twitter
    For Quick Alerts
    ALLOW NOTIFICATIONS  
    For Daily Alerts

    ಗಾಂಧಿನಗರದ ತಂತ್ರಗಾರಿಕೆಯಿಂದ ನನ್ನ ಆಸೆ ಈಡೇರಲಿಲ್ಲ- ಜಗ್ಗೇಶ್

    |

    ಗಾಂಧಿನಗರದ ತಂತ್ರಗಾರಿಕೆಯಿಂದ ನನ್ನ ಆಸೆ ಈಡೇರಿಲಿಲ್ಲ ಎಂದು ನಟ ಜಗ್ಗೇಶ್ ಹೇಳಿದ್ದಾರೆ. 'ಕಾಳಿದಾಸ ಕನ್ನಡ ಮೇಷ್ಟ್ರು' ಸಿನಿಮಾ ಪ್ರೆಸ್ ಮೀಟ್ ನಲ್ಲಿ ಬೇಸರ ವ್ಯಕ್ತ ಪಡಿಸಿದ್ದಾರೆ.

    ಕನ್ನಡ ಭಾಷೆಯ ಬಗ್ಗೆ ಇರುವ 'ಕಾಳಿದಾಸ ಕನ್ನಡ ಮೇಷ್ಟ್ರು' ಸಿನಿಮಾವನ್ನು ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವದ ವಿಶೇಷವಾಗಿ ಬಿಡುಗಡೆ ಮಾಡಬೇಕು ಎನ್ನುವುದು ಜಗ್ಗೇಶ್ ಮತ್ತು ತಂಡದ ಆಸೆ ಆಗಿತ್ತು. ಆದರೆ, ಬೇರೆ ಬೇರೆ ಸಿನಿಮಾಗಳು ಬಿಡುಗಡೆ ದಿನಾಂಕ ನಿಗದಿ ಮಾಡಿದ್ದ, ಕಾರಣ ನಮ್ಮ ಸಿನಿಮಾ ಮುಂದಕ್ಕೆ ಹೋಯ್ತು ಎಂದು ಜಗ್ಗೇಶ್ ತಿಳಿಸಿದ್ದಾರೆ.

    ಸಿನಿಮಾ ಸೇರಲು ಮದ್ರಾಸಿಗೆ ಹೋಗಿ ಭಿಕ್ಷುಕನಂತೆ ಅಲೆಡಾಡಿದ್ದ ಜಗ್ಗೇಶ್ ಕಥೆ ಇಲ್ಲಿದೆ.!ಸಿನಿಮಾ ಸೇರಲು ಮದ್ರಾಸಿಗೆ ಹೋಗಿ ಭಿಕ್ಷುಕನಂತೆ ಅಲೆಡಾಡಿದ್ದ ಜಗ್ಗೇಶ್ ಕಥೆ ಇಲ್ಲಿದೆ.!

    ಗಾಂಧಿನಗರದ ತಂತ್ರಗಾರಿಕೆಯಿಂದ ನಮ್ಮ ಸಿನಿಮಾ ಅಂದು ಬಿಡುಗಡೆಯಾಗದೆ ಇರುವ ಹಾಗೆ ಆಯಿತು. ಇದು ಒಳ್ಳೆಯ ಲಕ್ಷಣ ಅಲ್ಲ ಎಂದು ಜಗ್ಗೇಶ್ ಹೇಳಿಕೊಂಡಿದ್ದಾರೆ. ಈ ರೀತಿ ಮಾಡಿದರೆ, ಹೊಸಬರ ಸಿನಿಮಾಗಳಿಗೆ ಬಹಳ ಕಷ್ಟ ಆಗುತ್ತದೆ. ಈ ಹಿಂದೆ ಚಿತ್ರ ಬಿಡುಗಡೆಗೆ ಒಂದು ಮಾನದಂಡ ಇತ್ತು. ಇಂದು ಚಿತ್ರರಂಗದಲ್ಲಿ ಶಿಸ್ತು ಇಲ್ಲ ಎನ್ನುವುದು ಜಗ್ಗೇಶ್ ವಾದ.

    Jaggesh Spoke About Kalidasa Kannada Mestru Movie Release Issue

    ಇನ್ನು ಸಿನಿಮಾದ ಬಗ್ಗೆ ಮಾತನಾಡಿದ ಅವರು ಇಂದು ರಿಯಾಲಿಟಿ ಇರುವ ಸಿನಿಮಾಗಳು ಗೆಲ್ಲುತ್ತಿವೆ. ನಮ್ಮ ಸಿನಿಮಾ ಕೂಡ ಹಾಗೆಯೇ ಇದೆ. ಒಂದು ಗಂಭೀರ ವಿಷಯವನ್ನು ಕಾಮಿಡಿ ಮೂಲಕ ಹೇಳಿದ್ದೇವೆ. ಕೊನೆಯ ಹತ್ತು ನಿಮಿಷ ಸೀರಿಯಸ್ ಆಗಿದೆ. ವೈಯಕ್ತಿಕವಾಗಿ ನನಗೆ ತುಂಬ ಇಷ್ಟ ಆಗಿದೆ ಎಂದಿದ್ದಾರೆ

    ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹೊಸ ದಾಖಲೆ ಬರೆದ 'ಕಾಳಿದಾಸ ಕನ್ನಡ ಮೇಷ್ಟ್ರು'!ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹೊಸ ದಾಖಲೆ ಬರೆದ 'ಕಾಳಿದಾಸ ಕನ್ನಡ ಮೇಷ್ಟ್ರು'!

    'ಕಾಳಿದಾಸ ಕನ್ನಡ ಮೇಷ್ಟ್ರು' ಸಿನಿಮಾ ನವೆಂಬರ್ 22 ರಂದು ಬಿಡುಗಡೆ ಆಗುತ್ತಿದೆ. ಕವಿರಾಜ್ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ.

    English summary
    Kannada actor Jaggesh spoke about Kalidasa Kannada Mestru' movie release issue
    Wednesday, November 20, 2019, 17:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X