Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಕಂಡೋರ ಕಾಲು ಎಳೆದು ಮೇಲೆ ಬರಬೇಕು ಅನ್ನುವವರು ಕಾಲು ಕೆಳಗೆ ಇರುತ್ತಾರೆ'
ಹಿರಿಯ ನಟ ಜಗ್ಗೇಶ್ ಅವರು ದರ್ಶನ್ ಹುಡುಗರ ಕುರಿತು ಹೀಯಾಳಿಸಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಈ ಆಡಿಯೋ ಕೇಳಿದ ಬಳಿಕ ಕೆಲವು ದರ್ಶನ್ ಅಭಿಮಾನಿಗಳು ನಟ ಜಗ್ಗೇಶ್ ಅವರ ವಿರುದ್ಧ ಕೆಂಡಕಾರಿದರು. ಇನ್ನು ಕೆಲವು ಅಭಿಮಾನಿಗಳು ಜಗ್ಗೇಶ್ ಅವರ ಪರವಾಗಿಯೇ ನಿಂತರು.
Recommended Video
ದರ್ಶನ್ ಮತ್ತು ಜಗ್ಗೇಶ್ ಅವರ ನಡುವಿನ ಬಾಂಧವ್ಯ, ಸ್ನೇಹವನ್ನು ಸಹಿಸಲಾಗದವರು ಇಂತಹ ಅಪಪ್ರಚಾರ ಮಾಡ್ತಿದ್ದಾರೆ ಎಂದು ನವರಸ ನಾಯಕನಿಗೆ ಧೈರ್ಯ ತುಂಬಿದರು. ಈ ವಿಚಾರವಾಗಿ ಟ್ವಿಟ್ಟರ್ನಲ್ಲಿ ಪ್ರತಿಕ್ರಿಯಿಸಿದ್ದ ಜಗ್ಗೇಶ್ ''ಪ್ರಚಾರಕ್ಕಾಗಿ ಈ ಚಿಕ್ಕ ಹುಡುಗರ ಆಟ ಇದು'' ಎಂದು ಚಾಟಿ ಬೀಸಿದ್ದರು. ಈ ಬೆಳವಣಿಗೆ ಕುರಿತು ಜಗ್ಗೇಶ್ ತೀವ್ರ ಅಸಮಾಧಾನಗೊಂಡಿದ್ದಾರೆ. ಮುಂದೆ ಓದಿ...
ಇನ್ಮುಂದೆ ಯಾರ್ ಹತ್ರಾನು ಮಾತಾಡಲ್ಲ
''0.1% ಜನರ ಬಳಿ ಮಾತಾಡುತ್ತಿದ್ದೆ. ಇನ್ನುಮುಂದೆ ಅದು ಬಂದ್! ಪ್ರೀತಿಸಲು ಜನರಿದ್ದಾರೆ, ಕೆಲಸ ಮಾಡಲು ಉಧ್ಯಮವಿದೆ, 4 ತಲೆಮಾರು ತಿನ್ನಲು ಅನ್ನವಿದೆ, "ಕಂಡೋರ ಕಾಲು ಎಳೆದು ಮೇಲೆ ಬರಬೇಕು ಅನ್ನುವವರು ಕಾಲು ಕೆಳಗೆ ಇರುತ್ತಾರೆ ವಿನಹ ಸಣ್ಣ ಸಾಧನೆಯು ಮಾಡಲಾಗದು"
ನಮ್ಮ ಮನಸ್ಸಿನಂತೆ ನಮ್ಮ ಜೀವನ! ಯಧ್ಭಾವತಧ್ಭವತಿ!'' ಎಂದು ಅಭಿಮಾನಿಯೊಬ್ಬರ ಟ್ವೀಟ್ಗೆ ಪ್ರತಿಕ್ರಿಯಿಸಿದ್ದಾರೆ.
