Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೊರೊನಾದಿಂದ ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡ ಜಗ್ಗೇಶ್; ಭಾವುಕ ಪೋಸ್ಟ್
ಕೊರೊನಾ ಭೀಕರ ಸ್ಥಿತಿಗೆ ಇಡೀ ದೇಶವೇ ನಲುಗಿ ಹೋಗಿದೆ. ಎಲ್ಲಿ ನೋಡಿದ್ರು, ಎಲ್ಲಿ ಕೇಳಿದ್ರು ಸಾವು ನೋವಿನ ಸುದ್ದಿಗಳೇ ಕಾಣಸಿಗುತ್ತಿದೆ. ಕೊರೊನಾ ಸಾವಿರಾರು ಮಂದಿಯನ್ನು ಬಲಿ ಪಡೆಯುತ್ತಿದೆ. ಸಾಮಾನ್ಯರು, ಗಣ್ಯರು, ದುಡ್ಡು ಇರೋರು, ಇಲ್ಲದೆ ಇರೋರು ಯಾರನ್ನು ಬಿಡದೆ ಸಾಯಿಸುತ್ತಿದೆ.
ಪರಿಸ್ಥಿತಿ ನಿಯಂತ್ರಣ ತಪ್ಪಿದ್ದು, ಸೋಂಕಿತರು ಆಸ್ಪತ್ರೆ, ಬೆಡ್, ಆಕ್ಸಿಜನ್ ಅಂತ ಪರದಾಡುತ್ತಿದ್ದಾರೆ. ಕೊರೊನಾ ಮಹಾಮಾರಿಗೆ ಹಿರಿಯ ನಟ ಜಗ್ಗೇಶ್ ಅವರ ಆಪ್ತ ಸ್ನೇಹಿತ ಬಲಿಯಾಗಿದ್ದಾರೆ. ಈ ಬಗ್ಗೆ ನಟ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.
ನಟಿ ಮಾಲಾಶ್ರೀಗೆ ತಲೆಬಾಗಿ ಕ್ಷಮೆ ಕೇಳಿದ ಹಿರಿಯ ನಟ ಜಗ್ಗೇಶ್
ತನ್ನ ಸ್ನೇಹಿತನನ್ನು ಹೆಮ್ಮಾರಿ ಹದ್ದಿನಂತೆ ಆರಿಸಿಕೊಂಡು ಹೋಯಿತಿ ಎಂದು ಹೇಳಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಜಗ್ಗೇಶ್, 'ನನ್ನ ಪಕ್ಕದಲ್ಲಿ ಕೂತು ಬಾಲ್ಯದ ನನ್ನ ತೀಟೆ ಸಹಿಸಿ ನಕ್ಕು ನಲಿದು ಜೊತೆಗೂಡಿ ಬೆಳೆದ ನನ್ನ ಬಾಲ್ಯ ಸ್ನೇಹಿತ U.V ಸತೀಶ್ ನನ್ನು ಕೋವಿಡ್ ಹೆಮ್ಮಾರಿ ಹದ್ದಿನಂತಿ ಆರಿಸಿಕೊಂಡು ಹೋಯಿತು. Am totally upset. ಆತ್ಮೀಯ ಆತ್ಮವೆ ಹೋಗಿ ಬಾ Loudly crying face ಯಾಕೆ ಈ ಶಿಕ್ಷೆ ಮನುಕುಲಕ್ಕೆ' ಎಂದು ಬರೆದುಕೊಂಡಿದ್ದಾರೆ.
Recommended Video
ನಟ ಜಗ್ಗೇಶ್ ಅಗತ್ಯ ಇರೋರಿಗೆ ಆಕ್ಸಿಜನ್ ವ್ಯವಸ್ಥೆ ಮಾಡಿಸುವ ಪ್ರತ್ನ ಮಾಡುತ್ತಿದ್ದಾರೆ. ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಜಗ್ಗೇಶ್ ಅನೇಕರಿಗೆ ಸಹಾಯ ಮಾಡಿದ್ದಾರೆ. ನಿನ್ನೆ 23 ಜನರ ಕೊರೊನಾ ರಕ್ಷಣೆಗೆ ಮನೆಯ ಹಿರಿಯನಾಗಿ ಹೋರಾಡಿದ್ದೇನೆ ಎಂದು ಹೇಳಿದ್ದಾರೆ. ಸಾಕಷ್ಟು ಮಂದಿಗೆ ಜಗ್ಗೇಶ್ ಸಹಾಯ ಹಸ್ತ ಚಾಚುತ್ತಿದ್ದಾರೆ.