Don't Miss!
- Technology ಒಪ್ಪೋ ಸಂಸ್ಥೆಯ ಈ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ; ಆಫರ್ಗೆ ಗ್ರಾಹಕರು ಫಿದಾ!
- News Tirumala Property: ತಿರುಪತಿ ತಿರುಮಲ ಶ್ರೀವಾರಿಯ 2023-24ರ ಆಸ್ತಿ ವಿವರ ಇಲ್ಲಿದೆ..
- Automobiles ಭಾರತದ ರಸ್ತೆಯಲ್ಲಿ ಘರ್ಜಿಸುತ್ತಿರುವ ಪವರ್ಫುಲ್ ಎಪ್ರಿಲಿಯಾ ಬೈಕ್ಗಾಗಿ ಅಕ್ಸೆಸರೀಸ್ ಬಿಡುಗಡೆ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಹುದೊಡ್ಡ ಕನಸನ್ನ ಈಡೇರಿಸಿದ ಖುಷಿ, ವೇದಿಕೆಯಲ್ಲೇ ಕಣ್ಣೀರಿಟ್ಟ ಜಗ್ಗೇಶ್
ಕಳೆದ ಒಂದು ವರ್ಷದಿಂದ ತಮ್ಮ ಹುಟ್ಟೂರಿನಲ್ಲಿರುವ ಕಾಲಭೈರವೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಪಣ ತೊಟ್ಟಿದ್ದ ನವರಸ ನಾಯಕ ಜಗ್ಗೇಶ್ ಕೊನೆಗೂ ತಾವು ಅಂದುಕೊಂಡಿದ್ದ ಮಹತ್ವದ ಕೆಲಸವನ್ನ ಮಾಡಿ ಮುಗಿಸಿದ್ದಾರೆ.
ತುರುವೇಕೆರೆ ತಾಲೂಕಿನ ಅನಗೋಡು ಗ್ರಾಮದಲ್ಲಿರುವ ಕಾಲಭೈರವೇಶ್ವರ ದೇವಸ್ಥಾನವನ್ನ ಪೂರ್ಣಗೊಳಿಸಿ, ಸಂಪ್ರದಾಯವಾಗಿ ಲೋಕಾರ್ಪಣೆ ಮಾಡಿದ್ದಾರೆ ನಟ ಜಗ್ಗೇಶ್. ಈ ವಿಶೇಷ ಕಾರ್ಯಕ್ರಮಕ್ಕೆ ಮೈಸೂರಿನ ರಾಜವಂಶಸ್ಥ ಯದುವೀರ್ ಒಡೆಯರ್, ಆದಿಚುಂಚನಗಿರಿ ಮಠದ ಶಾಖಾಮಠದ ಸ್ವಾಮೀಜಿ ಪ್ರಸನ್ನನಾಥ ಸ್ವಾಮೀಜಿ ಆಗಮಿಸಿ ಶುಭಹಾರೈಸಿದರು.
ನಟ ಜಗ್ಗೇಶ್ ಅವರ ಎರಡು ಕೋರಿಕೆ ನೆರವೇರಿಸಿದ್ದರು ಸಿದ್ದಗಂಗಾ ಶ್ರೀ
ಈ ವೇಳೆ ವೇದಿಕೆಯಲ್ಲಿ ಮಾತನಾಡುತ್ತಿದ್ದ ಜಗ್ಗೇಶ್ ನಿಂತಲ್ಲೇ ಒಂದು ಕ್ಷಣ ಕಣ್ಣೀರಿಟ್ಟು ಭಾವುಕರಾದರು. ಇನ್ನು ಜಗ್ಗೇಶ್ ಅವರ ಈ ಮಹತ್ವದ ಕೆಲಸದ ಬಗ್ಗೆ ಮಾತನಾಡಿದ ಯದುವೀರ್ ಒಡೆಯರ್ ಶ್ಲಾಘನೆ ವ್ಯಕ್ತಪಡಿಸಿದರು.
ಕಾಲಭೈರವನ ಆಲಯ ಚುಂಚನಗಿರಿ ಕಿರಿಯ ಶ್ರೀಗಳು.ಶ್ರೀ ಯದುವೀರ ಕೃಷ್ಣದತ್ತ ಒಡೆಯರ್ ಗ್ರಾಮಸ್ಥರು, ಬಂಧುಗಳು,ನಲ್ಮೆಯ #ಮಾಧ್ಯಮಮಿತ್ರರ ಸಹಕಾರ ಶುಭ ಹಾರೈಕೆಯಿಂದ ಲೋಕಾರ್ಪಣೆ ಆಯಿತು!
