Don't Miss!
- News Toilet Photo Viral: ಕಡಿಮೆ ಖರ್ಚಿನಲ್ಲಿ 'ಲೀಕೆಜ್ ಟ್ಯಾಂಕರ್'ನಿಂದ ಟಾಯ್ಲೆಟ್ ನಿರ್ಮಾಣ: ನೀವೂ ಟ್ರೈ ಮಾಡಿ
- Sports IPL 2024: ಹೈದರಾಬಾದ್-ಡೆಲ್ಲಿ ನಡುವೆ ಮೆಗಾ ಫೈಟ್; ಟಾಸ್, ಆಡುವ 11ರ ಬಳಗದ ವರದಿ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಉತ್ತರ ಕರ್ನಾಟಕ ನೆರೆ ಪರಿಹಾರದ ಬಗ್ಗೆ ಜಗ್ಗೇಶ್ ಟ್ವೀಟ್
ಕೇಂದ್ರ ಸರ್ಕಾರ ಉತ್ತರ ಕರ್ನಾಟಕಕ್ಕೆ ನೆರೆ ಪರಿಹಾರದ ಹಣ ನೀಡುತ್ತಿಲ್ಲ ಎಂಬ ಕಾರಣಕ್ಕೆ ವಿರೋಧ ವ್ಯಕ್ತವಾಗಿದೆ. ಇದೀಗ ಈ ವಿಚಾರವಾಗಿ ನಟ ಹಾಗೂ ಬಿಜೆಪಿ ಮುಖಂಡ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ನೆರೆ ಪರಿಹಾರ ನೀಡಿ ಎಂದೆನೂ ಕೇಳದ ಜಗ್ಗೇಶ್, ''ಯಾವುದೇ ಪರಿಹಾರ ಸರ್ಕಾರದಿಂದ ಬಿಡುಗಡೆ ಆದರೆ, ನೇರವಾಗಿ ಸಂತ್ರಸ್ಥರ ಬ್ಯಾಂಕ್ ಖಾತೆಗೆ ವರ್ಗವಾಗಲಿ'' ಎಂದು ಹೇಳಿದ್ದಾರೆ. ''ಮಧ್ಯವರ್ತಿಗಳು ಹಸಿದ ತೋಳದಂತೆ ಕಾಯುತ್ತಿದ್ದಾರೆ. ಎಚ್ಚರವಾಗಿರಿ ಅಮಾಯಕರೆ. ಅರಿವಿಗಾಗಿ ತಾಲೂಕಿನ ದಂಡಾಧಿಕಾರಿಗಳ ನೇರ ಸಂಪರ್ಕಿಸಿ.'' ಎಂದು ಟ್ವೀಟ್ ಮಾಡಿದ್ದಾರೆ.
ಸರಿಯಾದ ಪಾತ್ರ ಕೊಟ್ಟರೆ ತಪ್ಪದೆ ಬಾಲ್ ಬೌಂಡರಿಗೆ ತಲುಪಿಸುವೆ: ನಟ ಜಗ್ಗೇಶ್
''ನನಗಿರುವ ಮಾಹಿತಿ ಪ್ರಕಾರ ಅನೇಕ ಪ್ರೀತಿಯ ಟಿವಿ ಬಂಧುಗಳು ಸಾರ್ವಜನಿಕರು ದೇಶ ವಿದೇಶದಿಂದ ನೂರಾರು ಕೋಟಿ ಸಂತ್ರಸ್ತರಿಗೆ ನಾನಾ ವಿಧವಾಗಿ ದೇಣಿಗೆ ನೀಡಿದ್ದಾರೆ. ಅದು ಎಷ್ಟರಮಟ್ಟಿಗೆ ಸಂತ್ರಸ್ತರಿಗೆ ತಲುಪಿದೆ ಪರೀಕ್ಷಿಸಿ. ನೊಂದವರಿಗಿಂತ ಇಂಥ ಸಮಯದಲ್ಲಿ ಪರರ ಅನ್ನ ಕಸಿದು ತಿನ್ನುವ ಸ್ವಾರ್ಥಿಗಳ ದ್ವನಿ ಹೆಚ್ಚಿರುತ್ತದೆ.'' ಎಂದು ಬರೆದುಕೊಂಡಿದ್ದಾರೆ.
ಪೈರಸಿ ವೆಬ್ ಸೈಟ್ ಕುರಿತು ಆಘಾತಕಾರಿ ವಿಷಯ ಬಹಿರಂಗಪಡಿಸಿದ ಜಗ್ಗೇಶ್
ತಾವು ಕೂಡ ಬಿಜಿಪಿ ಪಕ್ಷದ ಮುಖಂಡನಾಗಿ, ಮಾಜಿ ಶಾಸಕನಾಗಿ, ಎಲ್ಲದಕ್ಕೂ ಹೆಚ್ಚಾಗಿ ಕನ್ನಡದ ಬಗ್ಗೆ ಪ್ರೀತಿ ಹೊಂದಿರುವ ನಟ ಜಗ್ಗೇಶ್ ''ನೆರೆ ಪರಿಹಾರ ನೀಡಬೇಕು'' ಎಂದು ಕೇಂದ್ರ ಸರ್ಕಾರಕ್ಕೆ ಕೇಳಿಲ್ಲ. ಆದರೆ, ತಮ್ಮ ಸಲಹೆ ನೀಡುವ ಮೂಲಕ ಈ ಬಗ್ಗೆ ಮಾತನಾಡಿದ್ದಾರೆ ಅಷ್ಟೇ.