Don't Miss!
- Sports ಆರ್ಸಿಬಿ ಸ್ಟಾರ್ ಶ್ರೇಯಾಂಕಾ ಪಾಟೀಲ್ ಬಗ್ಗೆ ನಿಮಗೆಷ್ಟು ಗೊತ್ತು?; ಶಿಕ್ಷಣ, ವಯಸ್ಸು, ಕೌಟುಂಬಿಕ ಹಿನ್ನೆಲೆ ಬಗ್ಗೆ ಮಾಹಿತಿ
- Finance ಲಕ್ಷ ಲಕ್ಷ ಕೋಟಿ ಇದ್ದರೂ ಇದೊಂದು ಕೊರತೆ ಈ ಶ್ರೀಮಂತನಿಗೆ ಕಾಡಿತ್ತು!
- Automobiles 28 ಲಕ್ಷದ ಬೈಕನ್ನು ಲೀಲಾಜಾಲವಾಗಿ ಓಡಿಸಿದ ಲೇಡಿ ಸೂಪರ್ಸ್ಟಾರ್: ಇಂತಹ ಗರ್ಲ್ಫ್ರೆಂಡ್ ಬೇಕೆಂದ ನೆಟ್ಟಿಗರು!
- Technology Samsung: ಸ್ಯಾಮ್ಸಂಗ್ನ ಮುಂಬರುವ ಫೋಲ್ಡಬಲ್ ಫೋನ್ ನೀವು ಊಹಿಸಲಾಗದ ಅಗ್ಗದ ಬೆಲೆಗೆ?
- News ಹನುಮಾನ್ ಚಾಲೀಸಾ ಗಲಾಟೆ: ತೇಜಸ್ವಿ ಸೂರ್ಯನಿಂದ ದ್ವೇಷ ಹರಡುವ ಯತ್ನ- ದಿನೇಶ್ ಗುಂಡೂರಾವ್
- Lifestyle ಬಾಯಲ್ಲಿ ನೀರು ತರಿಸುವ ಮಸಾಲೆ ಮೊಟ್ಟೆ ಬುರ್ಜಿ ಮಾಡೋದು ಹೇಗೆ.? ತುಂಬಾ ಸಿಂಪಲ್ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜಗ್ಗೇಶ್ ಬಗ್ಗೆ ಎನ್.ಟಿ.ಆರ್ ನುಡಿದಿದ್ದ ಭವಿಷ್ಯ ನಿಜವಾಯ್ತು.!
Recommended Video
ನವರಸ ನಾಯಕ ಜಗ್ಗೇಶ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಪೋಷಕ ನಟನಾಗಿ. ಆರಂಭದ ದಿನಗಳಲ್ಲಿ ಖಳನಾಯಕನಾಗಿ, ಹಾಸ್ಯನಟನಾಗಿ ತನ್ನ ಪ್ರತಿಭೆಯ ಸಾಮರ್ಥ್ಯ ಪರಿಚಯಿಸಿದ ಜಗ್ಗೇಶ್ ನಂತರ ಹೀರೋ ಆಗಿದ್ದು ಈಗ ಇತಿಹಾಸ.
ಜಗ್ಗೇಶ್ ಅವರ ಬಗ್ಗೆ ಆಗಾಗಲೇ ತೆಲುಗಿನ ಸೂಪರ್ ಸ್ಟಾರ್ ನಟರೊಬ್ಬರು ಭವಿಷ್ಯ ನುಡಿದಿದ್ದರಂತೆ. ''ಮುಂದಿನ ದಿನದಲ್ಲಿ ನೀನೊಬ್ಬ ದೊಡ್ಡ ನಟನಾಗಿ ಬೆಳೆಯುತ್ತೀಯಾ'' ಎಂದಿದ್ದರಂತೆ. ಅದು ಈಗ ನಿಜವಾಗಿದೆ. ಇಂತಹ ಸಂದರ್ಭದಲ್ಲಿ ಆ ನಟನನ್ನ ಜಗ್ಗೇಶ್ ಅರು ನೆನಪಿಸಿಕೊಂಡಿದ್ದಾರೆ.
