Don't Miss!
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿಗೆ ಬಿಜೆಪಿಯ ಹೊಸ ಸಂಗಾತಿಯನ್ನ ಕೇಳಿ ಎಂದು ಟಾಂಗ್ ಕೊಟ್ಟ ಸಿದ್ದರಾಮಯ್ಯ
- Automobiles XUV300: ಮಹೀಂದ್ರಾ ಎಕ್ಸ್ಯುವಿ300 ಕಾರನ್ನು ನಿಮ್ಮ ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Finance ಲೋಕಸಭಾ ಚುನಾವಣೆ 2024: ಟಾಪ್ 10 ಶ್ರೀಮಂತ ಅಭ್ಯರ್ಥಿಗಳು ಇವರು
- Technology OnePlus: ಒನ್ಪ್ಲಸ್ ವಾಚ್ 2 ನಾರ್ಡಿಕ್ ಬ್ಲೂ ಆವೃತ್ತಿ ಲಾಂಚ್! ಬೆಲೆ ಎಷ್ಟು?
- Sports IPL 2024: ಮತ್ತೊಂದು ರೋಚಕ ಪಂದ್ಯದಲ್ಲಿ SRH vs RCB ಕದನ; ಪಂದ್ಯದ ವಿವರ, ಸಂಭಾವ್ಯ ಆಡುವ 11ರ ಬಳಗ
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶ್ರುತಿ ಪರ ನಿಂತ ಪ್ರಕಾಶ್ ರೈಗೆ ಜಗ್ಗೇಶ್ ಹೀಗಂದ್ರು!
Recommended Video
ನಟಿ ಶ್ರುತಿ ಹರಿಹರನ್ ಎಸೆದ ಮೀ ಟೂ ಬಾಂಬ್ ಸದ್ದು ಇನ್ನೂ ಕಡಿಮೆ ಆಗಿಲ್ಲ. ಒಂದು ಕಡೆ ಅರ್ಜುನ್ ಸರ್ಜಾ ಯಾವುದೇ ತಪ್ಪು ಮಾಡಿಲ್ಲ ಎಂದು ಕೆಲವರು ಅವರ ಬೆಂಬಲಕ್ಕೆ ನಿಂತರೇ, ಇನ್ನೂ ಕೆಲವರು ಶ್ರುತಿ ಪರ ಮಾತನಾಡುತ್ತಿದ್ದಾರೆ.
ಬಹುಭಾಷಾ ನಟ ಪ್ರಕಾಶ್ ರೈ ಕೂಡ ಈ ಘಟನೆಯ ಬಗ್ಗೆ ತಮ್ಮ ಪ್ರತಿಕ್ರಿಯೆ ನೀಡಿದ್ದರು. ಶ್ರುತಿ ಹರಿಹರನ್ ಪರ ಮಾತನಾಡಿದ ಅವರು ಅರ್ಜುನ್ ಸರ್ಜಾ ಕ್ಷಮೆ ಕೇಳಬೇಕು ಎಂದು ಹೇಳಿದ್ದರು. ಆದರೆ, ಪ್ರಕಾಶ್ ರೈ ಅವರ ಈ ಮಾತಿಗೆ ಈಗ ಜಗ್ಗೇಶ್ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಅರ್ಜುನ್ ಸರ್ಜಾ ಕ್ಷಮೆ ಕೇಳುವುದು ದೊಡ್ಡತನ ಎಂದ ಪ್ರಕಾಶ್ ರೈ
ಈ ವಿಚಾರದಲ್ಲಿ ಅರ್ಜುನ್ ಸರ್ಜಾ ಅವರಿಗೆ ಜಗ್ಗೇಶ್ ತಮ್ಮ ಸಾಥ್ ನೀಡಿದ್ದು, ''ಅರ್ಜುನ್ ಸರ್ಜಾ ಯಾವುದೋ ಸ್ಲಂ ನಿಂದ ಬಂದಿದ್ದಾರೆ. ಇವರು ದೇವಲೋಕದಿಂದ ಬಂದಿದ್ದಾರೆ.'' ಎನ್ನುವ ಮೂಲಕ ಪ್ರಕಾಶ್ ರೈಗೆ ಮಾತಿನ ಪೆಟ್ಟು ಕೊಟ್ಟಿದ್ದಾರೆ.
