Don't Miss!
- News karnataka Rain: ಇಂದಿನಿಂದ ರಾಜ್ಯದಲ್ಲಿ ಜೋರು ಮಳೆ: ಬೆಂಗಳೂರಿನಲ್ಲಿ ಕೆಲವೆಡೆ ಮಾತ್ರ ವರಣ ಕೃಪೆ ತೋರುವ ಸಾಧ್ಯತೆ- ಐಎಂಡಿ ಅಲರ್ಟ್
- Finance ಮೊಮೊಸ್ ಮಾರುವ ಶಾಪ್ನಿಂದ ಜಾಬ್ ಆಫರ್ ಸಖತ್ ವೈರಲ್! ವೇತನವೆಷ್ಟು ಗೊತ್ತಾ?
- Lifestyle ಬೆಂಗಳೂರಲ್ಲಿ ಮರ ತಬ್ಬಿಕೊಳ್ಳಲು ₹1,500 ಶುಲ್ಕ..! ಇದೇನಿದು ಕಬ್ಬನ್ ಪಾರ್ಕ್ ನಡಿಗೆ..?
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಾಂಧಿನಗರದ ತಂತ್ರಗಾರಿಕೆಯಿಂದ ನನ್ನ ಆಸೆ ಈಡೇರಲಿಲ್ಲ- ಜಗ್ಗೇಶ್
ಗಾಂಧಿನಗರದ ತಂತ್ರಗಾರಿಕೆಯಿಂದ ನನ್ನ ಆಸೆ ಈಡೇರಿಲಿಲ್ಲ ಎಂದು ನಟ ಜಗ್ಗೇಶ್ ಹೇಳಿದ್ದಾರೆ. 'ಕಾಳಿದಾಸ ಕನ್ನಡ ಮೇಷ್ಟ್ರು' ಸಿನಿಮಾ ಪ್ರೆಸ್ ಮೀಟ್ ನಲ್ಲಿ ಬೇಸರ ವ್ಯಕ್ತ ಪಡಿಸಿದ್ದಾರೆ.
ಕನ್ನಡ ಭಾಷೆಯ ಬಗ್ಗೆ ಇರುವ 'ಕಾಳಿದಾಸ ಕನ್ನಡ ಮೇಷ್ಟ್ರು' ಸಿನಿಮಾವನ್ನು ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವದ ವಿಶೇಷವಾಗಿ ಬಿಡುಗಡೆ ಮಾಡಬೇಕು ಎನ್ನುವುದು ಜಗ್ಗೇಶ್ ಮತ್ತು ತಂಡದ ಆಸೆ ಆಗಿತ್ತು. ಆದರೆ, ಬೇರೆ ಬೇರೆ ಸಿನಿಮಾಗಳು ಬಿಡುಗಡೆ ದಿನಾಂಕ ನಿಗದಿ ಮಾಡಿದ್ದ, ಕಾರಣ ನಮ್ಮ ಸಿನಿಮಾ ಮುಂದಕ್ಕೆ ಹೋಯ್ತು ಎಂದು ಜಗ್ಗೇಶ್ ತಿಳಿಸಿದ್ದಾರೆ.
ಸಿನಿಮಾ ಸೇರಲು ಮದ್ರಾಸಿಗೆ ಹೋಗಿ ಭಿಕ್ಷುಕನಂತೆ ಅಲೆಡಾಡಿದ್ದ ಜಗ್ಗೇಶ್ ಕಥೆ ಇಲ್ಲಿದೆ.!
ಗಾಂಧಿನಗರದ ತಂತ್ರಗಾರಿಕೆಯಿಂದ ನಮ್ಮ ಸಿನಿಮಾ ಅಂದು ಬಿಡುಗಡೆಯಾಗದೆ ಇರುವ ಹಾಗೆ ಆಯಿತು. ಇದು ಒಳ್ಳೆಯ ಲಕ್ಷಣ ಅಲ್ಲ ಎಂದು ಜಗ್ಗೇಶ್ ಹೇಳಿಕೊಂಡಿದ್ದಾರೆ. ಈ ರೀತಿ ಮಾಡಿದರೆ, ಹೊಸಬರ ಸಿನಿಮಾಗಳಿಗೆ ಬಹಳ ಕಷ್ಟ ಆಗುತ್ತದೆ. ಈ ಹಿಂದೆ ಚಿತ್ರ ಬಿಡುಗಡೆಗೆ ಒಂದು ಮಾನದಂಡ ಇತ್ತು. ಇಂದು ಚಿತ್ರರಂಗದಲ್ಲಿ ಶಿಸ್ತು ಇಲ್ಲ ಎನ್ನುವುದು ಜಗ್ಗೇಶ್ ವಾದ.
ಇನ್ನು ಸಿನಿಮಾದ ಬಗ್ಗೆ ಮಾತನಾಡಿದ ಅವರು ಇಂದು ರಿಯಾಲಿಟಿ ಇರುವ ಸಿನಿಮಾಗಳು ಗೆಲ್ಲುತ್ತಿವೆ. ನಮ್ಮ ಸಿನಿಮಾ ಕೂಡ ಹಾಗೆಯೇ ಇದೆ. ಒಂದು ಗಂಭೀರ ವಿಷಯವನ್ನು ಕಾಮಿಡಿ ಮೂಲಕ ಹೇಳಿದ್ದೇವೆ. ಕೊನೆಯ ಹತ್ತು ನಿಮಿಷ ಸೀರಿಯಸ್ ಆಗಿದೆ. ವೈಯಕ್ತಿಕವಾಗಿ ನನಗೆ ತುಂಬ ಇಷ್ಟ ಆಗಿದೆ ಎಂದಿದ್ದಾರೆ
ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹೊಸ ದಾಖಲೆ ಬರೆದ 'ಕಾಳಿದಾಸ ಕನ್ನಡ ಮೇಷ್ಟ್ರು'!
'ಕಾಳಿದಾಸ ಕನ್ನಡ ಮೇಷ್ಟ್ರು' ಸಿನಿಮಾ ನವೆಂಬರ್ 22 ರಂದು ಬಿಡುಗಡೆ ಆಗುತ್ತಿದೆ. ಕವಿರಾಜ್ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ.