Don't Miss!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- Lifestyle ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಈತನನ್ನ ಅಂಬಿ ಜಾಗದಲ್ಲಿ ಕೂರಿಸಿ' ಎಂದು ಕೇಳಿಕೊಂಡ ಜಗ್ಗೇಶ್
Recommended Video
ರೆಬೆಲ್ ಸ್ಟಾರ್ ಅಂಬರೀಶ್ ಇದ್ದಾಗ ಅಂಬಿ ನಂತರ ಯಾರೂ ಎಂದು ಯಾರೊಬ್ಬರು ಕೂಡ ಯೋಚನೆ ಮಾಡಿರಲಿಲ್ಲ. ಆದ್ರೀಗ, ಅಂಬಿ ಇಲ್ಲದ ಮನೆಯನ್ನ ನೆನಸಿಕೊಳ್ಳುವುದು ಕಷ್ಟವಾಗ್ತಿದೆ.
ಸ್ಯಾಂಡಲ್ ವುಡ್ ಇಂಡಸ್ಟ್ರಿಯಲ್ಲಿ ಅಂಬರೀಶ್ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆ ಎದ್ದಿದೆ. ಅದಕ್ಕೆ ಹಲವು ಖ್ಯಾತ ನಾಮರ ಹೆಸರುಗಳು ಚರ್ಚೆಯಾಗ್ತಿರುವುದನ್ನ ಕೂಡ ಗಮನಿಸಬಹುದು.
'ರಾಜ್-ವಿಷ್ಣು-ಅಂಬಿ ನಂತರ ಯಾರಿಗೂ ಸ್ಮಾರಕ ಬೇಡ' ಎಂದ ಖ್ಯಾತ ನಟ
ಅರ್ಥಾತ್ ಅಂಬರೀಶ್ ಕಲಾವಿದರ ಸಂಘದ ಅಧ್ಯಕ್ಷರಾಗಿದ್ದರು. ಈಗ ಆ ಸ್ಥಾನವನ್ನ ಯಾರು ಅಲಂಕರಿಸಲಿದ್ದಾರೆ ಎಂಬುದು ಅಷ್ಟೇ ಕುತೂಹಲ ಮೂಡಿಸಿದೆ. ಈ ಮಧ್ಯೆ ಕರ್ನಾಟಕ ಜನರಲ್ಲಿ ನವರಸ ನಾಯಕ ಜಗ್ಗೇಶ್ ಅವರು ಒಂದು ಮನವಿ ಮಾಡಿಕೊಂಡಿದ್ದಾರೆ. ಅಂಬರೀಶ್ ಅವರ ಮೇಲಿನ ಗೌರವಕ್ಕೆ ಬೆಲೆ ಕೊಡುವುದಾದರೇ ಇವರನ್ನ ಅಂಬಿ ಜಾಗಕ್ಕೆ ಕೂರಿಸಿ ಎಂದು ಕೇಳಿಕೊಂಡಿದ್ದಾರೆ. ಮುಂದೆ ಓದಿ.....
ಅಪ್ಪನ ಜಾಗಕ್ಕೆ ಮಗನನ್ನ ತನ್ನಿ
'ಅಪ್ಪನ ಜಾಗಕ್ಕೆ ಮಗನನ್ನ ತನ್ನಿ' ಎಂದು ನಾಡಿನ ಜನತೆಗೆ ನಟ ಜಗ್ಗೇಶ್ ಅವರು ಮನವಿ ಮಾಡಿಕೊಂಡಿದ್ದಾರೆ. ಅಂಬರೀಶ್ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿದ್ದ ಜಗ್ಗೇಶ್ ''ನೀವು ನಿಜವಾಗಲು ಅಂಬರೀಶ್ ಅವರ ಮೇಲೆ ಅಭಿಮಾನವಿಟ್ಟಿದ್ದರೇ ಅವರ ಜಾಗಕ್ಕೆ ಅಭಿಷೇಕ್ ಅವರನ್ನ ತನ್ನಿ'' ಎಂದು ಕೇಳಿಕೊಂಡಿದ್ದಾರೆ.
ದುಃಖದಲ್ಲೂ ಅಮ್ಮನ ಮುಖದಲ್ಲಿ ನಗು ತರಿಸಿದ ಅಂಬಿ ಪುತ್ರ ಅಭಿಷೇಕ್
ಅಂಬಿಯಂತೆ ಅಭಿಯನ್ನ ಬೆಳಸಿ
''ಅಂಬರೀಶ್ ಅವರನ್ನ ಹೇಗೆ ಬೆಳಸಿದರೋ ಅದೇ ರೀತಿ ಅವರ ಮಗನನ್ನ ಬೆಳಸಬೇಕು. ಅಭಿ ಸಿನಿಮಾವನ್ನ ಗೆಲ್ಲಿಸಬೇಕು. ಅವರ ತಂದೆಯ ಹಾಗೆ ಮಗನನ್ನು ಕರೆದುಕೊಂಡು ಹೋಗಬೇಕು'' ಎಂದು ನಾಡಿನ ಜನರಲ್ಲಿ ಜಗ್ಗೇಶ್ ವಿನಂತಿಸಿಕೊಂಡಿದ್ದಾರೆ.
ಅಂಬರೀಶ್ ಬಲಗೈ ಬಂಟ ಸೀನಣ್ಣ ಬಿಚ್ಚಿಟ್ಟ ಅಪರೂಪದ ಸಂಗತಿಗಳು
ಕಲಾಬಂಧುಗಳಿಗೊಂದು ಸಲಹೆ
''ಕಲಾವಿದರಿಗೆ ಸಿನಿಮಾ ಮಾತ್ರ ಮುಖ್ಯವಲ್ಲ. ಅದರಿಂದ ಹೊರಗಡೆ ಭಾವನೆ ಮತ್ತು ಭಾವನಾತ್ಮಕ ಸಂಬಂಧಗಳು ಮುಖ್ಯ. ನಿಮ್ಮಲ್ಲಿರುವ ಅಹಂಗಳನ್ನ ತೆಗೆದು ಹಾಕಿ, ಇಲ್ಲಿ ಯಾರಿಗೂ ಯಾರು ಪೈಪೋಟಿ ಬೇಡ. ಎಲ್ಲರೂ ಒಂದೇ, ಒಂದೇ ತಾಯಿಯ ಮಕ್ಕಳು ಇದ್ದಂತೆ. ಈ ಭಾವನೆಯನ್ನ ಮುಂದುವರಿಸಿಕೊಂಡು ಹೋಗಿ'' ಎಂದು ಜಗ್ಗೇಶ್ ಹೇಳಿದ್ದಾರೆ.
ದರ್ಶನ್ ಅಂಬಿಯ ಮತ್ತೊಬ್ಬ ಮಗ: ಅಂಬಿ ಆಪ್ತ ಸೀನಣ್ಣ ಹೇಳಿದ ಕಥೆ
ಇಂಡಸ್ಟ್ರಿಗೆ 'ಬಾಸ್' ಯಾರು.?
ಹಾಗಿದ್ರೆ, ಕನ್ನಡ ಚಿತ್ರರಂಗದಲ್ಲಿ ಅಂಬಿಯಂತೆ ನಿರ್ಣಯಗಳು, ನಿರ್ಧಾರಗಳು ತೆಗೆದುಕೊಳ್ಳುವುದು ಯಾರು ಎಂಬ ಕುತೂಹಲಕ್ಕೆ ಉತ್ತರವಿಲ್ಲ. ಶಿವರಾಜ್ ಕುಮಾರ್, ರವಿಚಂದ್ರನ್, ಜಗ್ಗೇಶ್, ದೊಡ್ಡಣ್ಣ, ಶ್ರೀನಾಥ್, ಅಶೋಕ್ ಅಂತಹ ಹಿರಿಯ ನಟರ ಮೇಲೆ ಹೆಚ್ಚಿನ ಜವಾಬ್ದಾರಿ ಬೀಳಲಿದೆ.