ಉತ್ತರ ಕರ್ನಾಟಕ ನೆರೆ ಪರಿಹಾರದ ಬಗ್ಗೆ ಜಗ್ಗೇಶ್ ಟ್ವೀಟ್
ಕೇಂದ್ರ ಸರ್ಕಾರ ಉತ್ತರ ಕರ್ನಾಟಕಕ್ಕೆ ನೆರೆ ಪರಿಹಾರದ ಹಣ ನೀಡುತ್ತಿಲ್ಲ ಎಂಬ ಕಾರಣಕ್ಕೆ ವಿರೋಧ ವ್ಯಕ್ತವಾಗಿದೆ. ಇದೀಗ ಈ ವಿಚಾರವಾಗಿ ನಟ ಹಾಗೂ ಬಿಜೆಪಿ ಮುಖಂಡ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ನೆರೆ ಪರಿಹಾರ ನೀಡಿ ಎಂದೆನೂ ಕೇಳದ ಜಗ್ಗೇಶ್, ''ಯಾವುದೇ ಪರಿಹಾರ ಸರ್ಕಾರದಿಂದ ಬಿಡುಗಡೆ ಆದರೆ, ನೇರವಾಗಿ ಸಂತ್ರಸ್ಥರ ಬ್ಯಾಂಕ್ ಖಾತೆಗೆ ವರ್ಗವಾಗಲಿ'' ಎಂದು ಹೇಳಿದ್ದಾರೆ. ''ಮಧ್ಯವರ್ತಿಗಳು ಹಸಿದ ತೋಳದಂತೆ ಕಾಯುತ್ತಿದ್ದಾರೆ. ಎಚ್ಚರವಾಗಿರಿ ಅಮಾಯಕರೆ. ಅರಿವಿಗಾಗಿ ತಾಲೂಕಿನ ದಂಡಾಧಿಕಾರಿಗಳ ನೇರ ಸಂಪರ್ಕಿಸಿ.'' ಎಂದು ಟ್ವೀಟ್ ಮಾಡಿದ್ದಾರೆ.
''ನನಗಿರುವ ಮಾಹಿತಿ ಪ್ರಕಾರ ಅನೇಕ ಪ್ರೀತಿಯ ಟಿವಿ ಬಂಧುಗಳು ಸಾರ್ವಜನಿಕರು ದೇಶ ವಿದೇಶದಿಂದ ನೂರಾರು ಕೋಟಿ ಸಂತ್ರಸ್ತರಿಗೆ ನಾನಾ ವಿಧವಾಗಿ ದೇಣಿಗೆ ನೀಡಿದ್ದಾರೆ. ಅದು ಎಷ್ಟರಮಟ್ಟಿಗೆ ಸಂತ್ರಸ್ತರಿಗೆ ತಲುಪಿದೆ ಪರೀಕ್ಷಿಸಿ. ನೊಂದವರಿಗಿಂತ ಇಂಥ ಸಮಯದಲ್ಲಿ ಪರರ ಅನ್ನ ಕಸಿದು ತಿನ್ನುವ ಸ್ವಾರ್ಥಿಗಳ ದ್ವನಿ ಹೆಚ್ಚಿರುತ್ತದೆ.'' ಎಂದು ಬರೆದುಕೊಂಡಿದ್ದಾರೆ.

ತಾವು ಕೂಡ ಬಿಜಿಪಿ ಪಕ್ಷದ ಮುಖಂಡನಾಗಿ, ಮಾಜಿ ಶಾಸಕನಾಗಿ, ಎಲ್ಲದಕ್ಕೂ ಹೆಚ್ಚಾಗಿ ಕನ್ನಡದ ಬಗ್ಗೆ ಪ್ರೀತಿ ಹೊಂದಿರುವ ನಟ ಜಗ್ಗೇಶ್ ''ನೆರೆ ಪರಿಹಾರ ನೀಡಬೇಕು'' ಎಂದು ಕೇಂದ್ರ ಸರ್ಕಾರಕ್ಕೆ ಕೇಳಿಲ್ಲ. ಆದರೆ, ತಮ್ಮ ಸಲಹೆ ನೀಡುವ ಮೂಲಕ ಈ ಬಗ್ಗೆ ಮಾತನಾಡಿದ್ದಾರೆ ಅಷ್ಟೇ.


Click it and Unblock the Notifications