ದರ್ಶನ್-ಸುದೀಪ್ ವಿಚಾರದಲ್ಲಿ ಹೊಸ ಭರವಸೆ ಮೂಡಿಸಿದ ಜಗ್ಗೇಶ್ ಟ್ವೀಟ್
ಹೌದು, ಜಗ್ಗೇಶ್ ಅವರ ಬಗ್ಗೆ ಈ ರೀತಿ ಭವಿಷ್ಯ ಹೇಳಿದಿದ್ದು ತೆಲುಗು ಸೂಪರ್ ಸ್ಟಾರ್ ನಟ ಎನ್.ಟಿ.ರಾಮರಾವ್ (NTR). ಈ ಬಗ್ಗೆ ಟ್ವೀಟ್ ಮಾಡಿರುವ ಜಗ್ಗೇಶ್ ಶ್ರೇಷ್ಠ ನಟನ ಬಗ್ಗೆ ಅಭಿಮಾನ ಮೆರೆದಿದ್ದಾರೆ.
NTR ಶ್ರೇಷ್ಟ ನಟ..ಖ್ಯಾತ ನಿರ್ದೇಶಕ ಹಾಗು ಭಾಹುಬಲಿ ಚಿತ್ರದ ನಿರ್ಮಾಪಕ ಕೆ.ರಾಘವೇಂದ್ರ ರಾವ್ ನನ್ನನ್ನು ಅಂದು ಈ ಮಹನೀಯನಿಗೆ ಬೇಟಿಮಾಡಿಸಿದ್ದರು..ಆಗ ಅವರು ಹರಸಿದ್ದು"ಬ್ರದರ್ ಒಕ ರೋಜು ಮೀರು ಗೊಪ್ಪನಟುಡುಗ ಪೆರುಗುತಾರನ್ನಿ ಮಾ ಮನಂ ಚಪ್ಪುತಾವುಂದಿ ಅಂದರು.
— ನವರಸನಾಯಕ ಜಗ್ಗೇಶ್ (@Jaggesh2) June 4, 2018
ಅಂದರೆ ಮುಂದೆ ನೀವು ದೊಡ್ಡನಟ ಆಗುತ್ತೀರಿ ಎಂದು.ಆಗ ನಾನು ಸಣ್ಣಪೋಷಕ ನಟನಾಗಿದ್ದೆ. pic.twitter.com/t99Ax6dXDF
''NTR ಶ್ರೇಷ್ಟ ನಟ..ಖ್ಯಾತ ನಿರ್ದೇಶಕ ಹಾಗೂ ಬಾಹುಬಲಿ ಚಿತ್ರದ ನಿರ್ಮಾಪಕ ಕೆ.ರಾಘವೇಂದ್ರ ರಾವ್ ನನ್ನನ್ನು ಅಂದು ಈ ಮಹನೀಯನಿಗೆ ಭೇಟಿ ಮಾಡಿಸಿದ್ದರು. ಆಗ ಅವರು ಹರಸಿದ್ದು "ಬ್ರದರ್ ಒಕ ರೋಜು ಮೀರು ಗೊಪ್ಪನಟುಡುಗ ಪೆರುಗುತಾರನ್ನಿ ಮಾ ಮನಂ ಚೆಪ್ಪುತಾವುಂದಿ'' ಅಂದರು. ಅಂದರೆ ಮುಂದೆ ನೀವು ದೊಡ್ಡ ನಟ ಆಗುತ್ತೀರಿ ಎಂದು. ಆಗ ನಾನು ಸಣ್ಣ ಪೋಷಕ ನಟನಾಗಿದ್ದೆ.'' ಎಂದು ಹಳೆಯ ಘಟನೆಯನ್ನ ಸ್ಮರಿಸಿಕೊಂಡಿದ್ದಾರೆ.
ಸದ್ಯ ಜಗ್ಗೇಶ್ ಅವರು '8 ಎಂಎಂ' ಚಿತ್ರದಲ್ಲಿ ನಟಿಸಿದ್ದಾರೆ. ಜೀ ಕನ್ನಡದಲ್ಲಿ 'ಕಾಮಿಡಿ ಕಿಲಾಡಿಗಳು-2' ಕಾರ್ಯಕ್ರಮದ ತೀರ್ಪುಗಾರಗಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.