Don't Miss!
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- News Narendra Modi: ಕರ್ನಾಟಕಕ್ಕೆ ಏಪ್ರಿಲ್ 29, 29ಕ್ಕೆ ಪ್ರಧಾನಿ ಮೋದಿ ಆಗಮನ
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮೋಡ ಕವಿದ ವಾತಾವರಣದಲ್ಲೇ ನವರಸ ನಾಯಕನ 'ತೋತಾಪುರಿ' ಪುರಾಣ ಆರಂಭ
'ದೇವ್ರಾಣೆಗೂ ನಮ್ದು ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ. ನಮ್ದು ಬರೀ ಸಿನಿಮಾ' ಅಂತ 'ತೋತಾಪುರಿ' ಚಿತ್ರತಂಡ ಒಂದು ಪೋಸ್ಟರ್ ಬಿಟ್ಟಿತ್ತು. ನವರಸ ನಾಯಕನ 'ತೋತಾಪುರಿ' ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಹೌದಾ? ಅಲ್ಲಾ? ಅನ್ನುವ ಗೊಂದಲದಲ್ಲೇ ಸಿನಿಮಾ ಬಿಡುಗಡೆಗೆ ಭರ್ಜರಿಯಾಗಿ ಸಿದ್ಧತೆ ಆರಂಭ ಆಗಿದೆ. ವಿಶಿಷ್ಟವಾಗಿ ಪ್ರೇಕ್ಷಕರನ್ನು ಸೆಳೆಯುವುದಕ್ಕೆ ಇಡೀ ಚಿತ್ರತಂಡ ಸಖತ್ತಾಗಿರುವ ಮಾಸ್ಟರ್ ಪ್ಲ್ಯಾನ್ ಮಾಡಿದೆ.
'ನೀರ್ದೋಸೆ' ಚಿತ್ರದ ಮೂಲಕ ನಿರ್ದೇಶಕ ವಿಜಯ್ ಪ್ರಸಾದ್ ಹಾಗೂ ನವರಸ ನಾಯಕ ಸಿನಿಪ್ರಿಯರಿಗೆ ಕಾಮಿಡಿ ಕಚಗುಳಿ ಇಟ್ಟಿದ್ದರು. ಈಗ ಮತ್ತದೇ ಜೋಡಿ ತೋತಾಪುರಿ ಹಿಡಿದು ಬರುತ್ತಿದೆ. ಚೇಷ್ಟೆ ಮಾಡಿಕೊಂಡು ಪೋಲಿ ಡೈಲಾಗ್ ಬಿಡುತ್ತಾ ಮನರಂಜನೆ ನೀಡುವ ಈ ಕಾಂಬಿನೇಷನ್ಗೆ ಸಿನಿರಸಿಕರು ಬಹುಪರಾಕ್ ಹೇಳಿದ್ದಾರೆ. ಇನ್ನು 'ತೋತಾಪುರಿ' ಹಿಡಿದ ಜಗ್ಗೇಶ್ ಹಾಗೂ ಚಿತ್ರದ ಒಂದೊಂದು ಪಾತ್ರಗಳನ್ನು ಪರಿಚಯ ಮಾಡಲು ಮುಂದಾಗಿದ್ದಾರೆ ನಿರ್ದೇಶಕ ವಿಜಯ್ ಪ್ರಸಾದ್.
