twitter
    For Quick Alerts
    ALLOW NOTIFICATIONS  
    For Daily Alerts

    ಜಾತಿ ವಿಷ ಬೀಜ ಬಿತ್ತುವವರಿಗೆ ಜಗ್ಗೇಶ್ ಎಚ್ಚರಿಕೆ

    |

    Recommended Video

    ಜಾತಿ ವಿಷ ಬೀಜ ಬಿತ್ತ ಬೇಡಿ ಎಂದ ಜಗ್ಗೇಶ್..! | FILMIBEAT KANNADA

    ಕಲೆ ಎನ್ನುವುದು ಜಾತಿ ಧರ್ಮಗಳನ್ನು ಮೀರಿದ್ದು. ಆದರೆ, ಕೆಲವು ದಿನಗಳಿಂದ 'ಜಾತಿ' ಕನ್ನಡ ಚಿತ್ರರಂಗದಲ್ಲಿ ಚರ್ಚೆಯ ವಸ್ತುವಾಗಿದೆ.

    ನಟ ಸುದೀಪ್ ಹಾಗೂ ದರ್ಶನ್ ಇಬ್ಬರೂ ಮದಕರಿ ನಾಯಕರ ಬಗ್ಗೆ ಎರಡು ಸಿನಿಮಾ ಮಾಡುತ್ತಿದ್ದಾರೆ. ಆದರೆ, ಇವುಗಳಲ್ಲಿ ದರ್ಶನ್ ಮದಕರಿ ನಾಯಕರ ಪಾತ್ರ ಮಾಡಬಾರದು ಎಂದು ಕೆಲವು ಜಾತಿವಾದಿಗಳು ಒತ್ತಾಯ ಮಾಡುತ್ತಿದ್ದಾರೆ.

    jaggesh reaction about madakari nayaka movie controversy

    'ಮದಕರಿ' ವಿವಾದದ ಬಗ್ಗೆ ಮನಿಸಿಕೊಂಡೆ ಮಾತನಾಡಿದ ಮುನಿರತ್ನ! 'ಮದಕರಿ' ವಿವಾದದ ಬಗ್ಗೆ ಮನಿಸಿಕೊಂಡೆ ಮಾತನಾಡಿದ ಮುನಿರತ್ನ!

    ಈ ಬಗ್ಗೆ ಇದೀಗ ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ''ಶಾರದೆಯ ಕಲಾ ದೇಗುಲ ಚಿತ್ರರಂಗ, ಜಾತಿ ರಹಿತ ಪುಣ್ಯ ಧಾಮ! ಕಲೆಗೆ ಜಾತಿಯಿಲ್ಲ! ವಿಶ್ವದಲ್ಲೇ ಜಾತಿ ಇಲ್ಲದೆ ಒಂದೇ ತಾಯಿ ಮಕ್ಕಳಂತೆ ಬದುಕುವ ಸ್ಥಳ ಶಾರದೆ ಮಡಿಲು! ಇಂಥ ಪವಿತ್ರ ಜಾಗದಲ್ಲಿ ಜಾತಿ ವಿಷ ಬೀಜ ನೆತ್ತುವರು ಅಳಿವಿನ ಅಂಚಿಗೆ ಸರಿಯುತ್ತಾರೆ. ಮತ ರಾಜಕೀಯಕ್ಕೆ ಮೀಸಲಾದ ಜಾತಿ ಕಲೆಗೆಬೇಡ! ವಿನಾಶಕಾಲಕ್ಕೆ ವಿಪರೀತ ಬುದ್ಧಿ! ಎಚ್ಚರವಾಗಿರಿ ಕಲಾ ಬಂಧುಗಳೆ..!!'' ಎಂದು ಟ್ವೀಟ್ ಮಾಡಿದ್ದಾರೆ.

    ದರ್ಶನ್-ಸುದೀಪ್ ಗೂ ಮುಂಚೆ 'ಮದಕರಿ ನಾಯಕ'ನಾಗಿ ಮಿಂಚಿದ್ದ ದಿಗ್ಗಜರು ದರ್ಶನ್-ಸುದೀಪ್ ಗೂ ಮುಂಚೆ 'ಮದಕರಿ ನಾಯಕ'ನಾಗಿ ಮಿಂಚಿದ್ದ ದಿಗ್ಗಜರು

    ಜೊತೆಗೆ ನಿರ್ಮಾಪಕ ಮುನಿರತ್ನ ಕೂಡ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ''ರಾಜಕೀಯದಲ್ಲಿ ಜಾತಿ ಬಂದು‌ ಹಾಳಾಗಿದೆ. ಈಗ ಸಿನಿಮಾಗೆ ಜಾತಿ ತರುವುದು ಬೇಡ. ಕಲೆಯನ್ನ ಕಲೆಯಾಗಿ ನೋಡಬೇಕು. ಕಲೆಗೆ ಜಾತಿ‌ ಇಲ್ಲ. ಜಾತಿಯನ್ನು ಬಿಂಬಿಸೋದು ತಪ್ಪು.'' ಎಂದು ಜಾತಿವಾದಿಗಳಿಗೆ ತಕ್ಕ ಉತ್ತರ ನೀಡಿದ್ದಾರೆ.

    English summary
    Kannada actor Jaggesh reaction about 'Madakari Nayaka' movie controversy.
    Tuesday, October 9, 2018, 16:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X