Don't Miss!
- News Mysuru Zoo: ಬೇಸಿಗೆಯಲ್ಲೂ ಮೈಸೂರು ಮೃಗಾಲಯ ಕೂಲ್.. ಕೂಲ್! ಹೇಗೆ ಗೊತ್ತಾ?
- Technology vivo: ವಿವೋ Y200i ಸ್ಮಾರ್ಟ್ಫೋನ್ ಲಾಂಚ್! 12GB RAM.. 6000mAh ಬ್ಯಾಟರಿ
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವರ್ಷದ ಮೊದಲ ದಿನ ರಾಯರ ಮಠದಲ್ಲಿ ಕಳೆದ ನಟ ಜಗ್ಗೇಶ್
ಹೊಸ ವರ್ಷದ ಪ್ರಯುಕ್ತ ಬಹುಪಾಲು ಹೆಚ್ಚು ಜನರು ಮೋಜು ಮಸ್ತಿಯ ಕಡೆ ಗಮನ ಕೊಡ್ತಾರೆ. ಪ್ರವಾಸಗಳಿಗೆ ಹೋಗಿ ಕೇಕ್ ಕತ್ತರಿಸಿ ಸಂಭ್ರಮಿಸುತ್ತಾರೆ. ಆದರೆ, ಹಿರಿಯ ನಟ ಜಗ್ಗೇಶ್ ಹೊಸ ವರ್ಷವನ್ನು ಮಂತ್ರಾಲಯದ ರಾಯರ ಮಠದಲ್ಲಿ ಸ್ವಾಗತಿಸಿದ್ದಾರೆ.
ಸಹಜವಾಗಿ ಹುಟ್ಟುಹಬ್ಬ ಹಾಗೂ ಹೊಸ ವರ್ಷದ ಸಂದರ್ಭಗಳಲ್ಲಿ ಜಗ್ಗೇಶ್ ಅವರು ಮಂತ್ರಾಲಯಕ್ಕೆ ಭೇಟಿ ಕೊಡ್ತಾರೆ. ಸಂಪ್ರದಾಯದಂತೆ ಈ ವರ್ಷವೂ ರಾಯರ ಮಠಕ್ಕೆ ಹೋಗಿ ವರ್ಷದ ಮೊದಲ ದಿನ ಕಳೆದಿದ್ದಾರೆ.
ಅಧಿಕೃತವಾಗಿ ಸೆಟ್ಟೇರಿದೆ ಜಗ್ಗೇಶ್-ಗುರುಪ್ರಸಾದ್ ಜೋಡಿಯ 'ರಂಗನಾಯಕ'
ಈ ಫೋಟೋವನ್ನು ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದು, ''ವರ್ಷದ ಮೊದಲದಿನ ರಾಯರ ಮಠದಲ್ಲಿ ಕಳೆದ ಕ್ಷಣ... ಗುರುಭ್ಯೋನಮಃ..ಶುಭಮಸ್ತು..'' ಎಂದು ಸಂತಸ ಹಂಚಿಕೊಂಡಿದ್ದಾರೆ.
ಮಂತ್ರಾಯಲಯಕ್ಕೆ ಹೋಗುವ ಮಾರ್ಗಮಧ್ಯದಲ್ಲಿ ಆಂಧ್ರ ಪ್ರದೇಶದ ಹೋಟೆಲ್ವೊಂದಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಅಲ್ಲಿದ್ದ ಅಭಿಮಾನಿಗಳು ಜೊತೆ ಕೆಲ ಸಮಯ ಮಾತನಾಡಿರುವ ಫೋಟೋಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹೊಸ ವರ್ಷದ ಆಚರಣೆ ಬಗ್ಗೆಯೂ ನಟ ಜಗ್ಗೇಶ್ ಅಸಮಾಧಾನ ವ್ಯಕ್ತಪಡಿಸಿದ್ದರು. ಪಾಶ್ಚಾತ್ಯ ಸಂಸ್ಕೃತಿಯಿಂದ ಬಂದ ಹೊಸ ವರ್ಷದ ಮೇಲೆ ಇರುವ ಆಸಕ್ತಿ ನಮ್ಮದೇ ಆದ ಯುಗಾದಿ ಹಬ್ಬದಂದು ಆಚರಿಸುವ ಹೊಸ ವರ್ಷಕ್ಕೆ ಇಲ್ಲ ಎಂದು ಹಾಕಲಾಗಿದ್ದ ಪೋಸ್ಟ್ಗೆ ಪ್ರತಿಕ್ರಿಯಿಸಿದ್ದರು.
ಜಗ್ಗೇಶ್ ಅವರ ಆಫೀಸ್ನಲ್ಲಿದೆ ದಿಗ್ಗಜ ನಟರೊಬ್ಬರ ಫೋಟೋ
Recommended Video
''ಪತಂಗ ಬೆಂಕಿಯ ಬಗ್ಗೆ ಅರಿವಿಲ್ಲದೆ ಅದನ್ನ ಪ್ರೀತಿಸಿ ಚುಂಬಿಸಲು ಹೋಗಿ ಅಂತ್ಯವಾಗುತ್ತದೆ. ಆ ಪತಂಗವನ್ನ ಬೆಂಕಿಯ ಬಳಿ ಹೋಗದಂತೆ ತಡೆದರೆ ಅದಕ್ಕೆ ಕೇಳುವ ಅರಿವಿದೆಯೇ? ಆಧುನಿಕ ಜಗತ್ತಿನ ಆಕರ್ಷಣೆ ಸೆಳೆತದಿಂದ ಅನುಭವ, ಬದುಕಿನಭಯ ಭಕ್ತಿ, ಗುರುಹಿರಿಯರ ಬಂಗಾರದಂತ ಮಾತು,ಬದಲಾವಣೆ ತರಬಹುದು! ಹೆಚ್ಚು ಹೇಳಿದರೆ ನಮ್ಮ ದುಡ್ಡು ನಮ್ಮಿಷ್ಟ ಎನ್ನುವರು'' ಎಂದಿದ್ದರು.