Don't Miss!
- News 'ಚೊಂಬು' ವಾಗ್ದಾದ: ಕಾವೇರಿ ನೀರು ಹರಿಸಿ ಕನ್ನಡಿಗರಿಗೆ ಖಾಲಿ ಚೊಂಬು ಕೊಟ್ಟಿದ್ದು ನೀವು: ಬಿಜೆಪಿ ತಿರುಗೇಟು
- Lifestyle ಸೌರಮಂಡಲದಲ್ಲಿದೆ 9ನೇ ಗ್ರಹ..! ಯಾವುದದು..? ಎಲ್ಲಿದೆ..?
- Automobiles ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಕುರುಕ್ಷೇತ್ರ' ನೋಡಿದ ರಾಕ್ ಲೈನ್ ಏನಂದ್ರು, ಜಗ್ಗೇಶ್ ನುಡಿದ ಭವಿಷ್ಯವೇನು.?
'ದಿ ವಿಲನ್' ಮುಗಿತು. 'ಕೆಜಿಎಫ್' ಸದ್ದು ಮಾಡ್ತಿದೆ. ಮುಂದೇನಿದ್ರು 'ಕುರುಕ್ಷೇತ್ರ'. ಇದು ಕನ್ನಡ ಚಿತ್ರರಂಗದಲ್ಲಿ ತಯಾರಾಗಿರುವ ಮುಂದಿನ ಸಿಡಿಬಾಂಬ್ ಎಂದು ಹೇಳಲಾಗ್ತಿದೆ. ಕನ್ನಡ ಚಿತ್ರರಂಗವನ್ನ ಇನ್ನೊಂದು ಹಂತಕ್ಕೆ ಕರೆದುಕೊಂಡು ಹೂಗುವಂತಹ ಚಿತ್ರಗಳಲ್ಲಿ 'ಕುರುಕ್ಷೇತ್ರ'ವೂ ಒಂದು ಎಂಬುದು ಚಿತ್ರವಲಯದ ಹಿರಿಯರ ಮಾತು.
ಸಂಪೂರ್ಣ ಶೂಟಿಂಗ್ ಮುಗಿಸಿರುವ 'ಕುರುಕ್ಷೇತ್ರ' ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ನಲ್ಲಿ ತೊಡಗಿಕೊಂಡಿದೆ. ಈಗಾಗಲೇ 2ಡಿ ವರ್ಷನ್ ಕೆಲಸ ಮುಗಿದಿದ್ದು, 3ಡಿ ವರ್ಷನ್ ಕೆಲಸ ನಡೆಯುತ್ತಿದೆ ಎಂಬ ಮಾಹಿತಿ ಇದೆ.
'ಕುರುಕ್ಷೇತ್ರ' ನೋಡಲಿದ್ದಾರೆ ಮುನಿರತ್ನ: ಅಂದೇ ರಿಲೀಸ್ ದಿನಾಂಕ ಫಿಕ್ಸ್.!
ಈ ಮಧ್ಯೆ ಸಿನಿಮಾ ನೋಡಿರುವ ಖ್ಯಾತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಚಿತ್ರಕ್ಕೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಈ ವಿಷ್ಯವನ್ನ ನವರಸ ನಾಯಕ ಜಗ್ಗೇಶ್ ಹಂಚಿಕೊಂಡಿದ್ದಾರೆ.
ಕುರುಕ್ಷೇತ್ರ ಕ್ಕೆ ಕಾಯುತ್ತಿರುವೆ..ರಾಕ್ ಲೈನ್ ಹೇಳಿದ ಚಿತ್ರ ತುಂಬ ಚನ್ನಾಗಿ ಮೂಡಿಬಂದಿದೆ ಎಂದು..ಪರಭಾಷೆಗೆ ಸಡ್ಡುಹೊಡಿತಾರೆ ನಮ್ ಹುಡುಗರು.
— ನವರಸನಾಯಕ ಜಗ್ಗೇಶ್ (@Jaggesh2) November 9, 2018
ಕನ್ನಡಿಚಿತ್ರರಂಗಕ್ಕೆ ಶುಕ್ರದಶೆ ಆರಂಭ.
ರಾಜಣ್ಣ ಇದ್ದಿದ್ರೆ ಎಷ್ಟು ಖುಷಿಪಡ್ತಿದ್ರೊ.
