ಲಾ no coments! ಮಾತು ಮನೆ ಕೆಡಿಸುತ್ತೆ!ತೂತು ಒಲೆ ಕೆಡಿಸುತ್ತೆ!ಗಾದೆ ನೆನಪಾಯಿತು! https://t.co/wZsWSI450P
— ನವರಸನಾಯಕ ಜಗ್ಗೇಶ್ (@Jaggesh2) June 26, 2017
''ಹೆಸರು ಬಂದಾಗ ಕೆಸರಿನ ಪ್ರಶ್ನೆ ಸುರಿಮಳೆ. ಉತ್ತರಿಸುವ ಜಾಣ್ಮೆಯಿದ್ದರೆ ಉತ್ತರಿಸಿ. ಇಲ್ಲ ನೋ ಕಾಮೆಂಟ್ಸ್. ಮಾತು ಮನೆ ಕಡೆಸುತ್ತೆ, ತೂತು ಒಲೆ ಕೆಡಿಸುತ್ತೆ. ಗಾದೆ ನೆನಪಾಯಿತು'' ಎಂದು ತಮ್ಮ ಟ್ವೀಟ್ ಮೂಲಕ ರಶ್ಮಿಕಾಗೆ ಜಗ್ಗೇಶ್ ಕಿವಿಮಾತು ಹೇಳಿದ್ದರು.
ರಶ್ಮಿಕಾ ಬಗ್ಗೆ ಬಾಯಿಗೆ ಬಂದಂತೆ ಬೈಯುತ್ತಿರುವವರು ಸ್ವಲ್ಪ ಇಲ್ಲಿ ನೋಡಿ...
ಇನ್ನೂ ಇಡೀ ಘಟನೆ ಕುರಿತು ರಶ್ಮಿಕಾ ಕ್ಷಮೆ ಕೇಳಿದ್ಮೇಲೆ, ರಶ್ಮಿಕಾ ರವರ ನಡೆಯನ್ನ ಜಗ್ಗೇಶ್ ಶ್ಲಾಘಿಸಿದ್ದಾರೆ.
ಕೊನೆಗೂ ಕ್ಷಮೆ ಕೇಳಿದ ರಶ್ಮಿಕಾ: ವಿವಾದದ ಅಸಲಿ ಕಾರಣ ಬಹಿರಂಗ
''ತಪ್ಪಿನ ಪ್ರಾಯಶ್ಚಿತ್ತ ಶ್ರೇಷ್ಟ ಗುಣ. ಅಪವಾದಕ್ಕೆ ಶುಭಂ. ಮುಂದಿನ ದಿನ ಕ್ಷೇಮಂ. ಸಿಗಲಿ ಸರ್ವಕಾಲದಲ್ಲೂ ಭಾಗ್ಯಂ. ಒಗ್ಗಟ್ಟಿರಲಿ ಕನ್ನಡಿಗರಲ್ಲಿ, ಅದುವೇ ಶ್ರೀರಕ್ಷಂ'' ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ತಪ್ಪಿನ ಪ್ರಾಯಾಶ್ಚಿತ್ತ ಶೇಷ್ಠಗುಣ:) ಅಪವಾದಕ್ಕೆ ಶುಭಂ..ಮುಂದಿನ ದಿನ ಕ್ಷೇಮಂ..ಸಿಗಲಿ ಸರ್ವಕಾರ್ಯದಲ್ಲು ಭಾಗ್ಯಂ.ಒಗ್ಗಟ್ಟಿರಲಿ ಕನ್ನಡಿಗರಲ್ಲಿ ಅದುವೆ ಶ್ರೀರಕ್ಷಂ:) https://t.co/IH7oC86jJe
— ನವರಸನಾಯಕ ಜಗ್ಗೇಶ್ (@Jaggesh2) June 26, 2017
ಅಂತೂ, ರಶ್ಮಿಕಾ ಕ್ಷಮೆ ಕೇಳಿದ್ಮೇಲೆ ಯಶ್ 'ಅಣ್ತಮ್ಮಂದಿರು' ಕೂಡ ಸೈಲೆಂಟ್ ಅಗಿದ್ದಾರೆ. ವಿವಾದಕ್ಕೆ ಫುಲ್ ಸ್ಟಾಪ್ ಇಟ್ಟ ರಶ್ಮಿಕಾ ತಮ್ಮ ನಿಶ್ಚಿತಾರ್ಥದ ತಯಾರಿಯಲ್ಲಿ ತೊಡಗಿದ್ದಾರೆ.
'ರಕ್ಷಿತ್-ರಶ್ಮಿಕಾ' ನಿಶ್ಚಿತಾರ್ಥದ ಆಮಂತ್ರಣ ಪತ್ರಿಕೆ ನೋಡಿ