Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಪ್ರೀಮಿಯರ್ ಪದ್ಮಿನಿ' ಕಥೆ ಕದ್ದ ಆರೋಪದ ಬಗ್ಗೆ ಜಗ್ಗೇಶ್ ಪ್ರತಿಕ್ರಿಯೆ
ನವರಸ ನಾಯಕ ಜಗ್ಗೇಶ್ ಅಭಿನಯದ 'ಪ್ರೀಮಿಯರ್ ಪದ್ಮಿನಿ' ಸಿನಿಮಾ ಕಳೆದ ಎರಡು ವಾರದ ಹಿಂದೆ ಬಿಡುಗಡೆಯಾಗಿತ್ತು. ಸಿನಿಮಾ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಒಳ್ಳೆಯ ಸಿನಿಮಾ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಸಿನಿಮಾ ಯಶಸ್ಸು ಆಯ್ತು ಎಂದು ಸಂಭ್ರಮಿಸುತ್ತಿರುವಾಗಲೇ ಚಿತ್ರದ ಮೇಲೆ ಕಥೆ ಕದ್ದ ಆರೋಪ ಕೇಳಿ ಬಂದಿದೆ. ಚಿತ್ರದಲ್ಲಿ ಬರುವ ನಂಜುಂಡಿ ಪಾತ್ರವನ್ನ ಬರಹಗಾರ ವಸುಧೇಂದ್ರ ಬರೆದಿರುವ ವರ್ಣಮಯ ಎಂಬ ಪುಸ್ತುಕದಲ್ಲಿರುವ ನಂಜುಂಡಿ ಎಂಬ ಪ್ರಬಂಧ ಪಾತ್ರವಾಗಿದೆಯಂತೆ. ಈ ಪಾತ್ರವನ್ನ ಯಥಾವತ್ತಾಗಿ ಬಳಸಿಕೊಳ್ಳಲಾಗಿದೆ.
ಈ ಬಗ್ಗೆ ಅನುಮತಿಯೂ ಪಡೆದಿಲ್ಲ, ಕ್ರೆಡಿಟ್ ಕೊಡಲಿಲ್ಲ ಎಂಬ ಆರೋಪ ಮಾಡಿದ್ದಾರೆ. ಈ ಬಗ್ಗೆ ಚಿತ್ರದ ನಿರ್ಮಾಪಕಿ ಶ್ರುತಿ ನಾಯ್ಡು ನಿರಾಕರಿಸಿದ್ದು, ಸ್ಫೂರ್ತಿಯಾಗಿ ಎರಡ್ಮೂರು ದೃಶ್ಯ ಬಳಸಿಬರಹುದು ಅಷ್ಟೇ. ಕೃತಿಚೌರ್ಯ ಆರೋಪ ಮಾಡುವುದು ಸರಿಯಲ್ಲ ಎಂದಿದ್ದರು.
ಕಥೆ ಕದ್ದ ಆರೋಪದಲ್ಲಿ 'ಪ್ರೀಮಿಯರ್ ಪದ್ಮಿನಿ': ಬರಹಗಾರ ವಸುಧೇಂದ್ರ ಆರೋಪ
ಈ ಬಗ್ಗೆ ನಟ ಜಗ್ಗೇಶ್ ಏನು ಹೇಳುತ್ತಾರೆ ಎಂಬ ಕುತೂಹಲವಿತ್ತು. ಆದ್ರೆ, ಈ ಬಗ್ಗೆ ಪ್ರೀಮಿಯರ್ ಪದ್ಮಿನಿ ನಾಯಕ ಏನೇನೂ ಮಾತನಾಡಿರಲಿಲ್ಲ. ಇದೀಗ, ಅಭಿಮಾನಿಯೊಬ್ಬರ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಜಗ್ಗಣ್ಣ ಪರೋಕ್ಷವಾಗಿ ಕೃತಿಚೌರ್ಯ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
'ಪ್ರೀಮಿಯರ್ ಪದ್ಮಿನಿ' ಕಥೆ ಕದ್ದ ಆರೋಪ ನಿರಾಕರಿಸಿದ ನಿರ್ಮಾಪಕಿ ಶ್ರುತಿ ನಾಯ್ಡು
''ಗೆಲುವಿಗೆ
ನೂರಾರು
ಪಿತಾಮಹರು..!
ಸೋಲು
ಅನಾಥ
ಕೂಸು..!
ಇದ್ದಾಗ
ನೂರಾರು
ನೆಂಟರು.!
ಇಲ್ಲದಾಗ
ಶಟ್ಟರ
ಅಂಗಡಿ
ಬಾಗಿಲು
ಬಂದ್.!
ಬದುಕು
ಒಂದು
ಯುದ್ಧ
ಭೂಮಿ
ಯುದ್ಧ
ಮಾಡಿಗೆಲ್ಲು.!
ಗೆದ್ದರೆ
ಹೂವಿನ
ಹಾರ..!
ಬಿದ್ದರೆ
ಬೆನ್ನಮೇಲೆ
ಅಪಮಾನದ
ಭಾರ..!
ನಗುತ
ನಗಿಸುತ್ತ
ಎಲ್ಲಾ
ನೋಡಿ
ಮುಗುಳು
ನಗೆ
ಬೀರಿ
ಬದುಕಬೇಕು..!
ಅದೆ
ಶ್ರೇಷ್ಟ
ಬದುಕು..!''
ಎಂದಿದ್ದಾರೆ.
ಗೆಲುವಿಗೆ ನೂರಾರು ಪಿತಾಮಹರು..!
— ನವರಸನಾಯಕ ಜಗ್ಗೇಶ್ (@Jaggesh2) May 11, 2019
ಸೋಲು ಅನಾಥ ಕೂಸು..!
ಇದ್ದಾಗ ನೂರಾರು ನೆಂಟರು.!
ಇಲ್ಲದಾಗ ಶಟ್ಟರ ಅಂಗಡಿ ಬಾಗಿಲು ಬಂದ್.!
ಬದುಕು ಒಂದು ಯುದ್ಧ ಭೂಮಿ
ಯುದ್ಧ ಮಾಡಿಗೆಲ್ಲು.!
ಗೆದ್ದರೆ ಹೂವಿನ ಹಾರ..!
ಬಿದ್ದರೆ ಬೆನ್ನಮೇಲೆ ಅಪಮಾನದ ಭಾರ..!
ನಗುತ ನಗಿಸುತ್ತ ಎಲ್ಲಾ ನೋಡಿ ಮುಗುಳು
ನಗೆ ಬೀರಿ ಬದುಕಬೇಕು..!
ಅದೆ ಶ್ರೇಷ್ಟ ಬದುಕು..! https://t.co/jDnm7m1sQH
ರಮೇಶ್ ಇಂದಿರಾ ನಿರ್ದೇಶನ ಮಾಡಿದ್ದ ಪ್ರೀಮಿಯರ್ ಪದ್ಮಿನಿ ಸಿನಿಮಾದಲ್ಲಿ ಜಗ್ಗೇಶ್, ಮಧುಬಾಲ, ಸುಧಾರಾಣಿ, ಹಿತಾ ಚಂದ್ರಶೇಖರ್, ಪ್ರಮೋದ್ ಪಂಜು, ವಿವೇಕ್ ಸಿಂಹ, ದತ್ತಣ್ಣ ಸೇರಿದಂತೆ ಹಲವರು ನಟಿಸಿದ್ದರು.