ಕೊರೊನಾದಿಂದ ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡ ಜಗ್ಗೇಶ್; ಭಾವುಕ ಪೋಸ್ಟ್
ಕೊರೊನಾ ಭೀಕರ ಸ್ಥಿತಿಗೆ ಇಡೀ ದೇಶವೇ ನಲುಗಿ ಹೋಗಿದೆ. ಎಲ್ಲಿ ನೋಡಿದ್ರು, ಎಲ್ಲಿ ಕೇಳಿದ್ರು ಸಾವು ನೋವಿನ ಸುದ್ದಿಗಳೇ ಕಾಣಸಿಗುತ್ತಿದೆ. ಕೊರೊನಾ ಸಾವಿರಾರು ಮಂದಿಯನ್ನು ಬಲಿ ಪಡೆಯುತ್ತಿದೆ. ಸಾಮಾನ್ಯರು, ಗಣ್ಯರು, ದುಡ್ಡು ಇರೋರು, ಇಲ್ಲದೆ ಇರೋರು ಯಾರನ್ನು ಬಿಡದೆ ಸಾಯಿಸುತ್ತಿದೆ.
ಪರಿಸ್ಥಿತಿ ನಿಯಂತ್ರಣ ತಪ್ಪಿದ್ದು, ಸೋಂಕಿತರು ಆಸ್ಪತ್ರೆ, ಬೆಡ್, ಆಕ್ಸಿಜನ್ ಅಂತ ಪರದಾಡುತ್ತಿದ್ದಾರೆ. ಕೊರೊನಾ ಮಹಾಮಾರಿಗೆ ಹಿರಿಯ ನಟ ಜಗ್ಗೇಶ್ ಅವರ ಆಪ್ತ ಸ್ನೇಹಿತ ಬಲಿಯಾಗಿದ್ದಾರೆ. ಈ ಬಗ್ಗೆ ನಟ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.
ತನ್ನ ಸ್ನೇಹಿತನನ್ನು ಹೆಮ್ಮಾರಿ ಹದ್ದಿನಂತೆ ಆರಿಸಿಕೊಂಡು ಹೋಯಿತಿ ಎಂದು ಹೇಳಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಜಗ್ಗೇಶ್, 'ನನ್ನ ಪಕ್ಕದಲ್ಲಿ ಕೂತು ಬಾಲ್ಯದ ನನ್ನ ತೀಟೆ ಸಹಿಸಿ ನಕ್ಕು ನಲಿದು ಜೊತೆಗೂಡಿ ಬೆಳೆದ ನನ್ನ ಬಾಲ್ಯ ಸ್ನೇಹಿತ U.V ಸತೀಶ್ ನನ್ನು ಕೋವಿಡ್ ಹೆಮ್ಮಾರಿ ಹದ್ದಿನಂತಿ ಆರಿಸಿಕೊಂಡು ಹೋಯಿತು. Am totally upset. ಆತ್ಮೀಯ ಆತ್ಮವೆ ಹೋಗಿ ಬಾ Loudly crying face ಯಾಕೆ ಈ ಶಿಕ್ಷೆ ಮನುಕುಲಕ್ಕೆ' ಎಂದು ಬರೆದುಕೊಂಡಿದ್ದಾರೆ.

ನಟ ಜಗ್ಗೇಶ್ ಅಗತ್ಯ ಇರೋರಿಗೆ ಆಕ್ಸಿಜನ್ ವ್ಯವಸ್ಥೆ ಮಾಡಿಸುವ ಪ್ರತ್ನ ಮಾಡುತ್ತಿದ್ದಾರೆ. ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಜಗ್ಗೇಶ್ ಅನೇಕರಿಗೆ ಸಹಾಯ ಮಾಡಿದ್ದಾರೆ. ನಿನ್ನೆ 23 ಜನರ ಕೊರೊನಾ ರಕ್ಷಣೆಗೆ ಮನೆಯ ಹಿರಿಯನಾಗಿ ಹೋರಾಡಿದ್ದೇನೆ ಎಂದು ಹೇಳಿದ್ದಾರೆ. ಸಾಕಷ್ಟು ಮಂದಿಗೆ ಜಗ್ಗೇಶ್ ಸಹಾಯ ಹಸ್ತ ಚಾಚುತ್ತಿದ್ದಾರೆ.


Click it and Unblock the Notifications











