twitter
    For Quick Alerts
    ALLOW NOTIFICATIONS  
    For Daily Alerts

    ಉತ್ತರ ಕರ್ನಾಟಕ ನೆರೆ ಪರಿಹಾರದ ಬಗ್ಗೆ ಜಗ್ಗೇಶ್ ಟ್ವೀಟ್

    |

    ಕೇಂದ್ರ ಸರ್ಕಾರ ಉತ್ತರ ಕರ್ನಾಟಕಕ್ಕೆ ನೆರೆ ಪರಿಹಾರದ ಹಣ ನೀಡುತ್ತಿಲ್ಲ ಎಂಬ ಕಾರಣಕ್ಕೆ ವಿರೋಧ ವ್ಯಕ್ತವಾಗಿದೆ. ಇದೀಗ ಈ ವಿಚಾರವಾಗಿ ನಟ ಹಾಗೂ ಬಿಜೆಪಿ ಮುಖಂಡ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

    ನೆರೆ ಪರಿಹಾರ ನೀಡಿ ಎಂದೆನೂ ಕೇಳದ ಜಗ್ಗೇಶ್, ''ಯಾವುದೇ ಪರಿಹಾರ ಸರ್ಕಾರದಿಂದ ಬಿಡುಗಡೆ ಆದರೆ, ನೇರವಾಗಿ ಸಂತ್ರಸ್ಥರ ಬ್ಯಾಂಕ್ ಖಾತೆಗೆ ವರ್ಗವಾಗಲಿ'' ಎಂದು ಹೇಳಿದ್ದಾರೆ. ''ಮಧ್ಯವರ್ತಿಗಳು ಹಸಿದ ತೋಳದಂತೆ ಕಾಯುತ್ತಿದ್ದಾರೆ. ಎಚ್ಚರವಾಗಿರಿ ಅಮಾಯಕರೆ. ಅರಿವಿಗಾಗಿ ತಾಲೂಕಿನ ದಂಡಾಧಿಕಾರಿಗಳ ನೇರ ಸಂಪರ್ಕಿಸಿ.'' ಎಂದು ಟ್ವೀಟ್ ಮಾಡಿದ್ದಾರೆ.

    ಸರಿಯಾದ ಪಾತ್ರ ಕೊಟ್ಟರೆ ತಪ್ಪದೆ ಬಾಲ್ ಬೌಂಡರಿಗೆ ತಲುಪಿಸುವೆ: ನಟ ಜಗ್ಗೇಶ್ಸರಿಯಾದ ಪಾತ್ರ ಕೊಟ್ಟರೆ ತಪ್ಪದೆ ಬಾಲ್ ಬೌಂಡರಿಗೆ ತಲುಪಿಸುವೆ: ನಟ ಜಗ್ಗೇಶ್

    ''ನನಗಿರುವ ಮಾಹಿತಿ ಪ್ರಕಾರ ಅನೇಕ ಪ್ರೀತಿಯ ಟಿವಿ ಬಂಧುಗಳು ಸಾರ್ವಜನಿಕರು ದೇಶ ವಿದೇಶದಿಂದ ನೂರಾರು ಕೋಟಿ ಸಂತ್ರಸ್ತರಿಗೆ ನಾನಾ ವಿಧವಾಗಿ ದೇಣಿಗೆ ನೀಡಿದ್ದಾರೆ. ಅದು ಎಷ್ಟರಮಟ್ಟಿಗೆ ಸಂತ್ರಸ್ತರಿಗೆ ತಲುಪಿದೆ ಪರೀಕ್ಷಿಸಿ. ನೊಂದವರಿಗಿಂತ ಇಂಥ ಸಮಯದಲ್ಲಿ ಪರರ ಅನ್ನ ಕಸಿದು ತಿನ್ನುವ ಸ್ವಾರ್ಥಿಗಳ ದ್ವನಿ ಹೆಚ್ಚಿರುತ್ತದೆ.'' ಎಂದು ಬರೆದುಕೊಂಡಿದ್ದಾರೆ.

    Jaggesh Tweets About Flood Relief Fund For Karnataka

    ಪೈರಸಿ ವೆಬ್ ಸೈಟ್ ಕುರಿತು ಆಘಾತಕಾರಿ ವಿಷಯ ಬಹಿರಂಗಪಡಿಸಿದ ಜಗ್ಗೇಶ್ಪೈರಸಿ ವೆಬ್ ಸೈಟ್ ಕುರಿತು ಆಘಾತಕಾರಿ ವಿಷಯ ಬಹಿರಂಗಪಡಿಸಿದ ಜಗ್ಗೇಶ್

    ತಾವು ಕೂಡ ಬಿಜಿಪಿ ಪಕ್ಷದ ಮುಖಂಡನಾಗಿ, ಮಾಜಿ ಶಾಸಕನಾಗಿ, ಎಲ್ಲದಕ್ಕೂ ಹೆಚ್ಚಾಗಿ ಕನ್ನಡದ ಬಗ್ಗೆ ಪ್ರೀತಿ ಹೊಂದಿರುವ ನಟ ಜಗ್ಗೇಶ್ ''ನೆರೆ ಪರಿಹಾರ ನೀಡಬೇಕು'' ಎಂದು ಕೇಂದ್ರ ಸರ್ಕಾರಕ್ಕೆ ಕೇಳಿಲ್ಲ. ಆದರೆ, ತಮ್ಮ ಸಲಹೆ ನೀಡುವ ಮೂಲಕ ಈ ಬಗ್ಗೆ ಮಾತನಾಡಿದ್ದಾರೆ ಅಷ್ಟೇ.

    English summary
    Kannada actor Jaggesh tweets about flood relief fund for karnataka.
    Thursday, October 3, 2019, 18:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X