Don't Miss!
- News ಲೋಕಸಭಾ ಚುನಾವಣೆ: ಮೈಸೂರು ಜಿಲ್ಲೆಯಲ್ಲಿ ಭದ್ರತೆಗೆ 5 ಸಾವಿರ ಪೊಲೀಸರ ನಿಯೋಜನೆ
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಪ್ರೀಮಿಯರ್ ಪದ್ಮಿನಿ' ಕಥೆ ಕದ್ದ ಆರೋಪದ ಬಗ್ಗೆ ಜಗ್ಗೇಶ್ ಪ್ರತಿಕ್ರಿಯೆ
ನವರಸ ನಾಯಕ ಜಗ್ಗೇಶ್ ಅಭಿನಯದ 'ಪ್ರೀಮಿಯರ್ ಪದ್ಮಿನಿ' ಸಿನಿಮಾ ಕಳೆದ ಎರಡು ವಾರದ ಹಿಂದೆ ಬಿಡುಗಡೆಯಾಗಿತ್ತು. ಸಿನಿಮಾ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಒಳ್ಳೆಯ ಸಿನಿಮಾ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಸಿನಿಮಾ ಯಶಸ್ಸು ಆಯ್ತು ಎಂದು ಸಂಭ್ರಮಿಸುತ್ತಿರುವಾಗಲೇ ಚಿತ್ರದ ಮೇಲೆ ಕಥೆ ಕದ್ದ ಆರೋಪ ಕೇಳಿ ಬಂದಿದೆ. ಚಿತ್ರದಲ್ಲಿ ಬರುವ ನಂಜುಂಡಿ ಪಾತ್ರವನ್ನ ಬರಹಗಾರ ವಸುಧೇಂದ್ರ ಬರೆದಿರುವ ವರ್ಣಮಯ ಎಂಬ ಪುಸ್ತುಕದಲ್ಲಿರುವ ನಂಜುಂಡಿ ಎಂಬ ಪ್ರಬಂಧ ಪಾತ್ರವಾಗಿದೆಯಂತೆ. ಈ ಪಾತ್ರವನ್ನ ಯಥಾವತ್ತಾಗಿ ಬಳಸಿಕೊಳ್ಳಲಾಗಿದೆ.
ಈ ಬಗ್ಗೆ ಅನುಮತಿಯೂ ಪಡೆದಿಲ್ಲ, ಕ್ರೆಡಿಟ್ ಕೊಡಲಿಲ್ಲ ಎಂಬ ಆರೋಪ ಮಾಡಿದ್ದಾರೆ. ಈ ಬಗ್ಗೆ ಚಿತ್ರದ ನಿರ್ಮಾಪಕಿ ಶ್ರುತಿ ನಾಯ್ಡು ನಿರಾಕರಿಸಿದ್ದು, ಸ್ಫೂರ್ತಿಯಾಗಿ ಎರಡ್ಮೂರು ದೃಶ್ಯ ಬಳಸಿಬರಹುದು ಅಷ್ಟೇ. ಕೃತಿಚೌರ್ಯ ಆರೋಪ ಮಾಡುವುದು ಸರಿಯಲ್ಲ ಎಂದಿದ್ದರು.
