Don't Miss!
- News Karnataka Rain: ಏಪ್ರಿಲ್ 18ರವರೆಗೆ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರಿ ಮಳೆ
- Sports LSG vs DC IPL 2024: ಕೆಎಲ್ ರಾಹುಲ್ ಬಳಗಕ್ಕೆ ಶಾಕ್ ನೀಡಿದ ರಿಷಭ್ ಪಂತ್ ಪಡೆ
- Lifestyle ಫ್ರಿಡ್ಜ್ನಲ್ಲಿ ಮೊಟ್ಟೆ ಬೆಳ್ಳುಳ್ಳಿ ಏಕಿಡಬಾರದು..? ಇಟ್ಟರೆ ಏನಾಗುತ್ತೆ ಗೊತ್ತಾ?
- Automobiles ಯುಗಾದಿಗೆ ಕುಟುಂಬದೊಂದಿಗೆ ದುಬಾರಿ ಬೆಲೆಯ ಹೊಸ ಮರ್ಸಿಡಿಸ್ ಕಾರು ಖರೀದಿಸಿದ ಕ್ಯೂಟ್ ನಟಿ!
- Technology Instagram: ಇನ್ಸ್ಟಾಗ್ರಾಮ್ನಲ್ಲಿ ಹೊಸ ಫೀಚರ್ಸ್! ಇನ್ಮುಂದೆ ಆ ತರಹದ ಫೋಟೋಗಳೆಲ್ಲಾ ಬ್ಲರ್..
- Finance ಉತ್ತಮ ಪ್ಯಾಕೇಜ್ನೊಂದಿಗೆ ಟಾಪ್ ಕಾಲೇಜುಗಳ 10,000 ಫ್ರೆಶರ್ಗಳಿಗೆ ಉದ್ಯೋಗ ನೀಡಲಿದೆ ಟಿಸಿಎಸ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೊರೊನಾ ಬರದಂತೆ ಮೊದಲೇ ಔಷಧ ತೆಗೆದುಕೊಂಡಿದ್ದಾರೆ ಜಗ್ಗೇಶ್!
ಕೊರೊನಾ ವೈರಸ್ ದೇಶದಾದ್ಯಂತ ಪಸರಿಸಿದೆ. ಕರ್ನಾಟಕದಲ್ಲಂತೂ ವೈರಸ್ ತೀವ್ರ ಸ್ವರೂಪದಲ್ಲಿ ಏರಿಕೆಯಾಗುತ್ತಿದೆ.
Recommended Video
ಕೊರೊನಾ ಕ್ಕೆ ಮದ್ದು ಕಂಡುಹಿಡಿಯಲು ವಿಜ್ಞಾನಿಗಳು ಪ್ರತಿದಿನ ಶ್ರಮಿಸುತ್ತಿದ್ದಾರೆ. ಆದರೆ ಈವರೆಗೆ ಯಾವುದೇ ನಿರ್ದಿಷ್ಟ ಔಷಧ ಕಂಡುಹಿಡಿಯಲಾಗಿಲ್ಲ.
ಆದರೆ ಕೊರೊನಾ ಔಷಧ ತಯಾರಿಸಿದ್ದೇವೆ ಎಂದು ಕೆಲವರು ಹೇಳಿದರಾದರೂ ಅದೂ ಸಾಮಾಜಿಕ ಜಾಲತಾಣ ಬಿಟ್ಟು ನಿಜ ರೋಗಿಗಳ ಮೇಲೆ ಪ್ರಯೋಗವಾಗಿ ಯಶಸ್ಸು ಗಳಿಸಲಿಲ್ಲ.
ಆದರೆ ಪ್ರಸ್ತುತ ಆಯುರ್ವೇದ ಔಷಧಿಯನ್ನು ಸರ್ಕಾರವೇ ವಿತರಿಸಲು ನಿಶ್ಚಯಿಸಿದೆ. ಆಯುರ್ವೇದ ವೈದ್ಯ ಗಿರಿಧರ ಕರ್ಜೆ ಅವರು ತಯಾರಿಸಿರುವ ಆಯುರ್ವೇಧ ಔಷಧವನ್ನು ಸಚಿವರೇ ವಿತರಿಸಲು ನಿಶ್ಚಯಿಸಿದ್ದಾರೆ. ಇದನ್ನು ನಟ, ರಾಜಕಾರಣಿ ಜಗ್ಗೇಶ್ ಮೊದಲಿಗೇ ಪಡೆದುಕೊಂಡಿದ್ದರಂತೆ!