ಇನ್ಮುಂದೆ ದಿನಕ್ಕೊಬ್ಬರ 'ತೋತಾಪುರಿ' ಪುರಾಣ
ನಿರ್ದೇಶಕ ವಿಜಯ್ ಪ್ರಸಾದ್ 'ತೋತಾಪುರಿ' ಚಿತ್ರದ ಪ್ರಚಾರ ಆರಂಭಿಸಿದ್ದಾರೆ. ಈ ಸಿನಿಮಾ ದೀಪಾವಳಿ ಹಬ್ಬಕ್ಕೆ ಬಿಡುಗಡೆ ಮಾಡಲು ಶತಪ್ರಯತ್ನ ನಡೆಸಿತ್ತು. ಆದರೆ, ಅಂದುಕೊಂಡಂತೆ ಸಿನಿಮಾ ರಿಲೀಸ್ ಸಾಧ್ಯವಾಗಿರಲಿಲ್ಲ. ಹೀಗಾಗಿ ಒಂದೊಂದೇ ಪಾತ್ರಗಳನ್ನು ತನ್ನದೇ ಸ್ಟೈಲ್ನಲ್ಲಿ ಸಿನಿಪ್ರಿಯರಿಗೆ ಪರಿಚಯಿಸಲು ನಿರ್ದೇಶಕ ವಿಜಯ್ ಪ್ರಸಾದ್ ಮುಂದಾಗಿದ್ದಾರೆ. ಒಂದು ವಾರ ಪ್ರತಿ ದಿನ ಒಬ್ಬರಂತೆ 'ತೋತಾಪುರಿ' ಸಿನಿಮಾದ ಪ್ರಮುಖ ಪಾತ್ರಗಳನ್ನು ಪರಿಚಯ ಮಾಡಲಿದ್ದಾರೆ. ಈಗಾಗಲೇ ಈರೇಗೌಡನಾಗಿ ಜಗ್ಗೇಶ್, ಶಕೀಲಾ ಬಾಬು ಪಾತ್ರದಲ್ಲಿ ಅದಿತಿ ಪ್ರಭುದೇವ ಹಾಗೂ ನಾರಾಯಣ ಪಿಳ್ಳೈ ಅವತಾರದಲ್ಲಿ ಡಾಲಿ ಧನಂಜಯ್ ಪಾತ್ರಗಳು ರಿವೀಲ್ ಆಗಿವೆ.
ಜಗ್ಗೇಶ್, ಅದಿತಿ, ಧನಂಜಯ್ ಒಬ್ಬೊಬ್ಬರಿಗೂ ಒಂದೊಂದು ಡೈಲಾಗ್
'ತೋತಾಪುರಿ' ಪಾತ್ರಗಳನ್ನು ಪರಿಚಯಿಸುತ್ತಿರುವ ಪೋಸ್ಟರ್ಗಳು ಕಿಕ್ ಕೊಡುತ್ತಿವೆ. ವಿಶೇಷ ಅಂದರೆ, ಈ ಪೋಸ್ಟರ್ಗಳಲ್ಲಿ ಒಂದೊಂದು ಡೈಲಾಗ್ ಕೂಡ ಬಿಡಲಾಗಿದೆ. ಇದು ಸಿನಿಪ್ರೇಮಿಗಳನ್ನು ಸೆಳೆಯುತ್ತಿವೆ. "ಮಣ್ಣಿನ ಮಮತೆ ಮನುಕುಲಕ್ಕೆ ದಕ್ಕಿದಾಗಲೇ ಮಂದಿರ, ಮಸೀದಿ, ಚರ್ಚ್, ಜೀವಂತ. ಅಷ್ಟೇ ಯಾಕೆ ಸ್ಮಶಾನವೂ ಹೌದು..!" ಇದು ನವರಸ ನಾಯಕ ಪೋಸ್ಟರ್ ಡೈಲಾಗ್. " ಮನುಷ್ಯ 'ಹರಕೆ' ತೀರ್ಸ್ದೇ ಹೋದ್ರೂ ಪರವಾಗಿಲ್ಲ. ಆದ್ರೆ, 'ಹಗೆ' ತೀರ್ಸ್ಬಾರ್ದು" ಇದು ಅದಿತಿ ಡೈಲಾಗ್. ಇನ್ನು ಡಾಲಿ ಧನಂಜಯ್ ಪೋಸ್ಟರ್ ಡೈಲಾಗ್ ಹೀಗಿದೆ, " ಮೋಡ ಕವಿದ ವಾತಾವರಣದಲ್ಲೇ 'ಮೊಡವೆ' ಬರಬೇಕೆ..? ಥತ್ತೇರಿಕೆ..!". ಸುಮನ್ ರಂಗನಾಥ್, ದತ್ತಣ್ಣ ಸೇರಿದಂತೆ ಇನ್ನೂ ಇಬ್ಬರ ಪೋಸ್ಟರ್ ಅನ್ನು ಒಂದೊಂದು ದಿನ ರಿಲೀಸ್ ಆಗಲಿದೆ.