ಅಂದಹಾಗೆ, ಪ್ರಕಾಶ್ ರೈ ವಿರುದ್ಧ ಜಗ್ಗೇಶ್ ಮಾತಿನ ಪ್ರಹಾರ ಹೀಗಿದೆ ಓದಿ...
ಪ್ರಕಾಶ್ ರೈ ಯಾವ ತಪ್ಪು ಮಾಡುವುದಿಲ್ಲ
''ಪ್ರಕಾಶ್ ರೈ ಅವರು ಜಂಟಲ್ ಮ್ಯಾನ್. ಜೀವನದಲ್ಲಿ ಅವರು ಯಾವ ತಪ್ಪು ಮಾಡುವುದಿಲ್ಲ. ಅವರು ಒಬ್ಬ ಒಳ್ಳೆಯ ನಟ. ಜೊತೆಗೆ ಈ ದೇಶದ ಮಹಾನ್ ನಾಯಕರು. ತುಂಬ ಜನರ ಕಷ್ಟ ಸುಖಕ್ಕೆ ಆಗಿದ್ದಾರೆ. ಅವರು ಯಾರು ನೊಂದರು ಕೇಳಿಸಿಕೊಳ್ಳುತ್ತಾರೆ.'' - ಜಗ್ಗೇಶ್, ನಟ
ಶ್ರುತಿ ಹರಿಹರನ್ ಮಾಡಿದ್ದು ತಪ್ಪು ಎಂದ ಜಗ್ಗೇಶ್
ಕೆಲವರು ಒಳ್ಳೆ ಸಮಯದಲ್ಲಿ ಮಾತ್ರ ಬರುತ್ತಾರೆ
''ಯಾವುದೋ ಮರಕ್ಕೆ ಏನಾದರೂ ಆದರೆ ಅವರೇ ಇರುತ್ತಾರೆ, ಯಾವುದೋ ಕಟ್ಟಡ ಬಿದ್ದರೂ ಅವರೇ ಇರುತ್ತಾರೆ. ಅವರ ಬಾಯಲ್ಲಿ ಈ ರೀತಿಯ ಮಾತನ್ನು ಕೇಳಿದಾಗ ಸಂತೋಷ ಆಗುತ್ತದೆ. ಕೆಲವರು ಒಳ್ಳೆ ಒಳ್ಳೆಯ ಸಮಯದಲ್ಲಿ ಮಾತ್ರ ಬರುತ್ತಾರೆ. ಇದನ್ನು ಅವರು ಮುಂದುವರೆಸಿದರೆ ಒಳ್ಳೆಯದು.'' - ಜಗ್ಗೇಶ್, ನಟ
ಶ್ರುತಿ ಆರೋಪದ ಬಗ್ಗೆ ಅನುಮಾನ ಮೂಡಿಸುತ್ತಿದೆ ಈ 6 ಅಂಶಗಳು
ಇವರು ದೇವಲೋಕದಿಂದ ಬಂದಿದ್ದಾರೆ
''ಅರ್ಜುನ್ ಸರ್ಜಾ ಯಾವುದೋ ಸ್ಲಂ ನಿಂದ ಬಂದಿದ್ದಾರೆ. ಇವರು ದೇವಲೋಕದಿಂದ ಬಂದಿದ್ದಾರೆ. ಒಬ್ಬ ಕಲಾವಿದ ಇನ್ನೊಬ್ಬ ಕಲಾವಿದನನ್ನು ಬಿಟ್ಟು ಕೊಡಬಾರದು. ಕಲಾವಿದೆ ಇನ್ನೊಬ್ಬ ಕಲಾವಿದೆಯನ್ನು ಬಿಟ್ಟು ಕೊಡಬಾರದು. ಇದು ಒಂದು ಕುಟುಂಬ.'' - ಜಗ್ಗೇಶ್, ನಟ