ಕಥೆ ಕದ್ದ ಆರೋಪದಲ್ಲಿ 'ಪ್ರೀಮಿಯರ್ ಪದ್ಮಿನಿ': ಬರಹಗಾರ ವಸುಧೇಂದ್ರ ಆರೋಪ
ಈ ಬಗ್ಗೆ ನಟ ಜಗ್ಗೇಶ್ ಏನು ಹೇಳುತ್ತಾರೆ ಎಂಬ ಕುತೂಹಲವಿತ್ತು. ಆದ್ರೆ, ಈ ಬಗ್ಗೆ ಪ್ರೀಮಿಯರ್ ಪದ್ಮಿನಿ ನಾಯಕ ಏನೇನೂ ಮಾತನಾಡಿರಲಿಲ್ಲ. ಇದೀಗ, ಅಭಿಮಾನಿಯೊಬ್ಬರ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಜಗ್ಗಣ್ಣ ಪರೋಕ್ಷವಾಗಿ ಕೃತಿಚೌರ್ಯ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
'ಪ್ರೀಮಿಯರ್ ಪದ್ಮಿನಿ' ಕಥೆ ಕದ್ದ ಆರೋಪ ನಿರಾಕರಿಸಿದ ನಿರ್ಮಾಪಕಿ ಶ್ರುತಿ ನಾಯ್ಡು
''ಗೆಲುವಿಗೆ
ನೂರಾರು
ಪಿತಾಮಹರು..!
ಸೋಲು
ಅನಾಥ
ಕೂಸು..!
ಇದ್ದಾಗ
ನೂರಾರು
ನೆಂಟರು.!
ಇಲ್ಲದಾಗ
ಶಟ್ಟರ
ಅಂಗಡಿ
ಬಾಗಿಲು
ಬಂದ್.!
ಬದುಕು
ಒಂದು
ಯುದ್ಧ
ಭೂಮಿ
ಯುದ್ಧ
ಮಾಡಿಗೆಲ್ಲು.!
ಗೆದ್ದರೆ
ಹೂವಿನ
ಹಾರ..!
ಬಿದ್ದರೆ
ಬೆನ್ನಮೇಲೆ
ಅಪಮಾನದ
ಭಾರ..!
ನಗುತ
ನಗಿಸುತ್ತ
ಎಲ್ಲಾ
ನೋಡಿ
ಮುಗುಳು
ನಗೆ
ಬೀರಿ
ಬದುಕಬೇಕು..!
ಅದೆ
ಶ್ರೇಷ್ಟ
ಬದುಕು..!''
ಎಂದಿದ್ದಾರೆ.
ಗೆಲುವಿಗೆ ನೂರಾರು ಪಿತಾಮಹರು..!
— ನವರಸನಾಯಕ ಜಗ್ಗೇಶ್ (@Jaggesh2) May 11, 2019
ಸೋಲು ಅನಾಥ ಕೂಸು..!
ಇದ್ದಾಗ ನೂರಾರು ನೆಂಟರು.!
ಇಲ್ಲದಾಗ ಶಟ್ಟರ ಅಂಗಡಿ ಬಾಗಿಲು ಬಂದ್.!
ಬದುಕು ಒಂದು ಯುದ್ಧ ಭೂಮಿ
ಯುದ್ಧ ಮಾಡಿಗೆಲ್ಲು.!
ಗೆದ್ದರೆ ಹೂವಿನ ಹಾರ..!
ಬಿದ್ದರೆ ಬೆನ್ನಮೇಲೆ ಅಪಮಾನದ ಭಾರ..!
ನಗುತ ನಗಿಸುತ್ತ ಎಲ್ಲಾ ನೋಡಿ ಮುಗುಳು
ನಗೆ ಬೀರಿ ಬದುಕಬೇಕು..!
ಅದೆ ಶ್ರೇಷ್ಟ ಬದುಕು..! https://t.co/jDnm7m1sQH
ರಮೇಶ್ ಇಂದಿರಾ ನಿರ್ದೇಶನ ಮಾಡಿದ್ದ ಪ್ರೀಮಿಯರ್ ಪದ್ಮಿನಿ ಸಿನಿಮಾದಲ್ಲಿ ಜಗ್ಗೇಶ್, ಮಧುಬಾಲ, ಸುಧಾರಾಣಿ, ಹಿತಾ ಚಂದ್ರಶೇಖರ್, ಪ್ರಮೋದ್ ಪಂಜು, ವಿವೇಕ್ ಸಿಂಹ, ದತ್ತಣ್ಣ ಸೇರಿದಂತೆ ಹಲವರು ನಟಿಸಿದ್ದರು.