Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡ ಹೋರಾಟಗಾರರ ಬಂಧನ : ಘಟನೆಯ ಬಗ್ಗೆ ಜಗ್ಗೇಶ್ ಪ್ರತಿಕ್ರಿಯೆ
ಬೆಂಗಳೂರಿನ ಜೈನ ದೇವಸ್ಥಾನದಲ್ಲಿ ಹಾಕಿದ್ದ ಹಿಂದಿ ಭಾಷೆಯ ಬ್ಯಾನರ್ ಅನ್ನು ಹರಿದು ಹಾಕಿರುವ ಕಾರಣಕ್ಕೆ ಕನ್ನಡ ಹೋರಾಟಗಾರರನ್ನು ಬಂಧನ ಮಾಡಲಾಗಿದೆ. ಇತ್ತ ಕೂಡಲೇ ಇವರನ್ನು ಬಿಡುಗಡೆ ಮಾಡಬೇಕು ಎನ್ನುವ ಕೂಗು ಹೆಚ್ಚಾಗುತ್ತಿದೆ.
ಈ ಘಟನೆಯ ಬಗ್ಗೆ ಟ್ವೀಟ್ ಮಾಡಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹೋರಾಟ ಮಾಡಿದವರನ್ನು ರೌಡಿಗಳು ಎಂದು ಕರೆದಿದ್ದರು. ಈ ಕಾರಣ ತೇಜಸ್ವಿ ಸೂರ್ಯ ಟ್ವೀಟ್ ದೊಡ್ಡ ಮಟ್ಟದ ಆಕ್ರೋಶಕ್ಕೆ ಕಾರಣ ಆಗಿದೆ.
ಕನ್ನಡ ಅಭಿಮಾನಿಗಳಲ್ಲಿ ಕಿಡಿ ಹಚ್ಚಿಸಿದ ತೇಜಸ್ವಿ ಸೂರ್ಯ ಟ್ವೀಟ್
ಅಂದಹಾಗೆ, ತೇಜಸ್ವಿ ಸೂರ್ಯ ಬಳಿಕ ಈಗ ನಟ ಹಾಗೂ ಬಿಜೆಪಿ ಪಕ್ಷದ ಮತ್ತೊಬ್ಬ ನಾಯಕ ನಾಯಕ ಜಗ್ಗೇಶ್ ಈ ಸಂಬಂಧ ಟ್ವೀಟ್ ಮಾಡಿದ್ದಾರೆ. ಕರ್ನಾಟಕದಲ್ಲಿ ಕನ್ನಡವೇ ಧರ್ಮ ಎಂದು ಕನ್ನಡ ಧ್ವಜ ಹಾರಿಸಿದ್ದಾರೆ.
ಕರ್ನಾಟಕದಲ್ಲಿ ಕನ್ನಡವೇ ಧರ್ಮ
''ಕರ್ನಾಟಕದಲ್ಲಿ ಕನ್ನಡವೇ ಧರ್ಮ! ಅಂದಮೇಲೆ ಯಾರೆ ಆದರು ಇಲ್ಲಿ ಬಂದಮೇಲೆ ಕನ್ನಡ ಧರ್ಮ ಗೌರವಿಸಿ! ಕನ್ನಡ ನೆಲಕ್ಕೆ ಬಂದ ಎಲ್ಲಾ ಜಾತಿ ಧರ್ಮ ನನ್ನವರು ಎಂದು ಅಪ್ಪುತ್ತದೆ ಕನ್ನಡನಾಡು! ಅಂದ ಮೇಲೆ ಅನ್ಯರು ಯಾರೆ ಬಂದರು ಕನ್ನಡವನ್ನ ಅಪ್ಪಬೇಕು ಅದೆ ನಿಜ ಧರ್ಮ! ಅನ್ನ ನೀರು ನೀಡುವ ನೆಲ ತಾಯಿಮಡಿಲಂತೆ! ಇಲ್ಲಿಇ ರಲು ಬಂದವರು ಇಲ್ಲಿಯವರಾಗಿ! ಸಿರಿಗನ್ನಡಂಗೆಲ್ಗೆ'' ಎಂದು ಜಗ್ಗೇಶ್ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
ಮೋಹಕ ತಾರೆ ರಮ್ಯಾ ಮದುವೆ ಸುದ್ದಿ ಕೇಳಿ ನಟ ಜಗ್ಗೇಶ್ ಹೇಳಿದ್ದೇನು?
ಕನ್ನಡ ಧ್ವಜ ಹಾರಿಸಿದ ಜಗ್ಗೇಶ್
ಜಗ್ಗೇಶ್ ತಾವು ಮಾಡಿರುವ ಟ್ವೀಟ್ ಕನ್ನಡ ಹೋರಾಟಗಾರರ ಬಗ್ಗೆ ಯಾಗಲಿ ಅಥವಾ ತೇಜಸ್ವಿ ಸೂರ್ಯ ಬಗ್ಗೆಯಾಗಲಿ ಎಂದು ಪ್ರಸ್ತಾಪ ಮಾಡಿಲ್ಲ. ಆದರೆ, ಈ ಘಟನೆಯ ಹಿನ್ನಲೆಯಲ್ಲಿಯೇ ಟ್ವೀಟ್ ಮಾಡಿರುವುದು ತಿಳಿಯುತ್ತಿದೆ. ಕರ್ನಾಟಕಕ್ಕೆ ಬಂದ ಮೇಲೆ, ಇಲ್ಲಿನ ಅನ್ನ ತಿಂದ ಮೇಲೆ ಎಲ್ಲರೂ ಕನ್ನಡವನ್ನು ಗೌರವಿಸಬೇಕು ಎನ್ನುವುದು ಜಗ್ಗೇಶ್ ಮಾತಾಗಿದೆ.
ವಿವಾದ ಮಾಡಿಕೊಂಡ ತೇಜಸ್ಟಿ ಸೂರ್ಯ
ಮತ್ತೊಂದು ಕಡೆ ಈ ಬಗ್ಗೆ ಟ್ವೀಟ್ ಮಾಡಿ, ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. ಈ ಬ್ಯಾನರ್ ಹಾರಿದು ಹಾಕಿದವರು ರೌಡಿಗಳು ಎಂದೂ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ಉರ್ದು ಭಾಷೆಯಲ್ಲಿ ಬಳಕೆ ಬಗ್ಗೆ ಯಾರೂ ಏನು ಹೇಳುವುದಿಲ್ಲ ಆದರೆ, ಹಿಂದಿ ಮೇಲೆ ಮಾತ್ರ ದಾಳಿ ನಡೆಸುತ್ತಿದ್ದಾರೆ ಎಂಬ ಅರ್ಥದಲ್ಲಿ ಅವರು ಟ್ವೀಟ್ ಮಾಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸಂಚಲನ
ಕನ್ನಡ ಹೋರಾಟಗಾರರ ಬಂಧನದ ಘಟನೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಸಂಚಲನವನ್ನು ಸೃಷ್ಟಿಯಾಗಿದೆ. #ReleaseKannadaActivists ಹ್ಯಾಶ್ ಟ್ಯಾಗ್ ಮೂಲಕ ಬಂಧನ ಮಾಡಿರುವ ಕನ್ನಡ ಹೋರಾಟಗಾರನ್ನು ಬಿಡುಗಡೆ ಮಾಡಲು ಒತ್ತಡ ತರುತ್ತಿದ್ದಾರೆ. ಅಲ್ಲದೆ ಹೋರಾಟ ಮಾಡಿದವರನ್ನು ರೌಡಿಗಳು ಎಂದ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕಿಡಿಕಾರಿದ್ದಾರೆ.