Don't Miss!
- Finance ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್ಗೆ 1,823 ಕೋಟಿ ರೂ. ನೋಟಿಸ್: ತೆರಿಗೆ ಭಯೋತ್ಪಾದನೆ ನಿಲ್ಲಲೇಬೇಕು ಎಂದ ಪಕ್ಷ
- News Namma Metro Purple Line: ದೈನಂದಿನ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಇಳಿಕೆ, ಕಾರಣಗಳೇನು?
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Technology Tecno: ಬಹುನಿರೀಕ್ಷಿತ ಟೆಕ್ನೋ ಪೋವಾ 6 ಪ್ರೊ ಲಾಂಚ್! 12GB RAM.. 6000mAh ಬ್ಯಾಟರಿ.. ಬೆಲೆ ಎಷ್ಟು?
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಾಧ್ಯಮಗಳಿಗೆ ಧನ್ಯವಾದ ತಿಳಿಸಿದ ಜಗ್ಗೇಶ್
ಸಿದ್ಧಗಂಗಾ ಮಠದ ಶ್ರೀಗಳು, ಡಾ ಶಿವಕುಮಾರ ಸ್ವಾಮೀಜಿ ಅವರ ಅಂತಿಮ ದರ್ಶನ ಪಡೆಯುವುದಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದರು. ಸಮಯದ ಅಭಾವದಿಂದ ಅನೇಕ ಮಂದಿ ದರ್ಶನ ಪಡೆಯಲು ಸಾಧ್ಯವಾಗಲಿಲ್ಲ.
ಆದ್ರೆ, ದೇಶಾದ್ಯಂತ ಅನೇಕ ಭಕ್ತರು ಮನೆಯಲ್ಲೇ ಕೂತು 'ನಡೆದಾಡುವ ದೇವರ' ಅಂತಿಮ ದರ್ಶನ ಪಡೆಯುವಂತೆ ಮಾಡಿದ ಕನ್ನಡ ದೃಶ್ಯ ಮಾಧ್ಯಮಗಳಿಗೆ ಕನ್ನಡ ನಟ ಜಗ್ಗೇಶ್ ಧನ್ಯವಾದ ತಿಳಿಸಿದ್ದಾರೆ.
ನಟ ಜಗ್ಗೇಶ್ ಅವರ ಎರಡು ಕೋರಿಕೆ ನೆರವೇರಿಸಿದ್ದರು ಸಿದ್ದಗಂಗಾ ಶ್ರೀ
''ನಡೆದಾಡುವ ದೇವರ ಅಂತಿಮ ಕ್ರಿಯೇ ನೇರಪ್ರಸಾರ ಮಾಡಿ ನಾವು ಸಾಕ್ಷಾತ್ ಕಣ್ಣೆದುರೆ ನಮ್ಮ ನೆಚ್ಚಿನದೇವರು ಸಿದ್ಧಗಂಗಾ ಶ್ರೀಗಳ ಅಂತ್ಯ ಕಾರ್ಯ ನೋಡುವಂತ ಸೌಭಾಗ್ಯ ಕರುಣಿಸಿದ ನಮ್ಮ ಹೆಮ್ಮೆಯ ಕನ್ನಡದ ದೃಶ್ಯಮಾಧ್ಯಮಗಳ ಮಹನೀಯರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು.. ವರ್ಣಿಸಲಾಗದ ಸಂತೋಷ ಭಾವುಕನಾದೆ ಅವರ ಅಂತಿಮ ಕರ್ತವ್ಯಕಂಡು.. ಓಂ ನಮಃ ಶಿವಾಯಃ..'' ಎಂದು ಟ್ವೀಟ್ ಮಾಡಿದ್ದಾರೆ.
'ಸಿದ್ದಗಂಗಾ ಶ್ರೀಗಳಿಂದ ಈ ವಸ್ತುವನ್ನು ಕಿತ್ತುಕೊಂಡು ಬಂದಿದ್ದೆ' - ಜಗ್ಗೇಶ್
ಇಂದು ಬೆಳಗ್ಗೆ ಶ್ರೀಗಳ ಅಂತಿಮ ದರ್ಶನ ಪಡೆದ ಜಗ್ಗೇಶ್ ಸಿದ್ದಗಂಗಾ ಮಠದ ಜೊತೆಗಿನ ತಮ್ಮ ಬಾಂಧವ್ಯವನ್ನ ಹೇಳಿಕೊಂಡರು. ಅಂದ್ಹಾಗೆ, ಸಿದ್ದಗಂಗಾ ಮಠದಿಂದ ಕೆಲವೇ ಕಿ.ಮೀ ದೂರದಲ್ಲಿರುವ ಜಡೆಮಾಯಸಂದ್ರ ಊರಿನವಾರಿಗುವ ಜಗ್ಗೇಶ್ ಅವರ ಕುಟುಂಬಕ್ಕೆ ಸಿದ್ದಗಂಗಾ ಮಠದ ಜೊತೆಗೆ ಹಿಂದಿನಿಂದಲೂ ನಂಟು. ತಾಯಿಯ ಜೊತೆ ಮಠಕ್ಕೆ ಬಂದು ಶ್ರೀಗಳಿಂದ ವಿಭೂತಿ ಪಡೆದ, ಶ್ರೀಗಳ ಪುಣ್ಯ ಪಾದಕ್ಕೆ ಹಣೆ ಒತ್ತಿದ ನೆನಪುಗಳನ್ನು ಜಗ್ಗೇಶ್ ಅವರು ಮರೆತಿಲ್ಲ.