Don't Miss!
- Finance ಬಾಬಾ ರಾಮ್ದೇವ್ಗೆ ಖುದ್ದು ಹಾಜರಾಗುವಂತೆ ಖಡಕ್ ಸೂಚನೆ ನೀಡಿದ ಸುಪ್ರೀಂ ಕೋರ್ಟ್
- News Bengaluru Peripheral Ring Road: 73 ಕಿಲೋ ಮೀಟರ್ ಯೋಜನೆಗೆ ಬಿಡ್ ಮಾಡಿದ್ದು ಕೇವಲ ಒಂದೇ ಕಂಪನಿ .!-ವೆಚ್ಚ ಎಷ್ಟು?
- Lifestyle ಈರುಳ್ಳಿ ಹಾಕದೆ 3 ಪದಾರ್ಥ ಹಾಕಿ 5 ನಿಮಿಷದಲ್ಲಿ ಚಟ್ನಿ ಮಾಡಬಹುದು.! ಇಲ್ಲಿದೆ ರೆಸಿಪಿ
- Automobiles ಭರ್ಜರಿ ಮೈಲೇಜ್, ಬಹುಬೇಡಿಕೆಯ ಮಾರುತಿ ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್
- Sports ಜೆರ್ಸಿ ನಂ.18, ವಿರಾಟ್ ಕೊಹ್ಲಿ ಜೊತೆಗಿನ ಹೋಲಿಕೆ ಬಗ್ಗೆ ಸ್ಮೃತಿ ಮಂಧಾನ ಹೇಳಿದ್ದೇನು?
- Technology Lenovo: ಲೆನೊವೊದಿಂದ ಎಐ ಚಾಲಿತ ಲೀಜನ್ ಗೇಮಿಂಗ್ ಲ್ಯಾಪ್ಟಾಪ್ಗಳು ಲಾಂಚ್; ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜಗ್ಗೇಶ್-ಪರಿಮಳ ಪ್ರೀತಿ ಎಷ್ಟು ಗಟ್ಟಿಯಾದದ್ದು ಎಂಬುದಕ್ಕೆ ಇದೇ ಸಾಕ್ಷಿ.!
ನವರಸ ನಾಯಕ ಜಗ್ಗೇಶ್ ಮತ್ತು ಅವರ ಪತ್ನಿ ಪರಿಮಳ ಅವರ ಲವ್ ಸ್ಟೋರಿಯ ಬಗ್ಗೆ ಈಗಾಗಲೇ ಹಲವು ವಿಷ್ಯಗಳು ಎಲ್ಲರಿಗೂ ಗೊತ್ತಿದೆ. ಹಲವು ಕಾರ್ಯಕ್ರಮ, ಹಲವು ವೇದಿಕೆಗಳಲ್ಲಿ ಸ್ವತಃ ಜಗ್ಗೇಶ್ ಅವರೇ ತಮ್ಮ ಲವ್ ಸ್ಟೋರಿ ಬಗ್ಗೆ ಮಾತನಾಡಿದ್ದರು.
ಇದೀಗ, ಜಗ್ಗೇಶ್ ಅವರ ಹಳೇ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 35 ವರ್ಷದ ಹಿಂದಿನ ಒಂದು ಘಟನೆಯೊಂದನ್ನ ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ.
ಚಿತ್ರರಂಗದಲ್ಲಿ 37 ವರ್ಷ ಪೂರೈಸಿದ ನವರಸ ನಾಯಕ
ಈ ಫೋಟೋ ಹಿಂದೆ ಒಂದು ಮಧುರವಾದ ನೆನಪು ಅಡಗಿದೆ. ಅದನ್ನ ಸ್ವತಃ ಜಗ್ಗಣ್ಣ ಹೇಳಿಕೊಂಡಿದ್ದಾರೆ. ಮಂತ್ರಾಲಯದ ತುಂಗಭದ್ರ ನದಿಯ ಮಧ್ಯದಲ್ಲಿರುವ ಬಂಡೆಯ ಮೇಲೆ ಜಗ್ಗೇಶ್ ಮತ್ತು ಪರಿಮಳ ಹೆಸರನ್ನ ಕಲ್ಲಿನಿಂದ ಕೆತ್ತಲಾಗಿದೆ. ನದಿಯ ನೀರು ಸ್ವಲ್ಪ ಕಡಿಮೆಯಾದಾಗ ಈ ಸ್ಥಳಕ್ಕೆ ಭೇಟಿ ನೀಡಬಹುದು. ಹೀಗೆ, ಒಮ್ಮೆ ಜಗ್ಗೇಶ್ ಅವರು ಹೋಗಿ ಫೋಟೋ ಕ್ಲಿಕ್ಕಿಸುತ್ತಿರುವ ಫೋಟೋ ಒಂದು ರಿವೀಲ್ ಆಗಿದೆ.