ತಿಂಗಳಿಂದಲೂ ಔಷಧ ಸೇವಿಸುತ್ತಿದ್ದಾರೆ ಜಗ್ಗೇಶ್
ಹೌದು, ನಟ, ರಾಜಕಾರಣಿ ಜಗ್ಗೇಶ್ ಅವರು ಇಂದು ಟ್ವೀಟ್ ಮಾಡಿರುವಂತೆ, ಆಯುರ್ವೇದ ವೈದ್ಯ ಡಾ.ಗಿರಿಧರ ಕಜೆ ಅವರು ಜಗ್ಗೇಶ್ ಅವರಿಗೆ ಈ ಹಿಂದೆಯೇ ಕೊರೊನಾ ಗೆ ಆಯುರ್ವೇಧ ಔಷಧ ನೀಡಿದ್ದರಂತೆ, ಕಳೆದ ಒಂದು ತಿಂಗಳಿಂದಲೂ ಆ ಔಷಧವನ್ನು ಅವರು ತೆಗೆದುಕೊಳ್ಳುತ್ತಿದ್ದಾರಂತೆ.
ಟ್ವಿಟ್ಟರ್ನಲ್ಲಿ ಜಗ್ಗೇಶ್ ಮನವಿ
ಜಗ್ಗೇಶ್ ಅವರು ಮನವಿ ಮಾಡಿರುವಂತೆ, ಡಾ.ಗಿರಿಧರ ಕಜೆ ಅವರ ಔಷಧವನ್ನು ಎಲ್ಲರೂ ನಂಬಿಕೆಯಿಂದ ತೆಗೆದುಕೊಳ್ಳಿ, ನಾನೂ ಸಹ ಕಳೆದ ಒಂದು ತಿಂಗಳಿಂದಲೂ ತೆಗೆದುಕೊಳ್ಳುತ್ತಿದ್ದೇನೆ ಎಂದು ಜಗ್ಗೇಶ್ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.
ಕೊರೊನಾಕ್ಕೆ ಕಜೆ ಅವರ ಔಷಧ
ಆಯುರ್ವೇದ ವೈದ್ಯ ಕಜೆ ಅವರು ಕೊರೊನಾ ಕ್ಕೆ ಔಷಧವನ್ನು ಕಂಡುಹಿಡಿದಿದ್ದೇನೆಂದು ಈ ಹಿಂದೆಯೂ ಹೇಳಿದ್ದರು. ಕೆಲವರ ಮೇಲೆ ಪ್ರಯೋಗ ಸಹ ಆಗಿತ್ತು. ಆದರೆ ಇದರ ಬಳಕೆ, ಹಾಗೂ ಇದರ ಪರಿಣಾಮದ ಬಗ್ಗೆ ಕೆಲವರು ಅನುಮಾನವನ್ನು ವ್ಯಕ್ತಪಡಿಸಿದ್ದರು.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪ್ರಯೋಗ, ಯಶಸ್ವಿ
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೆಲವರ ಮೇಲೆ ಕಜೆ ಅವರ ಔಷಧವನ್ನು ಪರೀಕ್ಷಿಸಿ ನೋಡಲಾಗಿತ್ತು, ಆಗ ಆ ಔಷಧ ಸಫಲವಾಯಿತು ಎಂದು ಸ್ವತಃ ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದರು. ಆದರೆ ಕೆಲವು ಅಧಿಕಾರಿಗಳು ಇದನ್ನು ಒಪ್ಪಲಿಲ್ಲವಾದ್ದರಿಂದ ಔಷಧ ಪ್ರಯೋಗ ಮುಂದುವರೆಯಲಿಲ್ಲ.
ಸಚಿವರೇ ಆಯುರ್ವೇದ ಟಿಕ್ ಕೊಡುತ್ತಿದ್ದಾರೆ
ಆದರೆ ಈಗ ಈಶ್ವರಪ್ಪ ಸೇರಿ ಕೆಲವು ಸಚಿವರು ಕಜೆ ಅವರ ಆಯುರ್ವೇದ ಕಿಟ್ ಅನ್ನು ಜನರಿಗೆ ಉಚಿತವಾಗಿ ವಿತರಿಸಲು ಮುಂದಾಗಿದ್ದಾರೆ. ಸರ್ಕಾರವೂ ಮೌನ ಒಪ್ಪಿಗೆಯನ್ನು ಕಜೆ ಅವರ ಔಷಧ ಪ್ರಯೋಗವನ್ನು ಸಾರ್ವಜನಿಕಗೊಳಿಸಲು ನೀಡಿದೆ.