'ತೋತಾಪುರಿ' ಬಿಡುಗಡೆ ಯಾವಾಗ?
ಒಂದು ತಿಂಗಳು 'ತೋತಾಪುರಿ' ಸಿನಿಮಾ ಪ್ರಚಾರ ಮಾಡಲು ನಿರ್ಮಾಪಕ ಸುರೇಶ್ ಪ್ಲ್ಯಾನ್ ಮಾಡಿದ್ದಾರೆ. "ಹಂತವಾಗಿ ಸಿನಿಮಾದ ಬಗ್ಗೆ ಪರಿಚಯ ಮಾಡಿಸ್ಬೇಕು ಅನ್ನುವ ಆಲೋಚನೆ ಇದೆ. ಇದಕ್ಕೆ ನಿರ್ದೇಶಕ ವಿಜಯ್ ಪ್ರಸಾದ್ ಕೂಡ ಕೈ ಜೋಡಿಸಿದ್ದು, ಕ್ರಿಯಾತ್ಮಕವಾಗಿ ಸಿನಿಮಾ ಪ್ರಚಾರ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಎಲ್ಲಾ ಅಂದುಕೊಂಡಂತೆ ಆದರೆ, ಡಿಸೆಂಬರ್ ಕೊನೆವಾರದಲ್ಲಿ ಸಿನಿಮಾ ಬಿಡುಗಡೆ ಮಾಡಬೇಕೆಂದು ಕೊಂಡಿದ್ದೇವೆ. ಆದರೆ ಚಿತ್ರಮಂದಿರಗಳು, ಬೇರೆ ಸಿನಿಮಾಗಳ ಪೈಪೋಟಿ ಎಲ್ಲವನ್ನೂ ನೋಡಿ ನಿರ್ಧಾರ ಮಾಡುತ್ತೇವೆ." ಎಂದು ನಿರ್ಮಾಪಕ ಸುರೇಶ್ ಫಿಲ್ಮಿ ಬೀಟ್ಗೆ ತಿಳಿಸಿದ್ದಾರೆ.
'ತೋತಾಪುರಿ' ಎರಡು ಭಾಗಗಳಲ್ಲಿ ರಿಲೀಸ್
"ತೋತಾಪುರಿ ಸಿನಿಮಾ ಭಾಗ-1 ಮತ್ತು ಭಾಗ-2 ಮಾದರಿಯಲ್ಲಿ ತೆರೆಕಾಣಲಿದೆ. ಈ ಚಿತ್ರದಲ್ಲಿ ಸುಮಾರು 80ಕ್ಕೂ ಅಧಿಕ ಕಲಾವಿದರಿದ್ದಾರೆ. ಅದಿತಿ ಪ್ರಭುದೇವ, ಡಾಲಿ ಧನಂಜಯ್, ದತ್ತಣ್ಣ, ಸುಮನ್ ರಂಗನಾಥ್, ವೀಣಾ ಸುಂದರ್ ಸೇರಿದಂತೆ ಸಾಕಷ್ಟು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಥೆ ಹೇಳುವುದಕ್ಕೆ ಮೂರು ಗಂಟೆ ಸಾಲುವುದಿಲ್ಲ. ಹೀಗಾಗಿ ಎರಡು ಪಾರ್ಟ್ಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತೆ." ಅಂತಾರೆ ನಿರ್ಮಾಪಕ ಸುರೇಶ್. ಒಟ್ನಲ್ಲಿ 'ತೋತಾಪುರಿ' ಹಣ್ಣಾಗುವ ಕಾಲ ಸನಿಹವಾಗಿದ್ದು, ರುಚಿ ಸವಿಯಲು ಸಮಯ ನಿಗದಿಯಾಗಬೇಕಿದೆ.