ಅವರು ಯಾವಾಗಲು ಹೇಳ್ತಿದ್ರು ಒಂದೆ ಮನಸ್ಸಿಂದ ಪ್ರೀತಿತುಂಬಿ ಎಳಿಬೇಕ್ರಿ ನಮ್ ಕನ್ನಡದತೇರು ಅಂತ.ನೆನಪಾಯಿತು https://t.co/G3AVQvfb08
'ಕುರುಕ್ಷೇತ್ರ' ಚಿತ್ರವನ್ನ ರಿಜೆಕ್ಟ್ ಮಾಡಿದ್ರಂತೆ ಈ ಬಹುಭಾಷಾ ನಟಿ.!
ಈ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಜಗ್ಗೇಶ್ ''ಕುರುಕ್ಷೇತ್ರಕ್ಕೆ ಕಾಯುತ್ತಿರುವೆ..ರಾಕ್ ಲೈನ್ ಹೇಳಿದ ಚಿತ್ರ ತುಂಬ ಚೆನ್ನಾಗಿ ಮೂಡಿಬಂದಿದೆ ಎಂದು..ಪರಭಾಷೆಗೆ ಸಡ್ಡು ಹೊಡಿತಾರೆ ನಮ್ ಹುಡುಗರು. ಕನ್ನಡಿಚಿತ್ರರಂಗಕ್ಕೆ ಶುಕ್ರದಶೆ ಆರಂಭ. ರಾಜಣ್ಣ ಇದ್ದಿದ್ರೆ ಎಷ್ಟು ಖುಷಿಪಡ್ತಿದ್ರೊ. ಅವರು ಯಾವಾಗಲು ಹೇಳ್ತಿದ್ರು ಒಂದೆ ಮನಸ್ಸಿಂದ ಪ್ರೀತಿ ತುಂಬಿ ಎಳಿಬೇಕ್ರಿ ನಮ್ ಕನ್ನಡದತೇರು ಅಂತ.ನೆನಪಾಯಿತು'' ಎಂದು ಸಂತಸ ಹಂಚಿಕೊಂಡಿದ್ದಾರೆ.
''ನನ್ನ ಕನಸು ಈಡೇರುವ ತನಕ 'ಕುರುಕ್ಷೇತ್ರ' ತೆರೆ ಮೇಲೆ ಬರಲ್ಲ'' ಎಂದ ಮುನಿರತ್ನ!
ಈ ಹಿಂದೆ ಸ್ವತಃ ನಿರ್ಮಾಪಕರೇ ಹೇಳಿದ್ದರು. 'ನವೆಂಬರ್ 10 ರಂದು ನಾನು ಕುರುಕ್ಷೇತ್ರ ಚಿತ್ರವನ್ನ ನೋಡಲಿದ್ದೇನೆ. ನೋಡಿದ ನಂತರ ಹೇಗೆ ಬಂದಿದೆ ಎಂದು ನಿರ್ಧರಿಸಿ ರಿಲೀಸ್ ಡೇಟ್ ಘೋಷಣೆ ಮಾಡುತ್ತೇನೆ' ಎಂದಿದ್ದರು. ಈಗ ರಾಕ್ ಲೈನ್ ವೆಂಕಟೇಶ್ ಸಿನಿಮಾ ನೋಡಿರುವುದಾಗಿ ಜಗ್ಗೇಶ್ ಹೇಳಿರುವುದನ್ನ ಗಮನಿಸಿದ್ರೆ, ಆಲ್ ಮೋಸ್ಟ್ ಫಸ್ಟ್ ಕಾಪಿ ಸಿದ್ಧವಾಗಿದ್ದು, ಮುನಿರತ್ನ, ರಾಕ್ ಲೈನ್ ಹಾಗೂ ಇನ್ನಿತರರು ಸಿನಿಮಾ ನೋಡಿರಬಹುದು ಎನಿಸುತ್ತಿದೆ.
ಅಂದ್ಹಾಗೆ, ಕುರುಕ್ಷೇತ್ರದ ನಂತರ ನಟ ದರ್ಶನ್ ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಗಂಡುಗಲು ಮದಕರಿ ನಾಯಕ ಚಿತ್ರದಲ್ಲಿ ಅಭಿನಯಿಸಲಿದ್ದಾರೆ.