Don't Miss!
- News Neha Hiremath: ನೇಹಾ ಹಿರೇಮಠ್ ಕೊಲೆ ಪ್ರಕರಣವನ್ನು ಎನ್ಐಎ ತನಿಖೆಗೆ ನೀಡಲು ವಿಎಚ್ಪಿ ಒತ್ತಾಯ
- Technology vivo: ವಿವೋ Y200i ಸ್ಮಾರ್ಟ್ಫೋನ್ ಲಾಂಚ್! 12GB RAM.. 6000mAh ಬ್ಯಾಟರಿ
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹುಚ್ಚ ವೆಂಕಟ್ ಮೇಲೆ ಹಲ್ಲೆ ಮಾಡಿದ ಯುವಕರಿಗೆ ಜಗ್ಗೇಶ್ ಪ್ರಶ್ನೆ
ಹುಚ್ಚ ವೆಂಕಟ್ ಶ್ರೀರಂಗಪಟ್ಟಣದಲ್ಲಿ ಪುಂಡಾಟ ನಡೆಸಿ ಹಲ್ಲೆಗೊಳಗಾಗಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಘಟನೆ ನಡೆದಿದೆ.
Recommended Video
ಹುಚ್ಚ ವೆಂಕಟ್ ಮೇಲೆ ಕೆಲವು ಯುವಕರು ಹಲ್ಲೆ ಮಾಡಿರುವ ವಿಡಿಯೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಹುಚ್ಚ ವೆಂಕಟ್ಗೆ ಹಿಗ್ಗಾ-ಮುಗ್ಗಾ ಥಳಿಸಿದ ಜನ
ಕೆಲವು ದಿನಗಳಿಂದ ಶ್ರೀರಂಗಪಟ್ಟಣದಲ್ಲಿರುವ ಹುಚ್ಚ ವೆಂಕಟ್ ಅಲ್ಲಿ ತಮ್ಮ ಹುಚ್ಚಾಟ ನಡೆಸಿದ್ದು, ಜನರ ಮೇಲೆ ದರ್ಪ ತೋರಿ ಒದೆ ತಿಂದಿದ್ದಾರೆ. ಬಹುತೇಕ ಮಾನಸಿಕ ಅಸ್ವಸ್ಥ ಆಗಿರುವ ಹುಚ್ಚಾ ವೆಂಕಟ್ ಮೇಲೆ ಯುವಕರು ಮಾಡಿರುವ ಹಲ್ಲೆಯನ್ನು ಹಿರಿಯ ನಟ ಜಗ್ಗೇಶ್ ಖಂಡಿಸಿದ್ದಾರೆ.
ಸೆಲ್ಫಿ ಪ್ರಚಾರಕ್ಕೆ ನಡವಳಿಕೆ ಸರಿಯೇ?
ತುಂಬ ದುಃಖವಾಯಿತು, ಸೆಲ್ಫಿ ಪ್ರಚಾರಕ್ಕೆ ಈ ನಡವಳಿಕೆ ಎಷ್ಟುಸರಿ? ಇಡಿ ಕರ್ನಾಟಕಕ್ಕೆ ಗೊತ್ತಿದೆ ವೆಂಕಟ್ ವಿಚಿತ್ರ ಖಾಯಿಲೆ ಇಂದ ಬಳಲುತ್ತಿರುವ ಒಬ್ಬ ಮನೋರೋಗಿ ಎಂದು. ಸಾಧ್ಯವಾದರೆ ಆತನಿಗೆ ಸಹಾಯಮಾಡಿ, ಆಗದಿದ್ದರೆ ಪೊಲೀಸರನ್ನು ಕರೆಸಿ ಹೀಗೆ ಮೃಗೀಯವಾಗಿ ಕೈಮಾಡಿ ವೀಡಿಯೊ ತೆಗೆದು ಜಾಲತಾಣಕ್ಕೆ ಹಾಕಿ ಆನಂದಿಸದಿರಿ, ಇದು ಬುದ್ದಿ ಇರುವ ಮನುಜರ ಲಕ್ಷಣವಲ್ಲಾ ಎಂದು ಟ್ವೀಟ್ ಮಾಡಿದ್ದಾರೆ ಜಗ್ಗೇಶ್.
