Don't Miss!
- Lifestyle 5 ನಿಮಿಷದಲ್ಲಿ ಪಾತ್ರೆಯನ್ನು ಹೊಳೆಯುವಂತೆ ಮಾಡಿ..! ಸುಲಭದ ಟಿಪ್ಸ್ ಇಲ್ಲಿದೆ
- News ಬೆಂಗಳೂರಿನ ಜನತೆಗೆ ಬಾಂಬು..ಮತಾಂಧರಿಗೆ ಕೊಂಬು: ಚೊಂಬು ಜಾಹೀರಾತಿಗೆ ಆರ್.ಅಶೋಕ್ ಗುಡುಗು
- Technology oneplus: ಒನ್ಪ್ಲಸ್ನಿಂದ ಫ್ಲ್ಯಾಗ್ಶಿಪ್ ಕ್ಯಾಮೆರಾ ಸೌಲಭ್ಯದೊಂದಿಗೆ ಫ್ಲಿಪ್ ಫೋನ್!
- Automobiles Bangaluru: ನಮ್ಮ ಯಾತ್ರಿ ಕ್ಯಾಬ್ ಸೇವೆ ಆರಂಭ.. ಎಷ್ಟಿದೆ ದರ?
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಾಯಕ ಎಲ್.ಎನ್ ಶಾಸ್ತ್ರಿಗೆ ನಟ ಜಗ್ಗೇಶ್ ನೆರವು
ಕ್ಯಾನ್ಸರ್ ನಿಂದ ಬಳಲುತ್ತಿರುವ ಗಾಯಕ, ಸಂಗೀತ ನಿರ್ದೇಶಕ ಎಲ್.ಎನ್.ಶಾಸ್ತ್ರಿ ಅವರಿಗೆ ಸಹಾಯ ಮಾಡಲು ನವರಸ ನಾಯಕ ಜಗ್ಗೇಶ್ ಮುಂದಾಗಿದ್ದಾರೆ.
ಎಲ್. ಎನ್. ಶಾಸ್ತ್ರಿ ಕನ್ನಡದ ಖ್ಯಾತ ಗಾಯಕ. ಸುಮಾರು 300ಕ್ಕೂ ಗೀತೆಗಳನ್ನು ಇವರು ಹಾಡಿದ್ದಾರೆ. 1996ರಲ್ಲಿ ತೆರೆಕಂಡಿದ್ದ 'ಅಜಗಜಾಂತರ' ಸಿನಿಮಾ ಮೂಲಕ ಇವರು ಚಿತ್ರರಂಗಕ್ಕೆ ಕಾಲಿಟ್ಟರು. ಜಗ್ಗೇಶ್ ಅವರ ಅನೇಕ ಚಿತ್ರಗಳಲ್ಲಿ ಶಾಸ್ತ್ರಿ ಕೆಲಸ ಮಾಡಿದ್ದಾರೆ.
ಸದ್ಯ ಇವರು ಕ್ಯಾನ್ಸರ್ನಿಂದ ಬಳಲುತ್ತಿದ್ದು, ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಇದನ್ನು ಗಮನಿಸಿದ ನಟ ಜಗ್ಗೇಶ್, ಆರ್ಥಿಕವಾಗಿ ಸಹಾಯ ಮಾಡಲು ನಿರ್ಧರಿಸಿದ್ದಾರೆ.
ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಗಾಯಕ ಎಲ್.ಎನ್.ಶಾಸ್ತ್ರಿ
ಈ ಕುರಿತು ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿರುವ ಜಗ್ಗೇಶ್, ''ನನಗೆ ಹಾಡಿದ ಮಹನೀಯ, ನಾನು ಸಹಾಯ ಮಾಡುವೆ. ಸಂಬಂಧಪಟ್ಟವರಿಗೆ ಈಗಲೇ ಮಾತಾಡುವೆ. ದೇವರೆ ತುಂಬ ದುಖ್ಖವಾಯಿತು, ದೇವರಂತ ಮನುಷ್ಯನಿಗೆ ಈ ಪರೀಕ್ಷೆ ಏಕೆ? ರಾಯರ ದಯೇ ಇರಲಿ ಇವರ ಮೇಲೆ'' ಎಂದಿದ್ದಾರೆ.
ನನಗೆ ಹಾಡಿದ ಮಹನೀಯ:)ನಾನು ಸಹಾಯ ಮಾಡುವೆ! ಸಂಬಂಧಪಟ್ಟವರಿಗೆ ಈಗಲೆ ಮಾತಾಡುವೆ!ದೇವರೆ ತುಂಬ ದುಖ್ಖವಾಯಿತು!ದೇವರಂತ ಮನುಷ್ಯನಿಗೆ ಈ ಪರೀಕ್ಷೆ!ರಾಯರದಯೇ ಇರಲಿ ಇವರ ಮೇಲೆ. https://t.co/YBsPnbCDD6
— ನವರಸನಾಯಕ ಜಗ್ಗೇಶ್ (@Jaggesh2) August 18, 2017
''ಅವರು ಭಾವಜೀವಿ, 'ಭಂಡ ನನ್ನ ಗಂಡ' ಚಿತ್ರಕ್ಕೆ ರಾತ್ರಿಯಲ್ಲಾ ನನ್ನ ಜೊತೆ ಕೂತು 'ಅಂತಿಂಥ ಗಂಡು ನಾನಲ್ಲಾ' ಹಾಡಲು ಸಹಾಯ ಮಾಡಿದ್ದರು. ನನ್ನ ಅನೇಕ ಚಿತ್ರಕ್ಕೆ ಈತನೆ ಹಾಡುತಿದ್ದ'' ಎಂದಿದ್ದಾರೆ.
ಭಂಡ ನನ್ನ ಗಂಡ" ಚಿತ್ರಕ್ಕೆ ರಾತ್ರಿಯಲ್ಲಾ ನನ್ನ ಜೊತೆ ಕೂತು"ಅಂತಿಂಥ ಗಂಡು ನಾನಲ್ಲಾ ಹಾಡಲು ಸಹಾಯಮಾಡಿ ನನ್ನ ಅನೇಕ ಚಿತ್ರಕ್ಕೆ ಈತನೆ ಹಾಡುತಿದ್ದ! ಬಹಳ ಭಾವನಾಜೀವಿ:) https://t.co/JMW32WHCCu
— ನವರಸನಾಯಕ ಜಗ್ಗೇಶ್ (@Jaggesh2) August 18, 2017