ಒಬ್ಬರ ಮನಸ್ಸು ನೋವು ಮಾಡಬಾರದು
''ಒಂದು ಅವಕಾಶ ಸಿಕ್ಕಿದೆ. ಮಾಧ್ಯಮದವರು ಬಂದಿದ್ದಾರೆ ಎನ್ನುವ ಕಾರಣಕ್ಕೆ ಬಾಯಿಗೆ ಬಂದ ಹಾಗೆ ಮಾತನಾಡಬಾರದು. ಒಬ್ಬರ ಮನಸ್ಸು ನೋವು ಮಾಡಬಾರದು. ಸದ್ಯ, ಚಿತ್ರರಂಗದ ದೊಡ್ಡವರು ಈ ಸಮಸ್ಯೆಯನ್ನು ಬಗೆ ಹರಿಸುತ್ತಿದ್ದಾರೆ''. - ಜಗ್ಗೇಶ್, ನಟ
ಸಿನಿಮಾ ರಂಗ ಎಂದರೆ ಏನು ಅಂತ ಕೇಳಿಕೊಡಿ
''ನಾನು ಇದನ್ನು ಬೇರೆ ಆಯಾಮದಲ್ಲಿ ಮಾತನಾಡುವುದಿಲ್ಲ. ಚಿತ್ರರಂಗದಲ್ಲಿ ಇದು ಮೂರ್ನಾಲ್ಕು ವರ್ಷಗಳಿಂದ ನಡೆಯುತ್ತಿರುವ ವಿಷಯ. ಚಿತ್ರರಂಗದ ಮುಖ್ಯಸ್ಥರಿಗೆ ನಾನು ಮನವಿ ಮಾಡುತ್ತೇನೆ, ಹೊಸ ಕಲಾವಿದರಿಗೆ ಸಿನಿಮಾ ರಂಗ ಎಂದರೆ ಏನು? ಅಂತ ಹೇಳಿಕೊಡಿ. ನಮ್ಮಲ್ಲಿ ಒಂದು ವ್ಯವಸ್ಥೆ ಆಗಬೇಕು.'' - ಜಗ್ಗೇಶ್, ನಟ
ಅರ್ಜುನ್ ಸರ್ಜಾ ಸುಸಂಸ್ಕೃತ ವ್ಯಕ್ತಿ
''ಅರ್ಜುನ್ ಸರ್ಜಾ ಮಹಾನ್ ಸಾದ್ವಿ, ಸುಸಂಸ್ಕೃತ ವ್ಯಕ್ತಿ. ಏಕವಚನದಲ್ಲಿ ಮಾತನಾಡುವ ವ್ಯಕ್ತಿ ಅವರಲ್ಲ. ಡಾ ರಾಜ್ ಕುಮಾರ್, ಡಾ ವಿಷ್ಣುವರ್ಧನ್ ಬಿಟ್ರೆ ಸರಳತೆ ಮೈಗೂಡಿಸಿಕೊಂಡಿರುವ ಜಂಟಲ್ ಮ್ಯಾನ್. ಅರ್ಜುನ್ ಸರ್ಜಾ ವಿಷ್ಯದಲ್ಲಿ ಶ್ರುತಿ ತಪ್ಪು ಮಾಡಿದ್ದಾರೆ. ಅರ್ಜುನ್ ಸರ್ಜಾ ಅವರ 35 ವರ್ಷದ ಸಿನಿಮಾ ಕೃಷಿಯನ್ನ ಶ್ರುತಿ ಒಂದೇ ಒಂದು ದಿನದಲ್ಲಿ ಹಾಳುಮಾಡಿದ್ದಾರೆ.'' - ಜಗ್ಗೇಶ್, ನಟ