ಹಲ್ಲೆ ಮಾಡಿದ ಯುವರಿಗೆ ಜಗ್ಗೇಶ್ ಪ್ರಶ್ನೆ
ಕೈಮಾಡಿದ ಹುಡುಗರಿಗೆ ನನ್ನ ಪ್ರಶ್ನೆ? ನಿಮ್ಮ ಮನೆಯಲ್ಲಿ ಒಬ್ಬ ಅಣ್ಣನೋ ತಮ್ಮನೋ, ತಂದೆಯೋ , ವೆಂಕಟ್ ರೀತಿ ಮಾನಸಿಕ ರೋಗಿ ಇದ್ದು ಯಾರಾದರು ಅವನ ಮೇಲೆ ಕೈಮಾಡಿದರೆ ನಿಮಗೆ ನೋವಾಗದೇ ಇರದೆ? ಎಂದು ಪ್ರಶ್ನೆ ಮಾಡಿರುವ ಜಗ್ಗೇಶ್, ನನಗೂ ಒಬ್ಬ ಜಗವರಿಯದ ದೇವರಮಗ ತಮ್ಮನಿದ್ದಾನೆ ಅವನ ಮಗುವಂತೆ 55ವರ್ಷದಿಂದ ಸಾಕುತ್ತಿದ್ದೇವೆ. ವೆಂಕಟ್ ಬಂಧುಗಳೆ ಹೃದಯವಿದ್ದರೆ ಅವನಿಗೆ ಸ್ವಾರ್ಥಬಿಟ್ಟು ಸಹಾಯಮಡಿ ಎಂದು ಮನವಿ ಮಾಡಿದ್ದಾರೆ ಜಗ್ಗೇಶ್.
ಶ್ರೀರಂಗಪಟ್ಟಣದಲ್ಲಿ ಕಣ್ಣಿರು ಹಾಕುತ್ತಾ ಸಹಾಯಕ್ಕಾಗಿ ಅಂಗಲಾಚಿದ ಹುಚ್ಚ ವೆಂಕಟ್
ನಟ ಬದುಕಿದ್ದಾಗಲೇ ಆತನ ಕೈ ಹಿಡಿಯಿರಿ: ಜಗ್ಗೇಶ್
ಒಬ್ಬ ನಟ ಸತ್ತಾಗ ಮರುಗದಿರಿ, ಬದುಕಿದ್ದಾಗ ಅವನ ಕೈಹಿಡಿದು ಸಹಾಯಮಾಡಿ, ಮಾಧ್ಯಮಮಿತ್ರರೇ, ದಯಮಾಡಿ ಬದುಕಿರುವ ಕಲಾವಿದನ ಪರವಾಗಿ ನಿಂತು ಸಹಾಯಮಾಡುವ ಎಂದು ನಿಮ್ಮಲ್ಲಿ ವಿನಂತಿಮಾಡುವೆ. ಜೊತೆಗೆ ಮಾನಸಿಕ ಅಸ್ವಸ್ಥ ಮನುಷ್ಯನ ಮೇಲೆ ಕೈಮಾಡುವ ಘಟನೆಗಳನ್ನು ಕೊನೆ ಮಾಡುವ ಎಂದು ಮನವಿ ಮಾಡಿದ್ದಾರೆ.
ರಚಿತಾ ರಾಮ್, ಪ್ರೇಮ್ ಗೆ ಪುಕ್ಕಟೆ ಸಲಹೆ: ಹುಚ್ಚ ವೆಂಕಟ್ ಗೆ ನೆಟ್ಟಿಗರ ಛೀಮಾರಿ.!
ಹುಚ್ಚ ವೆಂಕಟ್ ಅನ್ನು ಹಣಕ್ಕಾಗಿ ಬಳಸಿ ಬಿಸಾಡಿದರು
ಹುಚ್ಚ ವೆಂಕಟ್ ಅನ್ನು ಟಿಆರ್ಪಿಗಾಗಿ ಬಳಸಿಕೊಂಡ ಚಾನೆಲ್ಗಳನ್ನು ತರಾಟೆಗೆ ತೆಗೆದುಕೊಂಡಿರುವ ಜಗ್ಗೇಶ್, ಹಣ ಮಾಡಲೆಂದು ಆತನನ್ನು ಶೋಗಳಿಗೆ ತೆಗೆದುಕೊಂಡು ಬಳಸಿ ಬಿಸಾಡಿದರು ಎಂದು ಅಸಹನೆ ವ್ಯಕ್ತಪಡಿಸಿದ್ದಾರೆ. ತಾವು ಹುಚ್ಚ ವೆಂಕಟ್ ಅನ್ನು 2017 ರಲ್ಲಿ ಒಮ್ಮೆ ಮಾತ್ರವೇ ಭೇಟಿ ಆಗಿರುವುದಾಗಿ ಹೇಳಿದ್ದಾರೆ.
ಮತ್ತೆ ಸುದ್ದಿಗೆ ಬಂದ ಹುಚ್ಚಾ ವೆಂಕಟ್: ಈ ಬಾರಿ ಮಾಡಿದ್ದಾರೆ ಒಳ್ಳೆ ಕೆಲಸ