Don't Miss!
- News Congress Candidate List: ಟಿಕೆಟ್ ಹಂಚಿಕೆ ನಿರ್ಣಾಯಕ ಸಭೆ, ದೆಹಲಿಗೆ ಸಿದ್ದರಾಮಯ್ಯ
- Technology Best Coolers: ಭಾರತದಲ್ಲಿ 5 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯ ಇರುವ ಅತ್ಯುತ್ತಮ ಕೂಲರ್ಗಳು! ಫೀಚರ್ಸ್ ಏನಿದೆ?
- Sports IPL 2024: ಮುಂಬೈ ಇಂಡಿಯನ್ಸ್ಗೆ ಆಘಾತದ ಮೇಲೆ ಆಘಾತ; ಸ್ಟಾರ್ ಬೌಲರ್ ಔಟ್
- Lifestyle ಫ್ಲ್ಯಾಟ್ನಲ್ಲಿ ವಾಸಿಸಲು ಹೋಗುವಾಗ ಸಮೃದ್ಧಿ, ಆರೋಗ್ಯಕ್ಕಾಗಿ ವಾಸ್ತು ಹೀಗಿದೆಯೇ ಎಂದು ನೋಡಬೇಕು
- Automobiles ಡಿ ಬಾಸ್ ಪತ್ನಿ ಖರೀದಿಸಿದ್ದು ಸಾಮಾನ್ಯ ಕಾರಲ್ಲ: ಬಂಗಲೆಯಂತಹ ಇಂಟೀರಿಯರ್!
- Finance ಭಾರತದಲ್ಲಿ ಚಿನ್ನದ ಬೆಲೆ ಇಳಿಕೆ, ನಿಮ್ಮ ನಗರದಲ್ಲಿ 24 ಕ್ಯಾರೆಟ್ ಚಿನ್ನದ ದರ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಾಂಜಾ ನಶೆಯಲ್ಲಿ ಕೋಮಲ್ ಮೇಲೆ ಹಲ್ಲೆ ಮಾಡಿದ್ದಾರೆ: ಜಗ್ಗೇಶ್
Recommended Video
ಬೆಂಗಳೂರಿನ ಮಂತ್ರಿ ಸ್ಕ್ವಯರ್ ಬಳಿ ನಟ ಕೋಮಲ್ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ಮಾಡಿದ್ದು, ಈ ಪ್ರಕರಣ ಈಗ ಮಲ್ಲೇಶ್ವರ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಕಾರಿನಲ್ಲಿ ಚಲಿಸುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಆ ವ್ಯಕ್ತಿ ಏಕಾಏಕಿ ಕೋಮಲ್ ಮೇಲೆ ಮುಗಿಬಿದ್ದು, ಹಲ್ಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ನಟ ಜಗ್ಗೇಶ್ ''ಆ ವ್ಯಕ್ತಿ ಗಾಂಜಾ ಸೇವಿಸಿದ್ದ, ಜೊತೆಯಲ್ಲಿ ಹುಡುಗಿ ಇದ್ದಳು, ಮದ್ಯಪಾನ ಕೂಡ ಮಾಡಿದ್ದ'' ಎಂದು ಆರೋಪಿಸಿದ್ದಾರೆ.
ಹಾಡುಹಗಲೆ 'ಬೀದಿ ಕಾಳಗ'ಕ್ಕಿಳಿದ ನಟ ಕೋಮಲ್
ಮಲ್ಲೇಶ್ವರ ಪೊಲೀಸ್ ಠಾಣೆ ಬಳಿ ಭೇಟಿ ನೀಡಿದ ಕೋಮಲ್ ಸಹೋದರ ಜಗ್ಗೇಶ್ ಅವರು ಮಾಧ್ಯಮಗಳ ಬಳಿ ಮಾತನಾಡಿದ್ದು, ''ಕೋಮಲ್ ಮಗಳನ್ನು ಟ್ಯೂಷನ್ಗೆ ಬಿಡಲು ಹೋಗಿದ್ದರು. ಈ ವೇಳೆ ವ್ಯಕ್ತಿಯೊಬ್ಬ ಕುಡಿದಿದ್ದ, ಗಾಂಜಾ ಸೇವನೆ ಮಾಡಿದ್ದ, ಜೊತೆಯಲ್ಲಿ ಯಾರೋ ಹುಡುಗಿ ಬೇರೆ ಇದ್ದಳು. ಇವರದ್ದೆಲ್ಲ ಒಂದು ಗ್ಯಾಂಗ್ ಇರುತ್ತೆ. ಬೆಂಗಳೂರಿನಲ್ಲಿ ಇಂತಹ ಜನರ ಅಟ್ಟಹಾಸ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕಬೇಕಿದೆ'' ಎಂದು ಹೇಳಿದರು.
''ಈ ಹಲ್ಲೆಯಿಂದ ಚಿತ್ರರಂಗದವರ ಕೈವಾಡ ಇದ್ಯಾ ಅಥವಾ ಬೇರೆ ಯಾರಾದರೂ ಇದ್ದಾರಾ ಹಲವು ಅನುಮಾನ ಬರುತ್ತೆ. ಸದ್ಯಕ್ಕೆ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದೇನೆ. ಇಂತಹವರಿಗೆ ಬುದ್ದಿ ಕಲಿಸಬೇಕಿದೆ'' ಎಂದು ಜಗ್ಗೇಶ್ ಆಹೇಳಿದರು.
''ಬೆಂಗಳೂರಿನಲ್ಲಿ ದಾದಾಗಿರಿ ಹೆಚ್ಚಾಗಿದೆ. ನಾವು ಸಾಧುಗಳ ರೀತಿ ಬದುಕುತ್ತಿದ್ದೇವೆ. ಇದನ್ನ ತಡೆಯಬೇಕು. ಹೇಳುವವರಿಲ್ಲ, ಕೇಳುವವರಿಲ್ಲ ಎಂಬ ಭಂಡತನ ಅವರಲ್ಲಿದೆ. ಇದಕ್ಕೆ ಕೊನೆ ಹಾಡಬೇಕು'' ಎಂದು ಪೊಲೀಸರನ್ನು ಒತ್ತಾಯಿಸಿದರು.
ಸದ್ಯ ಕೋಮಲ್ ಅವರ ಮೇಲೆ ಹಲ್ಲೆ ಮಾಡಿದ ವ್ಯಕ್ತಿಯನ್ನ ಮಲ್ಲೇಶ್ವರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಎಫ್.ಐ.ಆರ್ ದಾಖಲಾಗುವ ಸಾಧ್ಯತೆ ಇದೆ. ಜಗ್ಗೇಶ್ ಅವರು ಕೂಡ ಪೊಲೀಸರ ಬಳಿ ಎಫ್.ಐ.ಆರ್ ದಾಖಲಿಸುವಂತೆ ಮನವಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.