ದರ್ಶನ್ ಹುಡುಗರಿಗೆ 'ತಲೆ ಮಾಂಸದ' ಸರ್ಟಿಫಿಕೇಟ್: ಸಾಕ್ಷಿ ಸಮೇತ ಸಿಕ್ಕಿಬಿದ್ದ ಜಗ್ಗೇಶ್
ತಾಯಿ ನೋಡಿಕೊಳ್ಳುತ್ತಾಳೆ....
''ನೀವು ಹೇಳಿದ ದಕ್ಷಿಣ ಕಾಳಿಯ ಮೂಲಮಂತ್ರದಿಂದ ಆರಾಧಿಸಿ ದಿನ ಆರಂಭಿಸುವವ ನಾನು...ನನಗೆ ಕೇಡು ಬಯಸಿದವರ ಮನೆಬಾಗಿಲಲ್ಲಿ ನಿಂತು ಉತ್ತರಿಸುತ್ತಾಳೆ ನನ್ನ ತಾಯಿ!. ಅವಳಿರಬೇಕಾದರೆ ಅಂಜಿಕೆಯ ಭಯವೇಕೆ ಸಹೋದರ!'' ಎಂದು ಬೇಸರ ಹೊರಹಾಕಿದ್ದಾರೆ.
ಚಿತ್ರ ಪ್ರಚಾರಕ್ಕೆ ಮಾಡುವ ಹುನ್ನಾರ
''ಚಿತ್ರ ಪ್ರಚಾರಕ್ಕೆ fakenews spread ಮಾಡುವ ಹುನ್ನಾರ! ಒಬ್ಬ ಚಿಕ್ಕಹುಡುಗನದು ಈ ಆಟ!
ನಾನು ಏನು ಅಂತ ನನ್ನ ಬಲ್ಲವರಿಗೆ ಎಲ್ಲರಿಗು ತಿಳಿದಿದೆ! ಇಂಥ ವಿಷಯಕ್ಕೆ ಹೃದಯ ತೆಗೆದು ತೋರುವ ಅವಶ್ಯಕತೆ ಇಲ್ಲಾ! ಇದರ ಬಗ್ಗೆ ತಲೆಕೆಡಿಸಿಕೊಳ್ಳದೆ ಇರುವುದು ಒಳಿತು! ಈ ಪ್ರಯತ್ನದ ಮಹನೀಯರಿಗೆ ಶುಭಹಾರೈಕೆ! ಕರ್ತವ್ಯದಿಂದ ಜಗಗೆಲ್ಲಿ ನನ್ನ ವಿನಂತಿ!'' ಎಂದು ಆಡಿಯೋ ಬಗ್ಗೆ ನಿನ್ನೆ ಸ್ಪಷ್ಟನೆ ನೀಡಿದ್ದರು.
ನನ್ನ ಸತ್ಯದ ಸೊಲ್ಲು ಅಡಗಿಸಲು ಅಪಪ್ರಚಾರ ತಂತ್ರರೂಪಿಸಿದರು- ಜಗ್ಗೇಶ್ ಬೇಸರ
ದರ್ಶನ್ ಹುಡುಗರ ಬಗ್ಗೆ ಜಗ್ಗೇಶ್ ಏನ್ ಹೇಳಿದ್ದರು?
ಆಡಿಯೋದಲ್ಲಿ ನಿರ್ಮಾಪಕರೊಬ್ಬರ ಜೊತೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋದಲ್ಲಿ ಪ್ರಚಾರದ ವಿಚಾರಕ್ಕೆ ಸಂಬಂಧಪಟ್ಟಂತೆ ಸಲಹೆ ಕೊಟ್ಟಿರುವ ಜಗ್ಗೇಶ್, ಮಾತಿನ ಮಧ್ಯೆ 'ದರ್ಶನ್ ಹುಡುಗರ ಥರಾ ತಲೆ ಮಾಂಸ ಕಳಿಸಿ, ನೂರು ಕುರಿ ಕಳಿಸಿ ಅನ್ನೋರು ನನ್ನ ಬಳಿ ಇಲ್ಲ'' ಎಂದಿದ್ದರು.