'ಕುರುಕ್ಷೇತ್ರ' ನೋಡಿದ ರಾಕ್ ಲೈನ್ ಏನಂದ್ರು, ಜಗ್ಗೇಶ್ ನುಡಿದ ಭವಿಷ್ಯವೇನು.?
ಈ ಫೋಟೋವನ್ನ ನೋಡಿದ ಜಗ್ಗೇಶ್ ತಮ್ಮ ಹಳೆಯ ನೆನಪನ್ನ ಹಂಚಿಕೊಂಡಿದ್ದಾರೆ. 1983, ನವೆಂಬರ್ 17 ರಂದು ಈ ಹೆಸರನ್ನ ಬರೆಯಲಾಗಿತ್ತು. ಈ ದಾಖಲೆಯ ಪ್ರಕಾರ, ಜಗ್ಗೇಶ್ ಮತ್ತು ಪರಿಮಳ ಪ್ರೀತಿಗೆ 35 ವರ್ಷದ ಸಂಭ್ರಮ.
ಅಂದು ಮಂತ್ರಾಲಯ ಹಳೆ ಊರಿನಂತೆ ಇತ್ತು!ಆಗ ನನಗೆ 20ವರ್ಷ!ಚಿರಾಯು ಆಗಲಿ ನಮ್ಮ ಸಂಬಂಧ ಎಂದು ರಾಯರ ಮಡಿಲಲ್ಲಿ ಅರ್ಧ ದಿನ ಕೂತು ನಾನೆ ಕೈಯಾರೆ ಕತ್ತಿದೆ!ಅಂದು ಪ್ರೇಮಕ್ಕಾಗಿ ಕೆತ್ತಿದ್ದು ಇಂದು ಅಮರ ಹಳೆ ನೆನಪು..
— ನವರಸನಾಯಕ ಜಗ್ಗೇಶ್ (@Jaggesh2) November 17, 2018
ಮಂತ್ರಾಲಯಕ್ಕೆ ಹೋದರೆ ಈಗಲು ಅಲ್ಲಿ ಕುಳಿತು ಅಂದಿನ ಕಾಸಿಲ್ಲದ ಕಷ್ಟದ ದಿನಗಳ ನೆನೆದು ಬರುವೆ!ಧನ್ಯವಾದ ನೆನಪಿಸಿದ್ದಕ್ಕೆ:) https://t.co/L3BHNUvovs
''ಕೆ.ಜಿ.ಎಫ್ ಫ್ಲಾಪ್ ಆಗುತ್ತೆ'' ಅಂದೋರಿಗೆ ಮಾತಲ್ಲೇ ಬಿಸಿ ಮುಟ್ಟಿಸಿದ ನಟ ಜಗ್ಗೇಶ್.!
'ಅಂದು ಮಂತ್ರಾಲಯ ಹಳೆ ಊರಿನಂತೆ ಇತ್ತು. ಆಗ ನನಗೆ 20ವರ್ಷ. ಚಿರಾಯು ಆಗಲಿ ನಮ್ಮ ಸಂಬಂಧ ಎಂದು ರಾಯರ ಮಡಿಲಲ್ಲಿ ಅರ್ಧ ದಿನ ಕೂತು ನಾನೆ ಕೈಯಾರೆ ಕತ್ತಿದೆ. ಅಂದು ಪ್ರೇಮಕ್ಕಾಗಿ ಕೆತ್ತಿದ್ದು ಇಂದು ಅಮರ ಹಳೆ ನೆನಪು.. ಮಂತ್ರಾಲಯಕ್ಕೆ ಹೋದರೆ ಈಗಲು ಅಲ್ಲಿ ಕುಳಿತು ಅಂದಿನ ಕಾಸಿಲ್ಲದ ಕಷ್ಟದ ದಿನಗಳ ನೆನೆದು ಬರುವೆ. ಧನ್ಯವಾದ ನೆನಪಿಸಿದ್ದಕ್ಕೆ'' ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.