Don't Miss!
- Finance ಜಗತ್ತಿಗೆ ಭಾರತವೇ ಬಾಸ್, ಅಂತಾರಾಷ್ಟ್ರೀಯ ಹಣಕಾಸು ನಿಧಿ ಹೇಳಿದ್ದು ಏನು?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- News Realme: ಅಗ್ಗದ 5G ಸ್ಮಾರ್ಟ್ಫೋನ್ ಬಿಡುಗಡೆ ರೆಡಿ; ಇದರ ಬೆಲೆ ಎಷ್ಟು ಗೊತ್ತಾ?
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಾಧ್ಯಮಗಳಿಗೆ ಧನ್ಯವಾದ ತಿಳಿಸಿದ ಜಗ್ಗೇಶ್
ಸಿದ್ಧಗಂಗಾ ಮಠದ ಶ್ರೀಗಳು, ಡಾ ಶಿವಕುಮಾರ ಸ್ವಾಮೀಜಿ ಅವರ ಅಂತಿಮ ದರ್ಶನ ಪಡೆಯುವುದಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದರು. ಸಮಯದ ಅಭಾವದಿಂದ ಅನೇಕ ಮಂದಿ ದರ್ಶನ ಪಡೆಯಲು ಸಾಧ್ಯವಾಗಲಿಲ್ಲ.
ಆದ್ರೆ, ದೇಶಾದ್ಯಂತ ಅನೇಕ ಭಕ್ತರು ಮನೆಯಲ್ಲೇ ಕೂತು 'ನಡೆದಾಡುವ ದೇವರ' ಅಂತಿಮ ದರ್ಶನ ಪಡೆಯುವಂತೆ ಮಾಡಿದ ಕನ್ನಡ ದೃಶ್ಯ ಮಾಧ್ಯಮಗಳಿಗೆ ಕನ್ನಡ ನಟ ಜಗ್ಗೇಶ್ ಧನ್ಯವಾದ ತಿಳಿಸಿದ್ದಾರೆ.
ನಟ ಜಗ್ಗೇಶ್ ಅವರ ಎರಡು ಕೋರಿಕೆ ನೆರವೇರಿಸಿದ್ದರು ಸಿದ್ದಗಂಗಾ ಶ್ರೀ
''ನಡೆದಾಡುವ ದೇವರ ಅಂತಿಮ ಕ್ರಿಯೇ ನೇರಪ್ರಸಾರ ಮಾಡಿ ನಾವು ಸಾಕ್ಷಾತ್ ಕಣ್ಣೆದುರೆ ನಮ್ಮ ನೆಚ್ಚಿನದೇವರು ಸಿದ್ಧಗಂಗಾ ಶ್ರೀಗಳ ಅಂತ್ಯ ಕಾರ್ಯ ನೋಡುವಂತ ಸೌಭಾಗ್ಯ ಕರುಣಿಸಿದ ನಮ್ಮ ಹೆಮ್ಮೆಯ ಕನ್ನಡದ ದೃಶ್ಯಮಾಧ್ಯಮಗಳ ಮಹನೀಯರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು.. ವರ್ಣಿಸಲಾಗದ ಸಂತೋಷ ಭಾವುಕನಾದೆ ಅವರ ಅಂತಿಮ ಕರ್ತವ್ಯಕಂಡು.. ಓಂ ನಮಃ ಶಿವಾಯಃ..'' ಎಂದು ಟ್ವೀಟ್ ಮಾಡಿದ್ದಾರೆ.
'ಸಿದ್ದಗಂಗಾ ಶ್ರೀಗಳಿಂದ ಈ ವಸ್ತುವನ್ನು ಕಿತ್ತುಕೊಂಡು ಬಂದಿದ್ದೆ' - ಜಗ್ಗೇಶ್
ಇಂದು ಬೆಳಗ್ಗೆ ಶ್ರೀಗಳ ಅಂತಿಮ ದರ್ಶನ ಪಡೆದ ಜಗ್ಗೇಶ್ ಸಿದ್ದಗಂಗಾ ಮಠದ ಜೊತೆಗಿನ ತಮ್ಮ ಬಾಂಧವ್ಯವನ್ನ ಹೇಳಿಕೊಂಡರು. ಅಂದ್ಹಾಗೆ, ಸಿದ್ದಗಂಗಾ ಮಠದಿಂದ ಕೆಲವೇ ಕಿ.ಮೀ ದೂರದಲ್ಲಿರುವ ಜಡೆಮಾಯಸಂದ್ರ ಊರಿನವಾರಿಗುವ ಜಗ್ಗೇಶ್ ಅವರ ಕುಟುಂಬಕ್ಕೆ ಸಿದ್ದಗಂಗಾ ಮಠದ ಜೊತೆಗೆ ಹಿಂದಿನಿಂದಲೂ ನಂಟು. ತಾಯಿಯ ಜೊತೆ ಮಠಕ್ಕೆ ಬಂದು ಶ್ರೀಗಳಿಂದ ವಿಭೂತಿ ಪಡೆದ, ಶ್ರೀಗಳ ಪುಣ್ಯ ಪಾದಕ್ಕೆ ಹಣೆ ಒತ್ತಿದ ನೆನಪುಗಳನ್ನು ಜಗ್ಗೇಶ್ ಅವರು ಮರೆತಿಲ್ಲ.