— ನವರಸನಾಯಕ ಜಗ್ಗೇಶ್ (@Jaggesh2) February 9, 2019
ನಾನು ನೆಪಮಾತ್ರ!ಕಲಾರಂಗ ಕನ್ನಡಿಗರ ಚಪ್ಪಾಳೆಯೇ ಈ ಕಾರ್ಯಕ್ಕೆ ಮೂಲ ಪ್ರೇರಣೆ.ಆ ಆಲಯದ ಕಲ್ಲಿನಲ್ಲಿ ಕಲಾಭಿಮಾನಿಗಳ ಹಾರೈಕೆ ಹಾಗು 38ವರ್ಷದ ನನ್ನ ಬೆವರಿದೆ!ಶುಭದಿನ. pic.twitter.com/SVFc7Scyg4
ಕಳೆದ ಒಂದು ವರ್ಷದಿಂದ ನಟ ಜಗ್ಗೇಶ್ ತಮ್ಮ ಊರಿಗೆ ಹೋದಾಗ ದೇವಸ್ಥಾನ ಕಂಡು ನೂತನ ದೇವಸ್ಥಾನ ಕಟ್ಟಿಸುವ ಸಂಕಲ್ಪ ಮಾಡಿಕೊಂಡಿದ್ದರು. ಪುರೋಹಿತರನ್ನು ಸಂಪರ್ಕಿಸಿ ದೇವಸ್ಥಾನ ಕಟ್ಟುವ ಕಾರ್ಯದಲ್ಲಿ ತಲ್ಲೀನರಾದರು. ಜ್ಯೋತಿಷಿಗಳ ಮಾರ್ಗದರ್ಶನದಂತೆ, ಕಾಶಿ ಪಟ್ಟಣಕ್ಕೆ ಹೋಗಿ ಬಂದು ಹಾಗೂ ಒಂದು ರಾತ್ರಿ ಚಾಂಡಾಲ ವೃತ್ತಿಯನ್ನ ಮಾಡೋ ಸಲುವಾಗಿ ಬೆಂಗಳೂರಿನ ಹರಿಶ್ಚಂದ್ರ ಘಾಟ್ ನಲ್ಲಿ ಸಂಜೆ 7 ಗಂಟೆಯಿಂದ ಬೆಳಗಿನ ಜಾವ ನಾಲ್ಕೂವರೆ ವರೆಗೂ 11 ಶವಸಂಸ್ಕಾರ ಗಳ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.
'ಸಿದ್ದಗಂಗಾ ಶ್ರೀಗಳಿಂದ ಈ ವಸ್ತುವನ್ನು ಕಿತ್ತುಕೊಂಡು ಬಂದಿದ್ದೆ' - ಜಗ್ಗೇಶ್
ಭೈರವನ ಆಲಯ ನಿರ್ಮಾಣ ಮೊದಲು #ಕಾಶಿಯಲ್ಲಿ
— ನವರಸನಾಯಕ ಜಗ್ಗೇಶ್ (@Jaggesh2) February 9, 2019
7 ತಲೆಮಾರು ಪಿತೃಗಳಿಗೆ ತರ್ಪಣ!
ಕಾಶಿಯಲ್ಲಿ ಹರಿಶ್ಚಂದ್ರಕಾದ ಸ್ಮಶಾಣದಲ್ಲಿ ಸ್ಮಶಾಣಸೇವೆ(ಶ್ರೀರಾಮಪುರ ಸ್ಮಶಾಣವಲ್ಲಾ)
ಮರುದಿನ ಗಂಗಾ ಪುಣ್ಯಸ್ನಾನ!
ಕಾಶಿವಿಶ್ವನಾಥನ ಸನ್ನಿಧಿಯಲ್ಲಿ ಪ್ರಾರ್ಥನೆ ಜಪ!ನಂತರ ಕಾಶಿಮೂಲ ಭೈರವನಿಗೆ ಸ್ಥಾಪನೆಯ ಹರಕೆ!ಇದಾದ ಮೇಲೆ ಆಲಯ ನಿರ್ಮಾಣ!ಈ ಕ್ರಮ ಪಾಲಿಸಿದ್ದು!🙏 pic.twitter.com/wI5Bf0cIfG
ನಂತರ ವಿಭೂತಿ ಬೆಳೆದು ಗಂಗಾ ಸ್ನಾನ ಮಾಡಿ ಕಾಶಿಗೆ ಹೋಗಿ ಶಿವನ ಪ್ರಾರ್ಥನೆ ಮತ್ತು ರುದ್ರಾಭಿಷೇಕ ಮುಗಿಸಿ ಕಾಲಭೈರವೇಶ್ವರನ ಮುಂದೆ ನಿಂತು ಪ್ರಾರ್ಥನೆ ಮಾಡಿದ ಬಳಿಕ ಇವರ ಕಾಲಿಗೆ ಒಂದು ಬಳೆ ಹಾಕಿಸಿಕೊಂಡಿದ್ದಾರೆ.
ಹೀಗೆ, ಕಳೆದ ಒಂದು ವರ್ಷದಿಂದ ಕಾಲಭೈರವೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಮಾಡಿದ್ದ ವ್ರತವನ್ನ ಮುಗಿಸಿ ದೇವರ ಎದುರು ಮಂಡಿಯೂರಿದ್ದಾರೆ. ಒಟ್ಟಾರೆ, ರಾಜಕೀಯ, ಸಿನಿಮಾದಲ್ಲಿ ನಟನೆಯ ಜೊತೆಗೂ ತಮ್ಮ ಹುಟ್ಟೂರಿನ ದೇವಸ್ಥಾನವನ್ನ ಜೀರ್ಣೋದ್ಧಾರ ಮಾಡಿ ಆಧ್ಯಾತ್ಮದ ಕಡೆ ಹೆಚ್ಚು ಒಲವು ತೋರುತ್ತಿದ್ದಾರೆ.